ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಘೋಷಿಸಿರುವ ₹ 1350 ಕೋಟಿ ಗಾತ್ರದ ಪ್ಯಾಕೇಜ್, ಆತ್ಮನಿರ್ಭರ ಅಭಿಯಾನದಡಿಘೋಷಿಸಲಾಗಿರುವ ₹ 14,000 ಕೋಟಿ ಪ್ಯಾಕೇಜ್ಗೆ ಹೊರತಾಗಿದೆ. ಉಳಿದಂತೆ, ಎಲ್ಲ ಸಾಲಗಳಿಗೆ ಮಾರ್ಚ್ 2021ರವರೆಗೂ ಸ್ಟಾಂಪ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಉದ್ಯಮಿಗಳು, ಯುವಜನರಿಗೆ ನೆರವಾಗಲು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ಬ್ಯಾಂಕ್ಗಳಲ್ಲಿ ವಿಶೇಷ ಡೆಸ್ಕ್ ಆರಂಭಿಸಲಾಗುವುದು ಎಂದು ತಿಳಿಸಿದರು.