<p><strong>ಕೊಚ್ಚಿ:</strong> ಕೇರಳದ ಎರ್ನಾಕುಳಂ ಜಿಲ್ಲೆಯ ನೇರಿಯಮಂಗಳಂ ಅರಣ್ಯ ಮಿತಿಯಲ್ಲಿರುವ ಬುಡಕಟ್ಟು ಜನವಸತಿಯೊಂದರ ತೆರೆದ ಬಾವಿಗೆ ಬಿದ್ದಿದ್ದ ಆನೆಯನ್ನು ಬುಧವಾರದಂದು ರಕ್ಷಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.</p>.<p>ವಾಲರ ಅರಣ್ಯ ಕೇಂದ್ರದ ಪಿನವೂರ್ಕುಡಿ ಬುಡಕಟ್ಟು ಪ್ರದೇಶದಲ್ಲಿ ಇಂದು ಬೆಳಗ್ಗೆ (ಬುಧವಾರ) ಈ ಘಟನೆ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಅಧಿಕಾರಿಗಳ ಪ್ರಕಾರ, 12 ಅಡಿ ಆಳದ ಬಾವಿಗೆ ಬಿದ್ದ ಹೆಣ್ಣಾನೆಯನ್ನು ಕಾರ್ಯಾಚರಣೆಯ ಬಳಿಕ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/technology/viral/kerala-elephant-pays-tribute-to-its-loving-mahout-at-funeral-video-goes-viral-836027.html" itemprop="url">ಮೃತ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ; ಮನ ಮಿಡಿಯುವ ವಿಡಿಯೊ ವೈರಲ್ </a></p>.<p>ಜೆಸಿಬಿ ಬಳಸಿ ಬಾವಿಯ ಬದಿಯಲ್ಲಿ ಮಣ್ಣು ಕೊರೆಯುವ ಮೂಲಕ ಆನೆಗೆ ಹೊರ ಬರಲು ದಾರಿ ಮಾಡಿಕೊಡಲಾಯಿತು. ಸಾಕಷ್ಟು ಪ್ರಯತ್ನದ ಬಳಿಕ ಆನೆ ಹೊರಗೆ ಬರುವಲ್ಲಿ ಯಶಸ್ವಿಯಾಯಿತು.ಬಾವಿಯಿಂದ ಮೇಲೆ ಬಂದ ಆನೆಯು ಕಾಡಿನತ್ತ ಓಡಿ ಹೋಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p>ರಬ್ಬರ್ ತೋಟದಲ್ಲಿರುವ ಬಾವಿಗೆ ಮಂಗಳವಾರದಂದು ಆನೆ ಬಿದ್ದಿರಬಹುದುಎಂದು ಶಂಕಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ:</strong> ಕೇರಳದ ಎರ್ನಾಕುಳಂ ಜಿಲ್ಲೆಯ ನೇರಿಯಮಂಗಳಂ ಅರಣ್ಯ ಮಿತಿಯಲ್ಲಿರುವ ಬುಡಕಟ್ಟು ಜನವಸತಿಯೊಂದರ ತೆರೆದ ಬಾವಿಗೆ ಬಿದ್ದಿದ್ದ ಆನೆಯನ್ನು ಬುಧವಾರದಂದು ರಕ್ಷಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.</p>.<p>ವಾಲರ ಅರಣ್ಯ ಕೇಂದ್ರದ ಪಿನವೂರ್ಕುಡಿ ಬುಡಕಟ್ಟು ಪ್ರದೇಶದಲ್ಲಿ ಇಂದು ಬೆಳಗ್ಗೆ (ಬುಧವಾರ) ಈ ಘಟನೆ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಅಧಿಕಾರಿಗಳ ಪ್ರಕಾರ, 12 ಅಡಿ ಆಳದ ಬಾವಿಗೆ ಬಿದ್ದ ಹೆಣ್ಣಾನೆಯನ್ನು ಕಾರ್ಯಾಚರಣೆಯ ಬಳಿಕ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/technology/viral/kerala-elephant-pays-tribute-to-its-loving-mahout-at-funeral-video-goes-viral-836027.html" itemprop="url">ಮೃತ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ; ಮನ ಮಿಡಿಯುವ ವಿಡಿಯೊ ವೈರಲ್ </a></p>.<p>ಜೆಸಿಬಿ ಬಳಸಿ ಬಾವಿಯ ಬದಿಯಲ್ಲಿ ಮಣ್ಣು ಕೊರೆಯುವ ಮೂಲಕ ಆನೆಗೆ ಹೊರ ಬರಲು ದಾರಿ ಮಾಡಿಕೊಡಲಾಯಿತು. ಸಾಕಷ್ಟು ಪ್ರಯತ್ನದ ಬಳಿಕ ಆನೆ ಹೊರಗೆ ಬರುವಲ್ಲಿ ಯಶಸ್ವಿಯಾಯಿತು.ಬಾವಿಯಿಂದ ಮೇಲೆ ಬಂದ ಆನೆಯು ಕಾಡಿನತ್ತ ಓಡಿ ಹೋಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<p>ರಬ್ಬರ್ ತೋಟದಲ್ಲಿರುವ ಬಾವಿಗೆ ಮಂಗಳವಾರದಂದು ಆನೆ ಬಿದ್ದಿರಬಹುದುಎಂದು ಶಂಕಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>