<p><strong>ಕೊಚ್ಚಿ: </strong>ನಟಿ, ನಿರ್ಮಾಪಕಿ ಆಯಿಷಾ ಸುಲ್ತಾನಾ ತಮ್ಮ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣಗಳ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಲಕ್ಷದ್ವೀಪ ಆಡಳಿತ ಕೇರಳ ಹೈಕೋರ್ಟ್ನಲ್ಲಿ ಮಾಡಿದ ಆರೋಪವನ್ನು, ಆಯಿಷಾ ಪರ ವಕೀಲರು ನಿರಾಕರಿಸಿದ್ದಾರೆ.</p>.<p>‘ಲಕ್ಷದ್ವೀಪ ಆಡಳಿತವು, ಆಯಿಷಾ ಅವರನ್ನು ‘ದೇಶ ದ್ರೋಹಿ‘ಯಾಗಿ ನೋಡಬೇಕೆಂಬ ಆತುರದಲ್ಲಿದೆ‘ ಎಂದು ಆಯಿಷಾ ಪರ ವಕೀಲ ಕೆ.ಎ. ಅಕ್ಬರ್ ಆರೋಪಿಸಿದ್ದಾರೆ.</p>.<p>‘ಆಯಿಷಾ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಪ್ರಕರಣ ದಾಖಲಿಸಿದ ನಂತರ, ತನ್ನ ಮೊಬೈಲ್ ಫೋನ್ನಿಂದ ಎಲ್ಲ ವಿವರಗಳನ್ನು ಅಳಿಸಿ ಹಾಕಿದ್ದಾರೆ ಮತ್ತು ಪೊಲೀಸರು ಕೋರಿದ ದಾಖಲೆಗಳನ್ನು ನೀಡಲು ನಿರಾಕರಿಸಿದ್ದಾರೆ‘ ಎಂದು ಲಕ್ಷದ್ವೀಪ ಸರ್ಕಾರ ನ್ಯಾಯಾಲಯದಲ್ಲಿ ಆರೋಪಿಸಿತು.</p>.<p>ಸರ್ಕಾರದ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಯಿಷಾ ಪರ ವಕೀಲ ಅಕ್ಬರ್, ‘ತನ್ನ ಕಕ್ಷಿದಾರರು, ಫೋನ್ನಿಂದ ಯಾವುದೇ ವಿಷಯವನ್ನು ಅಳಿಸಿಲ್ಲ. ಪ್ರಕರಣ ದಾಖಲಾದ ದಿನವೇ ಪೊಲೀಸರು ಯಾವುದೇ ಪೂರ್ವ ಮಾಹಿತಿ ಅಥವಾ ನಿರ್ದೇಶನವಿಲ್ಲದೆ ಆ ಫೋನ್ ವಶಪಡಿಸಿಕೊಂಡಿದ್ದಾರೆ‘ ಎಂದು ಹೇಳಿದರು.</p>.<p>‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 25ರಂದು ವಶಪಡಿಸಿಕೊಂಡಿರುವ ಆಯಿಷಾ ಅವರ ಫೋನ್ ಮತ್ತು ಅವರ ಸಹೋದರನ ಲ್ಯಾಪ್ಟಾಪ್ ಅನ್ನು ಜುಲೈ 15ರವರೆಗೆ ವಿಚಾರಣಾ ನ್ಯಾಯಾಲಯದಲ್ಲಿ ಹಾಜರುಪಡಿಸಿಲ್ಲ. ಇವು ಯಾರ ವಶದಲ್ಲಿವೆ ಎಂದು ನಮ್ಮ ಕಕ್ಷಿದಾರರಿಗೆ ತಿಳಿದಿಲ್ಲ‘ ಎಂದು ವಾದಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/india-news/madras-high-court-stays-single-judge-order-against-actor-vijay-852165.html" target="_blank">ನಟ ವಿಜಯ್ ಐಶಾರಾಮಿ ಕಾರು ಆಮದು ಪ್ರಕರಣ: ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ: </strong>ನಟಿ, ನಿರ್ಮಾಪಕಿ ಆಯಿಷಾ ಸುಲ್ತಾನಾ ತಮ್ಮ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣಗಳ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಲಕ್ಷದ್ವೀಪ ಆಡಳಿತ ಕೇರಳ ಹೈಕೋರ್ಟ್ನಲ್ಲಿ ಮಾಡಿದ ಆರೋಪವನ್ನು, ಆಯಿಷಾ ಪರ ವಕೀಲರು ನಿರಾಕರಿಸಿದ್ದಾರೆ.</p>.<p>‘ಲಕ್ಷದ್ವೀಪ ಆಡಳಿತವು, ಆಯಿಷಾ ಅವರನ್ನು ‘ದೇಶ ದ್ರೋಹಿ‘ಯಾಗಿ ನೋಡಬೇಕೆಂಬ ಆತುರದಲ್ಲಿದೆ‘ ಎಂದು ಆಯಿಷಾ ಪರ ವಕೀಲ ಕೆ.ಎ. ಅಕ್ಬರ್ ಆರೋಪಿಸಿದ್ದಾರೆ.</p>.<p>‘ಆಯಿಷಾ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಪ್ರಕರಣ ದಾಖಲಿಸಿದ ನಂತರ, ತನ್ನ ಮೊಬೈಲ್ ಫೋನ್ನಿಂದ ಎಲ್ಲ ವಿವರಗಳನ್ನು ಅಳಿಸಿ ಹಾಕಿದ್ದಾರೆ ಮತ್ತು ಪೊಲೀಸರು ಕೋರಿದ ದಾಖಲೆಗಳನ್ನು ನೀಡಲು ನಿರಾಕರಿಸಿದ್ದಾರೆ‘ ಎಂದು ಲಕ್ಷದ್ವೀಪ ಸರ್ಕಾರ ನ್ಯಾಯಾಲಯದಲ್ಲಿ ಆರೋಪಿಸಿತು.</p>.<p>ಸರ್ಕಾರದ ಎಲ್ಲ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಯಿಷಾ ಪರ ವಕೀಲ ಅಕ್ಬರ್, ‘ತನ್ನ ಕಕ್ಷಿದಾರರು, ಫೋನ್ನಿಂದ ಯಾವುದೇ ವಿಷಯವನ್ನು ಅಳಿಸಿಲ್ಲ. ಪ್ರಕರಣ ದಾಖಲಾದ ದಿನವೇ ಪೊಲೀಸರು ಯಾವುದೇ ಪೂರ್ವ ಮಾಹಿತಿ ಅಥವಾ ನಿರ್ದೇಶನವಿಲ್ಲದೆ ಆ ಫೋನ್ ವಶಪಡಿಸಿಕೊಂಡಿದ್ದಾರೆ‘ ಎಂದು ಹೇಳಿದರು.</p>.<p>‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 25ರಂದು ವಶಪಡಿಸಿಕೊಂಡಿರುವ ಆಯಿಷಾ ಅವರ ಫೋನ್ ಮತ್ತು ಅವರ ಸಹೋದರನ ಲ್ಯಾಪ್ಟಾಪ್ ಅನ್ನು ಜುಲೈ 15ರವರೆಗೆ ವಿಚಾರಣಾ ನ್ಯಾಯಾಲಯದಲ್ಲಿ ಹಾಜರುಪಡಿಸಿಲ್ಲ. ಇವು ಯಾರ ವಶದಲ್ಲಿವೆ ಎಂದು ನಮ್ಮ ಕಕ್ಷಿದಾರರಿಗೆ ತಿಳಿದಿಲ್ಲ‘ ಎಂದು ವಾದಿಸಿದರು.</p>.<p><strong>ಇದನ್ನೂ ಓದಿ... <a href="https://www.prajavani.net/india-news/madras-high-court-stays-single-judge-order-against-actor-vijay-852165.html" target="_blank">ನಟ ವಿಜಯ್ ಐಶಾರಾಮಿ ಕಾರು ಆಮದು ಪ್ರಕರಣ: ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>