ಶಾರುಕ್ ಖಾನ್ ಅಭಿನಯದ ಪಠಾಣ್ ಸಿನಿಮಾದ ವಿವಾದ ಸಂಬಂಧವೂ ಪ್ರತಿಕ್ರಿಯೆ ನೀಡಿರುವ ಅವರು, ‘ಬಿಜೆಪಿ ಸರ್ಕಾರದ ಸೆನ್ಸಾರ್ ಮಂಡಳಿಯು ತಕ್ಷಣವೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಬೇಕು. ಯಾರದೇ ಭಾವನೆಗಳಿಗೆ ಧಕ್ಕೆಯಾಗುವ ದೃಶ್ಯಗಳನ್ನು ತೆಗೆದುಹಾಕಬೇಕು. ಯಾವುದೇ ಬಣ್ಣಕ್ಕೆ ಆಗುವ ಅವಮಾನವನ್ನು ಭಾರತ ಸಹಿಸುವುದಿಲ್ಲ. ಕೇಸರಿ ಬಣ್ಣ ಭಾರತದ ಸಂಸ್ಕೃತಿಯ ಗುರುತು. ಸೆನ್ಸಾರ್ ಮಂಡಳಿ ತಕ್ಷಣವೇ ಆಕ್ಷೇಪಾರ್ಹ ದೃಶ್ಯಗಳನ್ನು ತೆಗಿಸಬೇಕು‘ ಎಂದು ಅವರು ನುಡಿದಿದ್ದಾರೆ.