‘ಶಿವರಾಜ್ ಸುಳ್ಳುಗಳನ್ನು ಹೇಳದೇ ಆಹಾರವನ್ನು ಜಿರ್ಣಿಸಿಕೊಳ್ಳಲಾರರು. ಅವರು ಪ್ರತಿ ದಿನ ಹೊಸ ಸುಳ್ಳು ಹೇಳುತ್ತಾರೆ. ಈ ಹಿಂದೆ ಅವರು ಇನ್ನೂ ಜಾರಿಯಾಗದ ಸರಿಸುಮಾರು 15,000 ಘೋಷಣೆಗಳನ್ನು ಮಾಡಿದ್ದಾರೆ. ನೀವು (ರಾಜ್ಯದ ಜನರು) ಅವರು ಮಾಡುತ್ತಿರುವ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕು. ಇದು ನಿಮ್ಮನ್ನು ದಾರಿ ತಪ್ಪಿಸುವ ಹಾಗೂ ನಿಮ್ಮ ಗಮನವನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ತಂತ್ರವಾಗಿದೆ’ ಎಂದು ದೇಪಾಲ್ಪುರದಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿ ಬಳಿಕ ಮಾತನಾಡಿದ್ದಾರೆ.