<p><strong>ಕೋಲ್ಕತ್ತ:</strong> ‘ಅಧಿಕಾರಿ (ಶಿಶಿರ್ ಅಧಿಕಾರಿ ಹಾಗೂ ಸುವೇಂದು ಅಧಿಕಾರಿ) ಕುಟುಂಬದವರ ನಿಜವಾದ ಮುಖವನ್ನು ಗುರುತಿಸುವಲ್ಲಿ ವಿಫಲಳಾಗಿರುವ ನಾನು ಒಬ್ಬ ದೊಡ್ಡ ಕತ್ತೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.</p>.<p>ಕಾಂತಿ ದಕ್ಷಿಣದಲ್ಲಿ ಆಯೋಜಿಸಿದ್ದ ಪ್ರಚಾರ ರ್ಯಾಲಿಯಲ್ಲಿ, ಅಧಿಕಾರಿ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ ಮಮತಾ, ‘ತಪ್ಪು ನನ್ನದೇ. ಅಧಿಕಾರಿ ಕುಟುಂಬವು ₹5,000 ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದೆ ಎಂಬ ವದಂತಿಗಳನ್ನು ಕೇಳಿದ್ದೇನೆ. ನಾನು ಅಧಿಕಾರಕ್ಕೆ ಮರಳಿ ಬರುತ್ತಿದ್ದಂತೆಯೇ ಈ ವಿಚಾರವಾಗಿ ತನಿಖೆ ನಡೆಸುತ್ತೇನೆ’ ಎಂದರು. ‘ಅವರು ₹ 5,000 ಕೋಟಿ ಮೌಲ್ಯದ ಸಾಮ್ರಾಜ್ಯ ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ. ಇದಕ್ಕಿಂತ ಹೆಚ್ಚಿನದೇನೂ ನನಗೆ ಗೊತ್ತಿಲ್ಲ. ಮತಗಳನ್ನು ಖರೀದಿಸಲು ಅವರು ಹಣವನ್ನು ಬಳಸಬಹುದು. ಆದರೆ ಅವರಿಗೆ ಮತ ನೀಡಬೇಡಿ’ ಎಂದು ಮಮತಾ ಮನವಿ ಮಾಡಿದರು.</p>.<p><strong>ಬಿಜೆಪಿ ಸೇರಿದ ಶಿಶಿರ್ ಅಧಿಕಾರಿ</strong></p>.<p>ಟಿಎಂಸಿಯ ಹಿರಿಯ ಮುಖಂಡ, ಸಂಸದ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಅವರ ತಂದೆ ಶಿಶಿರ್ ಅಧಿಕಾರಿ ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.</p>.<p>ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ನಂತರ ಮಾತನಾಡಿದ ಅವರು, ‘ಬಹಳ ಕಷ್ಟಪಟ್ಟು ಟಿಎಂಸಿಯಲ್ಲಿ ನಾವು ಉನ್ನತ ಮಟ್ಟಕ್ಕೆ ಏರಿದ್ದೆವು. ಆದರೆ, ನನ್ನನ್ನು ಮತ್ತು ನನ್ನ ಮಗನನ್ನು ಪಕ್ಷ ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ. ಇದರಿಂದ ಟಿಎಂಸಿಯನ್ನು ತ್ಯಜಿಸುವುದು ಅನಿವಾರ್ಯವಾಗಿದೆ’ ಎಂದರು.</p>.<p>‘ನಮ್ಮಿಬ್ಬರನ್ನು ಪಕ್ಷದಿಂದ ಹೇಗೆ ಹೊರಗೆ ತಳ್ಳಲಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಲಿದೆ. ಬಂಗಾಳದಲ್ಲಿ ಎದುರಾಗುವ ಎಲ್ಲಾ ರಾಜಕೀಯ ದಾಳಿಗಳು ಹಾಗೂ ದೌರ್ಜನ್ಯಗಳನ್ನು ಎದುರಿಸಿ ನಾವು ಯಶಸ್ವಿಯಾಗುತ್ತೇವೆ’ ಎಂದ ಅವರು, ಜೈ ಶ್ರೀರಾಮ್ ಮತ್ತು ಭಾರತ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ‘ಅಧಿಕಾರಿ (ಶಿಶಿರ್ ಅಧಿಕಾರಿ ಹಾಗೂ ಸುವೇಂದು ಅಧಿಕಾರಿ) ಕುಟುಂಬದವರ ನಿಜವಾದ ಮುಖವನ್ನು ಗುರುತಿಸುವಲ್ಲಿ ವಿಫಲಳಾಗಿರುವ ನಾನು ಒಬ್ಬ ದೊಡ್ಡ ಕತ್ತೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.</p>.<p>ಕಾಂತಿ ದಕ್ಷಿಣದಲ್ಲಿ ಆಯೋಜಿಸಿದ್ದ ಪ್ರಚಾರ ರ್ಯಾಲಿಯಲ್ಲಿ, ಅಧಿಕಾರಿ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ ಮಮತಾ, ‘ತಪ್ಪು ನನ್ನದೇ. ಅಧಿಕಾರಿ ಕುಟುಂಬವು ₹5,000 ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದೆ ಎಂಬ ವದಂತಿಗಳನ್ನು ಕೇಳಿದ್ದೇನೆ. ನಾನು ಅಧಿಕಾರಕ್ಕೆ ಮರಳಿ ಬರುತ್ತಿದ್ದಂತೆಯೇ ಈ ವಿಚಾರವಾಗಿ ತನಿಖೆ ನಡೆಸುತ್ತೇನೆ’ ಎಂದರು. ‘ಅವರು ₹ 5,000 ಕೋಟಿ ಮೌಲ್ಯದ ಸಾಮ್ರಾಜ್ಯ ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ. ಇದಕ್ಕಿಂತ ಹೆಚ್ಚಿನದೇನೂ ನನಗೆ ಗೊತ್ತಿಲ್ಲ. ಮತಗಳನ್ನು ಖರೀದಿಸಲು ಅವರು ಹಣವನ್ನು ಬಳಸಬಹುದು. ಆದರೆ ಅವರಿಗೆ ಮತ ನೀಡಬೇಡಿ’ ಎಂದು ಮಮತಾ ಮನವಿ ಮಾಡಿದರು.</p>.<p><strong>ಬಿಜೆಪಿ ಸೇರಿದ ಶಿಶಿರ್ ಅಧಿಕಾರಿ</strong></p>.<p>ಟಿಎಂಸಿಯ ಹಿರಿಯ ಮುಖಂಡ, ಸಂಸದ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಅವರ ತಂದೆ ಶಿಶಿರ್ ಅಧಿಕಾರಿ ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.</p>.<p>ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ನಂತರ ಮಾತನಾಡಿದ ಅವರು, ‘ಬಹಳ ಕಷ್ಟಪಟ್ಟು ಟಿಎಂಸಿಯಲ್ಲಿ ನಾವು ಉನ್ನತ ಮಟ್ಟಕ್ಕೆ ಏರಿದ್ದೆವು. ಆದರೆ, ನನ್ನನ್ನು ಮತ್ತು ನನ್ನ ಮಗನನ್ನು ಪಕ್ಷ ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ. ಇದರಿಂದ ಟಿಎಂಸಿಯನ್ನು ತ್ಯಜಿಸುವುದು ಅನಿವಾರ್ಯವಾಗಿದೆ’ ಎಂದರು.</p>.<p>‘ನಮ್ಮಿಬ್ಬರನ್ನು ಪಕ್ಷದಿಂದ ಹೇಗೆ ಹೊರಗೆ ತಳ್ಳಲಾಗಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಲಿದೆ. ಬಂಗಾಳದಲ್ಲಿ ಎದುರಾಗುವ ಎಲ್ಲಾ ರಾಜಕೀಯ ದಾಳಿಗಳು ಹಾಗೂ ದೌರ್ಜನ್ಯಗಳನ್ನು ಎದುರಿಸಿ ನಾವು ಯಶಸ್ವಿಯಾಗುತ್ತೇವೆ’ ಎಂದ ಅವರು, ಜೈ ಶ್ರೀರಾಮ್ ಮತ್ತು ಭಾರತ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>