ಕಾಂತಿ ದಕ್ಷಿಣದಲ್ಲಿ ಆಯೋಜಿಸಿದ್ದ ಪ್ರಚಾರ ರ್ಯಾಲಿಯಲ್ಲಿ, ಅಧಿಕಾರಿ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ ಮಮತಾ, ‘ತಪ್ಪು ನನ್ನದೇ. ಅಧಿಕಾರಿ ಕುಟುಂಬವು ₹5,000 ಕೋಟಿ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದೆ ಎಂಬ ವದಂತಿಗಳನ್ನು ಕೇಳಿದ್ದೇನೆ. ನಾನು ಅಧಿಕಾರಕ್ಕೆ ಮರಳಿ ಬರುತ್ತಿದ್ದಂತೆಯೇ ಈ ವಿಚಾರವಾಗಿ ತನಿಖೆ ನಡೆಸುತ್ತೇನೆ’ ಎಂದರು. ‘ಅವರು ₹ 5,000 ಕೋಟಿ ಮೌಲ್ಯದ ಸಾಮ್ರಾಜ್ಯ ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ. ಇದಕ್ಕಿಂತ ಹೆಚ್ಚಿನದೇನೂ ನನಗೆ ಗೊತ್ತಿಲ್ಲ. ಮತಗಳನ್ನು ಖರೀದಿಸಲು ಅವರು ಹಣವನ್ನು ಬಳಸಬಹುದು. ಆದರೆ ಅವರಿಗೆ ಮತ ನೀಡಬೇಡಿ’ ಎಂದು ಮಮತಾ ಮನವಿ ಮಾಡಿದರು.