‘ಆನಂದ್ ಹಾಗೂ ನೆರೆಯ ಖೇಡಾ ಜಿಲ್ಲೆಗಳ ದಗ್ಜಿಪುರ, ಕಂಬೊಲಾಜ್, ರಾಮಪುರ ಹಾಗೂ ಭುಮೇಲಾ ಗ್ರಾಮದಲ್ಲಿ ತಲಾ 1.5 ಅಡಿ ಸುತ್ತಳತೆಯ ಟೊಳ್ಳಾದ ಲೋಹದ ಚೆಂಡುಗಳು ಮೇ 12 ರಿಂದ 13ರ ನಡುವೆ ಆಕಾಶದಿಂದ ಬಿದ್ದಿವೆ. ಇದರಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಸದ್ಯ, ಈ ಲೋಹದ ಚೆಂಡುಗಳು ಆನಂದ್ ಪೊಲೀಸ್ ಠಾಣೆಯ ವಶದಲ್ಲಿವೆ’ ಎಂದು ಆನಂದ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ಡಿ. ಜಡೇಜಾ ಅವರು ತಿಳಿಸಿದ್ದಾರೆ.