ಪ್ರತಿಯೊಬ್ಬ ವ್ಯಕ್ತಿ ದೇವರಿಗೆ ವಿಶಿಷ್ಟ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕಾಳಿ ದೇವಿಯನ್ನು ಮಾಂಸ ತಿನ್ನುವ ಮತ್ತು ಮದ್ಯಸ್ವೀಕರಿಸುವ ದೇವತೆಯಾಗಿ ಕಲ್ಪಿಸಿಕೊಳ್ಳಲು ವ್ಯಕ್ತಿಯಾಗಿ ನನಗೆ ಎಲ್ಲ ಹಕ್ಕಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದಾಗಿ ವಿವಾದವು ಮತ್ತಷ್ಟು ಉಲ್ಬಣಗೊಂಡಿತು.