ಬೆಂಗಳೂರು: ಬಿಜೆಪಿ ನಾಯಕರೊಬ್ಬರನ್ನು ಜನನಿಬಿಡ ರಸ್ತೆಯಲ್ಲೇ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ವಿಪಕ್ಷಗಳು ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಮಸ್ಯೆಯನ್ನು ಸರಿಪಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ತಮಿಳುನಾಡಿದ ಪ್ರಮುಖ ವಿಪಕ್ಷ ಎಐಎಡಿಎಂಕೆ ಮತ್ತು ಬಿಜೆಪಿ ಆರೋಪಿಸಿವೆ.
ಮಂಗಳವಾರ ಸಂಜೆ ಅಣ್ಣಾ ಸಾಲೈಯ ಪ್ರಮುಖ ಪ್ರದೇಶದಲ್ಲಿ ಬಿಜೆಪಿ ಎಸ್ಸಿ ಮತ್ತು ಎಸ್ಟಿ ಘಟಕದ ನಾಯಕ ಬಾಲಚಂದರ್ ಅವರನ್ನು ಅಪರಿಚಿತರ ತಂಡ ಹತ್ಯೆ ಮಾಡಿತ್ತು.
ಈ ಹಿಂದಿನ ವರ್ಷಗಳಲ್ಲಿ ತಮಿಳುನಾಡಿನ ಪ್ರಮುಖ ನಗರಗಳಲ್ಲಿ 20 ಕೊಲೆ ಪ್ರಕರಣ ವರದಿಯಾಗಿದ್ದು, ಅದರಲ್ಲಿ ಆರು ಕೊಲೆ ಪ್ರಕರಣಗಳು ಜನನಿಬಿಡ ರಸ್ತೆಯಲ್ಲೇ ನಡೆದಿದೆ. ತಮಿಳುನಾಡು ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಪಕ್ಷಗಳು ಹೇಳಿವೆ.