<p><strong>ಭುವನೇಶ್ವರ:</strong> 14 ದಿನಗಳ ಕೊರೊನಾವೈರಸ್ ಲಾಕ್ಡೌನ್ ಅವಧಿಯಲ್ಲಿ ಬೀದಿಗಳಲ್ಲಿರುವ ಪ್ರಾಣಿಗಳ ಬಗ್ಗೆಯೂ ಅತೀವ ಕಾಳಜಿ ವಹಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್, ಅವುಗಳಿಗೆ ಆಹಾರ ತಿನಿಸಲು ವಿಶೇಷ ಮೊತ್ತವನ್ನು ಮಂಜೂರು ಮಾಡಿದ್ದಾರೆ.</p>.<p>ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಈಗ ರಾಜ್ಯಾದ್ಯಂತ ಲಾಕ್ಡೌನ್ ನಡೆಯುತ್ತಿದೆ. ಆದ್ದರಿಂದ ಬೀದಿಗಳಲ್ಲಿರುವ ನಾಯಿಗಳು, ಹಸುಗಳು ಆಹಾರದಿಂದ ವಂಚಿತವಾಗಿವೆ. ಹಾಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹60 ಲಕ್ಷ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/up-police-launches-probe-into-visit-of-thai-woman-7-days-after-her-death-from-covid-19-829372.html" itemprop="url">ಉ.ಪ್ರದೇಶದಲ್ಲಿ ಕೋವಿಡ್ನಿಂದ ಮೃತಪಟ್ಟ ಥಾಯ್ ಮಹಿಳೆಯ ಭೇಟಿ ಬಗ್ಗೆ ತನಿಖೆ </a></p>.<p>ಐದು ಪುರಸಭೆಗಳು, 48 ನಗರಪಾಲಿಕೆಗಳು, 61 ಎನ್ಎಸಿಗಳಿಗೆ ಮೊತ್ತ ಮಂಜೂರು ಮಾಡಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಆಹಾರವನ್ನು ಒದಗಿಸಲಿವೆ.</p>.<p>ಜಾಜ್ಪುರ ಜಿಲ್ಲೆಯ ಚಾಂದಿಕೋಲೆ ಪ್ರದೇಶದ ಮಹಾವಿನಾಯಕ್ ದೇವಸ್ಥಾನದಲ್ಲಿ ಸ್ಥಳೀಯ ಆಡಳಿತವು ಭಾನುವಾರದಂದು ಕೋತಿಗಳು, ಶ್ವಾನಗಳು ಮತ್ತು ಹಸುಗಳಿಗೆ ಆಹಾರವನ್ನು ವಿತರಿಸಿದೆ ಎಂದು ವರದಿಯೊಂದು ತಿಳಿಸಿದೆ.</p>.<p>ಮೇ 5ರಿಂದ ಪ್ರಾರಂಭವಾದ ಲಾಕ್ಡೌನ್ ಹಂತದಲ್ಲಿ ಬೀದಿಗಳಲ್ಲಿರುವ ಪ್ರಾಣಿಗಳಿಗೆ ಆಹಾರ ನೀಡುವಂತೆ ಜಿಲ್ಲಾಡಳಿತವು ಮನವಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> 14 ದಿನಗಳ ಕೊರೊನಾವೈರಸ್ ಲಾಕ್ಡೌನ್ ಅವಧಿಯಲ್ಲಿ ಬೀದಿಗಳಲ್ಲಿರುವ ಪ್ರಾಣಿಗಳ ಬಗ್ಗೆಯೂ ಅತೀವ ಕಾಳಜಿ ವಹಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್, ಅವುಗಳಿಗೆ ಆಹಾರ ತಿನಿಸಲು ವಿಶೇಷ ಮೊತ್ತವನ್ನು ಮಂಜೂರು ಮಾಡಿದ್ದಾರೆ.</p>.<p>ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಈಗ ರಾಜ್ಯಾದ್ಯಂತ ಲಾಕ್ಡೌನ್ ನಡೆಯುತ್ತಿದೆ. ಆದ್ದರಿಂದ ಬೀದಿಗಳಲ್ಲಿರುವ ನಾಯಿಗಳು, ಹಸುಗಳು ಆಹಾರದಿಂದ ವಂಚಿತವಾಗಿವೆ. ಹಾಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹60 ಲಕ್ಷ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.</p>.<p>ಇದನ್ನೂ ಓದಿ:<a href="https://www.prajavani.net/india-news/up-police-launches-probe-into-visit-of-thai-woman-7-days-after-her-death-from-covid-19-829372.html" itemprop="url">ಉ.ಪ್ರದೇಶದಲ್ಲಿ ಕೋವಿಡ್ನಿಂದ ಮೃತಪಟ್ಟ ಥಾಯ್ ಮಹಿಳೆಯ ಭೇಟಿ ಬಗ್ಗೆ ತನಿಖೆ </a></p>.<p>ಐದು ಪುರಸಭೆಗಳು, 48 ನಗರಪಾಲಿಕೆಗಳು, 61 ಎನ್ಎಸಿಗಳಿಗೆ ಮೊತ್ತ ಮಂಜೂರು ಮಾಡಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಆಹಾರವನ್ನು ಒದಗಿಸಲಿವೆ.</p>.<p>ಜಾಜ್ಪುರ ಜಿಲ್ಲೆಯ ಚಾಂದಿಕೋಲೆ ಪ್ರದೇಶದ ಮಹಾವಿನಾಯಕ್ ದೇವಸ್ಥಾನದಲ್ಲಿ ಸ್ಥಳೀಯ ಆಡಳಿತವು ಭಾನುವಾರದಂದು ಕೋತಿಗಳು, ಶ್ವಾನಗಳು ಮತ್ತು ಹಸುಗಳಿಗೆ ಆಹಾರವನ್ನು ವಿತರಿಸಿದೆ ಎಂದು ವರದಿಯೊಂದು ತಿಳಿಸಿದೆ.</p>.<p>ಮೇ 5ರಿಂದ ಪ್ರಾರಂಭವಾದ ಲಾಕ್ಡೌನ್ ಹಂತದಲ್ಲಿ ಬೀದಿಗಳಲ್ಲಿರುವ ಪ್ರಾಣಿಗಳಿಗೆ ಆಹಾರ ನೀಡುವಂತೆ ಜಿಲ್ಲಾಡಳಿತವು ಮನವಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>