<p><strong>ನವದೆಹಲಿ: </strong>‘ಪಾರದರ್ಶಕತೆ, ಉತ್ತರದಾಯಿತ್ವ, ಭದ್ರತೆ ಮತ್ತು ಮಾನವ ಹಕ್ಕುಗಳ ರಕ್ಷಣೆ‘ಗಾಗಿ ಜೈಲುಗಳಲ್ಲಿ ಕೈದಿಗಳೊಂದಿಗೆ ನಡೆಯುವ ಪ್ರಕ್ರಿಯೆಯನ್ನು ದಾಖಲಿಸಲು ಜೈಲು ಸಿಬ್ಬಂದಿ ಕ್ಯಾಮೆರಾವನ್ನೂ (‘ಬಾಡಿ –ವೊರ್ನ್ – ಕ್ಯಾಮೆರಾ‘– ಬಿಡಬ್ಲ್ಯುಸಿಗಳನ್ನು)ಶೀಘ್ರದಲ್ಲೇ ಧರಿಸಲಿದ್ದಾರೆ.</p>.<p>ಪೊಲೀಸ್ ಚಿಂತಕರ ಚಾವಡಿ ಎಂದು ಕರೆಯುವ ‘ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ‘ ಎಲ್ಲ ರಾಜ್ಯಗಳಿಗೆ ಬಿಡಬ್ಲ್ಯೂಸಿ ಯೋಜನೆಯನ್ನು ಹಂತಹಂತವಾಗಿ ಪ್ರಾರಂಭಿಸಲು ಸೂಚಿಸಿದೆ ಮತ್ತು ಅದರ ಅನುಷ್ಠಾನದ ಬಗ್ಗೆ ಮಾದರಿ ಕಾರ್ಯಾಚರಣೆ ಮಾರ್ಗಸೂಚಿ(ಎಸ್ಒಪಿ)ಯನ್ನು ಪ್ರಕಟಿಸಿದೆ. ಸದ್ಯ ಈ ಕ್ಯಾಮೆರಾಗಳನ್ನು ಪ್ರಮುಖವಾಗಿ ಸಂಚಾರಿ ಪೊಲೀಸರು ಮತ್ತು ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಬಳಸುತ್ತಿದ್ದಾರೆ.</p>.<p>‘ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಹಂತ ಹಂತವಾಗಿ ಬಿಡಬ್ಲ್ಯುಸಿ ಯೋಜನೆಯನ್ನು ಪ್ರಾರಂಭಿಸುವಂತೆ ಶಿಫಾರಸು ಮಾಡಲಾಗಿದೆ. ಆದರೆ, ಪ್ರಾಯೋಗಿಕ ಯೋಜನೆಗಾಗಿ ಎಚ್ಚರಿಕೆಯಿಂದ ಕ್ಷೇತ್ರಗಳನ್ನು ಆಯ್ದುಕೊಳ್ಳಬೇಕು‘ ಎಂದು ಬಿಪಿಆರ್ಡಿ ತಿಳಿಸಿದೆ.</p>.<p>ಈ ಬಿಡಬ್ಲ್ಯುಸಿಗಳು ಕಾರಾಗೃಹದಲ್ಲಿರುವ ಕೈದಿಗಳು ಮತ್ತು ಸಿಬ್ಬಂದಿಗೆ ಸುರಕ್ಷತೆ ಒದಗಿಸುವ ಜತೆಗೆ, ಮಾನವ ಹಕ್ಕುಗಳ ರಕ್ಷಣೆಗೆ ನೆರವಾಗುತ್ತದೆ. ಜತೆಗೆ, ಹೆಚ್ಚುವರಿ ಸಾಕ್ಷ್ಯಗಳನ್ನು ಒದಗಿಸುತ್ತದೆ‘ ಎಂದು ಟಿಪ್ಪಣಿಯಲ್ಲಿ ಉಲ್ಲೆಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘ಪಾರದರ್ಶಕತೆ, ಉತ್ತರದಾಯಿತ್ವ, ಭದ್ರತೆ ಮತ್ತು ಮಾನವ ಹಕ್ಕುಗಳ ರಕ್ಷಣೆ‘ಗಾಗಿ ಜೈಲುಗಳಲ್ಲಿ ಕೈದಿಗಳೊಂದಿಗೆ ನಡೆಯುವ ಪ್ರಕ್ರಿಯೆಯನ್ನು ದಾಖಲಿಸಲು ಜೈಲು ಸಿಬ್ಬಂದಿ ಕ್ಯಾಮೆರಾವನ್ನೂ (‘ಬಾಡಿ –ವೊರ್ನ್ – ಕ್ಯಾಮೆರಾ‘– ಬಿಡಬ್ಲ್ಯುಸಿಗಳನ್ನು)ಶೀಘ್ರದಲ್ಲೇ ಧರಿಸಲಿದ್ದಾರೆ.</p>.<p>ಪೊಲೀಸ್ ಚಿಂತಕರ ಚಾವಡಿ ಎಂದು ಕರೆಯುವ ‘ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ‘ ಎಲ್ಲ ರಾಜ್ಯಗಳಿಗೆ ಬಿಡಬ್ಲ್ಯೂಸಿ ಯೋಜನೆಯನ್ನು ಹಂತಹಂತವಾಗಿ ಪ್ರಾರಂಭಿಸಲು ಸೂಚಿಸಿದೆ ಮತ್ತು ಅದರ ಅನುಷ್ಠಾನದ ಬಗ್ಗೆ ಮಾದರಿ ಕಾರ್ಯಾಚರಣೆ ಮಾರ್ಗಸೂಚಿ(ಎಸ್ಒಪಿ)ಯನ್ನು ಪ್ರಕಟಿಸಿದೆ. ಸದ್ಯ ಈ ಕ್ಯಾಮೆರಾಗಳನ್ನು ಪ್ರಮುಖವಾಗಿ ಸಂಚಾರಿ ಪೊಲೀಸರು ಮತ್ತು ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಬಳಸುತ್ತಿದ್ದಾರೆ.</p>.<p>‘ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಹಂತ ಹಂತವಾಗಿ ಬಿಡಬ್ಲ್ಯುಸಿ ಯೋಜನೆಯನ್ನು ಪ್ರಾರಂಭಿಸುವಂತೆ ಶಿಫಾರಸು ಮಾಡಲಾಗಿದೆ. ಆದರೆ, ಪ್ರಾಯೋಗಿಕ ಯೋಜನೆಗಾಗಿ ಎಚ್ಚರಿಕೆಯಿಂದ ಕ್ಷೇತ್ರಗಳನ್ನು ಆಯ್ದುಕೊಳ್ಳಬೇಕು‘ ಎಂದು ಬಿಪಿಆರ್ಡಿ ತಿಳಿಸಿದೆ.</p>.<p>ಈ ಬಿಡಬ್ಲ್ಯುಸಿಗಳು ಕಾರಾಗೃಹದಲ್ಲಿರುವ ಕೈದಿಗಳು ಮತ್ತು ಸಿಬ್ಬಂದಿಗೆ ಸುರಕ್ಷತೆ ಒದಗಿಸುವ ಜತೆಗೆ, ಮಾನವ ಹಕ್ಕುಗಳ ರಕ್ಷಣೆಗೆ ನೆರವಾಗುತ್ತದೆ. ಜತೆಗೆ, ಹೆಚ್ಚುವರಿ ಸಾಕ್ಷ್ಯಗಳನ್ನು ಒದಗಿಸುತ್ತದೆ‘ ಎಂದು ಟಿಪ್ಪಣಿಯಲ್ಲಿ ಉಲ್ಲೆಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>