‘ಮೇ 22ರಂದು ಪರಮ್ಜಿತ್ ಸಿಂಗ್ ಮತ್ತು ಇತರ ಐವರು ನನ್ನನ್ನು ಅಪಹರಿಸಿ, ಅಲ್ಫಾ ನಗರದಲ್ಲಿರುವ ಅವರ ಮನೆಗೆ ಕರೆದೊಯ್ದು, ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ,ಆಹಾರ ಮತ್ತು ನೀರು ಕೊಡದೆ,ಸುಮಾರು 31 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದರು’ ಎಂದು ರಾಧೇಶ್ಯಾಮ್ ಮೇಘವಾಲ್ ಎಂಬುವವರು ಮೇ 24ರಂದು ಪೊಲೀಸರಿಗೆ ದೂರು ನೀಡಿದ್ದಾರೆ.