<p><strong>ಉತ್ತರಕಾಶಿ</strong>: ಉತ್ತರಾಖಂಡದ ಬಾರ್ಕೊಟ್ ಪಟ್ಟಣದಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸಿಲುಕಿದ್ದ 12 ಜನರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಗುರುವಾರ ರಕ್ಷಿಸಿದೆ.</p>.<p>‘ಉತ್ತರಕಾಶಿ ಜಿಲ್ಲೆಯ ಬಾರ್ಕೊಟ್ ಪಟ್ಟಣದ ರಸ್ತೆಯಲ್ಲಿ ಭಾರಿ ಹಿಮಪಾತ ಸಂಭವಿಸಿದ್ದ ಕಾರಣ 3–4 ವಾಹನಗಳು ಮತ್ತು 12 ಜನರು ಸಿಲುಕಿದ್ದರು. ಹಿಮಪಾತದಿಂದಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಎಸ್ಡಿಆರ್ಎಫ್ ಮಾಹಿತಿ ನೀಡಿದೆ.</p>.<p>ಸದ್ಯ ರಕ್ಷಿಸಲಾಗಿರುವ 12 ಜನರು ಮದುವೆ ಸಮಾರಂಭದ ಸಲುವಾಗಿ ಅಗೋಡಾದಿಂದ ಓಜ್ರಿಗೆ ತೆರಳುತ್ತಿದ್ದರು ಎಂದೂ ಎಸ್ಡಿಆರ್ಎಫ್ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉತ್ತರಕಾಶಿ</strong>: ಉತ್ತರಾಖಂಡದ ಬಾರ್ಕೊಟ್ ಪಟ್ಟಣದಲ್ಲಿ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸಿಲುಕಿದ್ದ 12 ಜನರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಗುರುವಾರ ರಕ್ಷಿಸಿದೆ.</p>.<p>‘ಉತ್ತರಕಾಶಿ ಜಿಲ್ಲೆಯ ಬಾರ್ಕೊಟ್ ಪಟ್ಟಣದ ರಸ್ತೆಯಲ್ಲಿ ಭಾರಿ ಹಿಮಪಾತ ಸಂಭವಿಸಿದ್ದ ಕಾರಣ 3–4 ವಾಹನಗಳು ಮತ್ತು 12 ಜನರು ಸಿಲುಕಿದ್ದರು. ಹಿಮಪಾತದಿಂದಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಎಸ್ಡಿಆರ್ಎಫ್ ಮಾಹಿತಿ ನೀಡಿದೆ.</p>.<p>ಸದ್ಯ ರಕ್ಷಿಸಲಾಗಿರುವ 12 ಜನರು ಮದುವೆ ಸಮಾರಂಭದ ಸಲುವಾಗಿ ಅಗೋಡಾದಿಂದ ಓಜ್ರಿಗೆ ತೆರಳುತ್ತಿದ್ದರು ಎಂದೂ ಎಸ್ಡಿಆರ್ಎಫ್ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>