ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಕುರಿತು ಪಕ್ಷದಲ್ಲಿ ಚರ್ಚೆ ನಡೆಯುತ್ತಿವೆ. ಸಮಯ ಬಂದಾಗ ಘೋಷಣೆ ಮಾಡಲಾಗುತ್ತದೆ. ಇಡೀ ಪಂಜಾಬ್ ಆ ವ್ಯಕ್ತಿ ಕುರಿತು ಹೆಮ್ಮೆ ಪಡುತ್ತದೆ. ಆ ವ್ಯಕ್ತಿ ನಿಶ್ಚಿತವಾಗಿ ಸಿಖ್ ಸಮುದಾಯದವರೇ ಆಗಿರುತ್ತಾರೆ’ ಎಂದರು. ರಾಜ್ಯದಲ್ಲಿ ಸದ್ಯದ ಆಡಳಿದಿಂದ ಜನರು ಬೇಸತ್ತಿದ್ದಾರೆ. ಅವರು ಹೊಸ ಬಗೆಯ ನಾಯಕತ್ವವನ್ನು ನಿರೀಕ್ಷಿಸುತ್ತಿದ್ದಾರೆ ಎಂದರು.