ನಿಮ್ಹಾನ್ಸ್-ನರವಿಜ್ಞಾನ ಸಂಸ್ಥೆಯ ‘ಸಂವಾದ್’ ('SAMVAD- Support, Advocacy, & Mental health interventions for children in Vulnerable circumstances and Distress) ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ‘ಸಂವಾದ್’ನಿಂದ ದೇಶದ ಕರ್ತವ್ಯನಿರತ ಒಂದು ಲಕ್ಷ ಜನರಿಗೆ ನೆರವು ಸಿಕ್ಕಿದೆ. ಮಕ್ಕಳ ರಕ್ಷಣೆ ಮತ್ತು ಮಾನಸಿಕ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಪಂಚಾಯತಿ ರಾಜ್ ಇಲಾಖೆಯೊಂದಿಗೆ ಸೇರಿ ‘ಸಂವಾದ್’ ಕೆಲಸ ಮಾಡುತ್ತಿದೆ,‘ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ.