<p><strong>ನವದೆಹಲಿ</strong>: ಇದೇ ವರ್ಷ ಜನವರಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಲಡಾಖ್ ಮೂಲದ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ವಿಶೇಷ ತಂಡವು ಲಡಾಖ್ನ ಕಾರ್ಗಿಲ್ನಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಿ ರಾಷ್ಟ್ರ ರಾಜಧಾನಿಗೆ ಕರೆತಂದಿದ್ದಾರೆ.</p>.<p>ಬಂಧಿತರನ್ನು ಕಾರ್ಗಿಲ್ನ ಥಾಂಗ್ ಗ್ರಾಮದ ನಿವಾಸಿಗಳಾದ ನಜೀರ್ ಹುಸೇನ್ (26), ಜುಲ್ಫಿಕರ್ ಅಲಿ ವಜೀರ್ (25), ಐಯಾಜ್ ಹುಸೇನ್ (28) ಮತ್ತು ಮುಜಮ್ಮಿಲ್ ಹುಸೇನ್ (25) ಎಂದು ಗುರುತಿಸಲಾಗಿದೆ.</p>.<p>ಪೊಲೀಸರ ಪ್ರಕಾರ, ಜಿಂದಾಲ್ ಹೌಸ್ ಸಮೀಪ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಆ ದಿನ ಸಂಜೆ (2021ರ ಜನವರಿ 29) ಕಡಿಮೆ ತೀವ್ರತೆಯ ಸುಧಾರಿತ ಸಾಧನ ಸ್ಫೋಟಗೊಂಡಿತ್ತು.</p>.<p>ಸ್ಫೋಟ ಸ್ಥಳದ ಸಮೀಪದಲ್ಲಿದ್ದ ಮೂರು ಕಾರುಗಳ ಕಿಟಕಿಗಳ ಗಾಜುಗಳಿಗೆ ಹಾನಿಯಾಗಿತ್ತು, ಅದನ್ನು ಹೊರತು ಪಡಿಸಿದರೆ ಕಟ್ಟಡಗಳಿಗೆ ಹಾನಿಯಾಗಿರಲಿಲ್ಲ ಹಾಗೂ ಯಾವುದೇ ವ್ಯಕ್ತಿಗೆ ತೊಂದರೆಯಾಗಿರಲಿಲ್ಲ.</p>.<p>ಭಾರತ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾದ ವಾರ್ಷಿಕೋತ್ಸವದ ದಿನವೇ ಸ್ಫೋಟ ಸಂಭವಿಸಿತ್ತು. 1992ರ ಜನವರಿ 29ರಿಂದ ಭಾರತ–ಇಸ್ರೇಲ್ ನಡುವೆ ರಾಜತಾಂತ್ರಿಕ ಬಾಂಧವ್ಯ ವೃದ್ಧಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಇದೇ ವರ್ಷ ಜನವರಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಲಡಾಖ್ ಮೂಲದ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ವಿಶೇಷ ತಂಡವು ಲಡಾಖ್ನ ಕಾರ್ಗಿಲ್ನಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಿ ರಾಷ್ಟ್ರ ರಾಜಧಾನಿಗೆ ಕರೆತಂದಿದ್ದಾರೆ.</p>.<p>ಬಂಧಿತರನ್ನು ಕಾರ್ಗಿಲ್ನ ಥಾಂಗ್ ಗ್ರಾಮದ ನಿವಾಸಿಗಳಾದ ನಜೀರ್ ಹುಸೇನ್ (26), ಜುಲ್ಫಿಕರ್ ಅಲಿ ವಜೀರ್ (25), ಐಯಾಜ್ ಹುಸೇನ್ (28) ಮತ್ತು ಮುಜಮ್ಮಿಲ್ ಹುಸೇನ್ (25) ಎಂದು ಗುರುತಿಸಲಾಗಿದೆ.</p>.<p>ಪೊಲೀಸರ ಪ್ರಕಾರ, ಜಿಂದಾಲ್ ಹೌಸ್ ಸಮೀಪ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಆ ದಿನ ಸಂಜೆ (2021ರ ಜನವರಿ 29) ಕಡಿಮೆ ತೀವ್ರತೆಯ ಸುಧಾರಿತ ಸಾಧನ ಸ್ಫೋಟಗೊಂಡಿತ್ತು.</p>.<p>ಸ್ಫೋಟ ಸ್ಥಳದ ಸಮೀಪದಲ್ಲಿದ್ದ ಮೂರು ಕಾರುಗಳ ಕಿಟಕಿಗಳ ಗಾಜುಗಳಿಗೆ ಹಾನಿಯಾಗಿತ್ತು, ಅದನ್ನು ಹೊರತು ಪಡಿಸಿದರೆ ಕಟ್ಟಡಗಳಿಗೆ ಹಾನಿಯಾಗಿರಲಿಲ್ಲ ಹಾಗೂ ಯಾವುದೇ ವ್ಯಕ್ತಿಗೆ ತೊಂದರೆಯಾಗಿರಲಿಲ್ಲ.</p>.<p>ಭಾರತ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾದ ವಾರ್ಷಿಕೋತ್ಸವದ ದಿನವೇ ಸ್ಫೋಟ ಸಂಭವಿಸಿತ್ತು. 1992ರ ಜನವರಿ 29ರಿಂದ ಭಾರತ–ಇಸ್ರೇಲ್ ನಡುವೆ ರಾಜತಾಂತ್ರಿಕ ಬಾಂಧವ್ಯ ವೃದ್ಧಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>