‘ಪಕ್ಷದ ಮೇಲಿನ ಕಾಳಜಿಯಿಂದಾಗಿ ಕೆಲವು ದುಷ್ಕೃತ್ಯಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಪಕ್ಷದಿಂದ ಏನೇ ಪ್ರಮಾದವಾಗಿದ್ದರೂ, ಯಾರೇ ತಪ್ಪು ಮಾಡಿದ್ದರೂ ಅದನ್ನು ಧೈರ್ಯವಾಗಿ ಪ್ರಶ್ನಿಸುತ್ತೇನೆ. ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಇದು ಗೊತ್ತಿದೆ. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಿದ್ದೇನೆಯೇ ಹೊರತು ಸ್ವಯಂ ಏಳಿಗೆಗಾಗಿಯಲ್ಲ’ ಎಂದು ಬ್ಯಾನರ್ಜಿ ನುಡಿದಿದ್ದಾರೆ.