ಪೊಲೀಸ್ ಖಾತೆಯ ಸುಪರ್ದಿಯನ್ನು ಹೊಂದಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪಳನಿಸ್ವಾಮಿ, ‘ಸಿಎಂ ಸ್ಟಾಲಿನ್ ಅವರ ಅಧೀನದಲ್ಲಿ ಪೊಲೀಸ್ ಖಾತೆಯಿದ್ದರೂ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಭಿವೃದ್ಧಿಯಾಗುತ್ತಿಲ್ಲ. ಬದಲಿಗೆ ತಮಿಳುನಾಡಿನ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಮಾಧ್ಯಮಗಳ ಪ್ರಯತ್ನಗಳನ್ನು ಹತ್ತಿಕ್ಕಲಾಗುತ್ತಿದೆ’ ಎಂದು ಅವರು ಹೇಳಿದರು.