ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎಗೆ ನೀಡುವ ಮತ ತಮಿಳುನಾಡಿನಲ್ಲಿ ಹೂಡಿಕೆ, ಅಭಿವೃದ್ಧಿಗಾಗಿ: ನರೇಂದ್ರ ಮೋದಿ

Last Updated 2 ಏಪ್ರಿಲ್ 2021, 8:19 IST
ಅಕ್ಷರ ಗಾತ್ರ

ಮಧುರೈ: ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ನಗರದಲ್ಲಿ ಆಯೋಜಿಸಿದ್ದಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌ಗೆ (ಎನ್‌ಡಿಎ) ನೀಡುವ ಮತವು ಈ ಪ್ರದೇಶದಲ್ಲಿ ಸಾಕಷ್ಟು ಹೂಡಿಕೆ ಮತ್ತು ಅಭಿವೃದ್ಧಿಗಾಗಿ ಎಂದು ಹೇಳಿದ್ದಾರೆ.

ʼಎನ್‌ಡಿಎಗೆ ನೀಡುವ ಮತವು ಈ ಪ್ರದೇಶದಲ್ಲಿ ಉತ್ತಮ ಹೂಡಿಕೆಗಾಗಿನ ಮತವಾಗಿದೆ.ಹೆಚ್ಚಿನ ಕೈಗಾರಿಕೆಗಳು ಇಲ್ಲಿಗೆ ಬರುವಂತಾಗಲು, ಮುಖ್ಯವಾಗಿ ರೈತರ ಸಹಕಾರದೊಂದಿಗೆ ಕೃಷಿ ಕೈಗಾರಿಕೆಗಳನ್ನು ತರಲುನಾವು ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತಿದ್ದೇವೆʼ ಎಂದು ಹೇಳಿದ್ದಾರೆ.

ಮುಂದುವರಿದು,ʼಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಆರ್ಥಿಕ ಕಾರಿಡಾರ್‌ಗಳ ಸರಣಿಯನ್ನು ಘೋಷಿಸಿದ್ದೇವೆ. ಅದರಲ್ಲಿ ಒಂದು ಮಧುರೈ-ಕೊಲ್ಲಂ ಕಾರಿಡಾರ್‌. ರಾಜ್ಯದಲ್ಲಿ ಕೈಗೊಳ್ಳಲಿರುವ ರೈಲ್ವೆ ಮೂಲಸೌಕರ್ಯ ಯೋಜನೆಗಳಿಗಾಗಿ ಮೀಸಲಿಟ್ಟ ಹಣವು2009ಕ್ಕೆ ಹೋಲಿಸಿದರೆ ದಾಖಲೆಯ ಶೇ. 238 ರಷ್ಟು ಹೆಚ್ಚಾಗಿದೆʼ ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಜಲಜೀವನ್‌ ಮಿಷನ್‌ ಅನುಷ್ಠಾನದ ಬಗ್ಗೆ ಮಾತನಾಡಿದ ಅವರು, ʼ2024ರ ಹೊತ್ತಿಗೆ ದೇಶದ ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ಈ ಯೋಜನೆ ಆರಂಭಿಸಿದೆವು.ಯೋಜನೆ ಜಾರಿಗೆ ಬಂದಾಗಿನಿಂದ ಸುಮಾರು16ಲಕ್ಷ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆʼ ಎಂದು ಮಾಹಿತಿ ನೀಡಿದ್ದಾರೆ.

ಮೋದಿ ಅವರು, ಇಲ್ಲಿನ ಜನರು ದೃಢ ಮನಸ್ಸು ಮತ್ತು ವಿಶಾಲ ಹೃದಯಿಗಳುಎಂದೂಹೊಗಳಿದ್ದಾರೆ.ʼವರ್ಷಗಳ ಹಿಂದೆ ನನ್ನ ತವರು ರಾಜ್ಯ ಸೌರಾಷ್ಟ್ರದ ಜನರು ಇಲ್ಲಿಗೆ ಬಂದಿದ್ದಾರೆ. ಅವರಿಗೆಲ್ಲಮಧುರೈ ಆಶ್ರಯ ನೀಡಿರುವುದೇ ʼಏಕ್‌ ಭಾರತ್, ಶ್ರೇಷ್ಠ ಭಾರತ್‌ʼ (ಒಂದೇ ಭಾರತ, ಶ್ರೇಷ್ಠ ಭಾರತ) ಎಂಬುದಕ್ಕೆಸಮರ್ಪಕವಾದಉದಾಹರಣೆʼ ಎಂದು ಶ್ಲಾಘಿಸಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್‌6 ರಂದು ನಡೆಯಲಿದ್ದು, ಮೇ2 ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT