<p><strong>ನವದೆಹಲಿ:</strong> ಪ್ರತಿಭಟನಾ ನಿರತ ರೈತರ ಉಳಿದ ಬೇಡಿಕೆಗಳ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರಚಿಸಿರುವ ಐವರು ಸದಸ್ಯರನ್ನೊಳಗೊಂಡ ಸಮಿತಿಯು, ಈ ವಿಚಾರವಾಗಿ ರೈತ ಸಂಘಟನೆಗಳು ಆಶಾದಾಯಕವಾಗಿವೆ ಎಂದು ಬುಧವಾರ ಹೇಳಿದೆ.</p>.<p>ಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ನಾಯಕ ಯಧುವೀರ್ ಸಿಂಗ್, 'ಕೇಂದ್ರದಿಂದ ಬಂದಿರುವ ಹೊಸ ಪ್ರಸ್ತಾವನೆಯ ಬಗ್ಗೆ ಚರ್ಚಿಸಿರುವುದಾಗಿ' ತಿಳಿಸಿದ್ದಾರೆ.</p>.<p>'ಸಿಂಘು ಗಡಿಯಲ್ಲಿ ನಡೆದ ಎಸ್ಕೆಎಂ ಸಭೆಯಲ್ಲಿ ಸರ್ಕಾರದ ಕಡೆಯಿಂದ ಬಂದಿರುವ ಹೊಸ ಪ್ರಸ್ತಾವನೆ ಕುರಿತು ಚರ್ಚೆ ಕೈಗೆತ್ತಿಕೊಳ್ಳಲಾಯಿತು' ಎಂದು ಮತ್ತೊಬ್ಬ ರೈತ ನಾಯಕ ಗುರ್ನಾಮ್ ಸಿಂಗ್ ಚಂದುನಿ ತಿಳಿಸಿದ್ದಾರೆ.</p>.<p>ಸರ್ಕಾರವು ಹೊಸ ಪ್ರಸ್ತಾವನೆಯನ್ನಿಟ್ಟಿರುವ ಅಂಗವಾಗಿ ಪ್ರತಿಭಟನಾ ನಿರತ ರೈತರು ಪ್ರತಿಭಟನೆ ಕೊನೆಗೊಳಿಸಬೇಕೇ ಎನ್ನುವ ಕುರಿತು ನಿರ್ಧರಿಸಲು ಸಿಂಘು ಗಡಿಯಲ್ಲಿ ಎಸ್ಕೆಎಂ ನಿರ್ಣಾಯಕ ಸಭೆಯನ್ನು ಕೈಗೊಂಡಿತ್ತು.</p>.<p>ರೈತರ ಮೇಲಿನ ನಕಲಿ ಪ್ರಕರಣಗಳನ್ನು ಹಿಂಪಡೆಯಲು ಪ್ರಸ್ತಾವನೆಯಲ್ಲಿ ನಿಗದಿಪಡಿಸಿರುವ ಪೂರ್ವಭಾವಿ ಷರತ್ತು ಸೇರಿದಂತೆ ಸರ್ಕಾರದ ಹೊಸ ಪ್ರಸ್ತಾವನೆಯಲ್ಲಿರುವ ಅಂಶಗಳ ಕುರಿತು ಸ್ಪಷ್ಟನೆ ನೀಡುವಂತೆ ಮಂಗಳವಾರವಷ್ಟೇ ಎಸ್ಕೆಎಂ ಒತ್ತಾಯಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪ್ರತಿಭಟನಾ ನಿರತ ರೈತರ ಉಳಿದ ಬೇಡಿಕೆಗಳ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರಚಿಸಿರುವ ಐವರು ಸದಸ್ಯರನ್ನೊಳಗೊಂಡ ಸಮಿತಿಯು, ಈ ವಿಚಾರವಾಗಿ ರೈತ ಸಂಘಟನೆಗಳು ಆಶಾದಾಯಕವಾಗಿವೆ ಎಂದು ಬುಧವಾರ ಹೇಳಿದೆ.</p>.<p>ಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ನಾಯಕ ಯಧುವೀರ್ ಸಿಂಗ್, 'ಕೇಂದ್ರದಿಂದ ಬಂದಿರುವ ಹೊಸ ಪ್ರಸ್ತಾವನೆಯ ಬಗ್ಗೆ ಚರ್ಚಿಸಿರುವುದಾಗಿ' ತಿಳಿಸಿದ್ದಾರೆ.</p>.<p>'ಸಿಂಘು ಗಡಿಯಲ್ಲಿ ನಡೆದ ಎಸ್ಕೆಎಂ ಸಭೆಯಲ್ಲಿ ಸರ್ಕಾರದ ಕಡೆಯಿಂದ ಬಂದಿರುವ ಹೊಸ ಪ್ರಸ್ತಾವನೆ ಕುರಿತು ಚರ್ಚೆ ಕೈಗೆತ್ತಿಕೊಳ್ಳಲಾಯಿತು' ಎಂದು ಮತ್ತೊಬ್ಬ ರೈತ ನಾಯಕ ಗುರ್ನಾಮ್ ಸಿಂಗ್ ಚಂದುನಿ ತಿಳಿಸಿದ್ದಾರೆ.</p>.<p>ಸರ್ಕಾರವು ಹೊಸ ಪ್ರಸ್ತಾವನೆಯನ್ನಿಟ್ಟಿರುವ ಅಂಗವಾಗಿ ಪ್ರತಿಭಟನಾ ನಿರತ ರೈತರು ಪ್ರತಿಭಟನೆ ಕೊನೆಗೊಳಿಸಬೇಕೇ ಎನ್ನುವ ಕುರಿತು ನಿರ್ಧರಿಸಲು ಸಿಂಘು ಗಡಿಯಲ್ಲಿ ಎಸ್ಕೆಎಂ ನಿರ್ಣಾಯಕ ಸಭೆಯನ್ನು ಕೈಗೊಂಡಿತ್ತು.</p>.<p>ರೈತರ ಮೇಲಿನ ನಕಲಿ ಪ್ರಕರಣಗಳನ್ನು ಹಿಂಪಡೆಯಲು ಪ್ರಸ್ತಾವನೆಯಲ್ಲಿ ನಿಗದಿಪಡಿಸಿರುವ ಪೂರ್ವಭಾವಿ ಷರತ್ತು ಸೇರಿದಂತೆ ಸರ್ಕಾರದ ಹೊಸ ಪ್ರಸ್ತಾವನೆಯಲ್ಲಿರುವ ಅಂಶಗಳ ಕುರಿತು ಸ್ಪಷ್ಟನೆ ನೀಡುವಂತೆ ಮಂಗಳವಾರವಷ್ಟೇ ಎಸ್ಕೆಎಂ ಒತ್ತಾಯಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>