ನವದೆಹಲಿ: ದಿನೇದಿನೇ ಅಧಿಕ ಪ್ರಮಾಣದಲ್ಲಿ ಹರಡುತ್ತಿರುವ ಕೊರೊನಾ ಮಹಾಮಾರಿಯ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಿಸಿದ್ದರಿಂದ ಶನಿವಾರ ಸಾರ್ವಜನಿಕರ 'ಮುಕ್ತ ಸಂಚಾರ' ದಿಂದ ರಾಷ್ಷ್ರ ರಾಜಧಾನಿ ಮುಕ್ತವಾಗಿತ್ತು.
ಅಗತ್ಯ ಸೇವೆಗಳಿಗೆ ಸಂಬಂಧಿಸಿದಂತೆ ಔಷಧಿ ಅಂಗಡಿಗಳು, ಕಿರಾಣಿ ಅಂಗಡಿಗಳ ಬಾಗಿಲು ತೆರೆದಿದೆ. ತರಕಾರಿ, ಹಾಲು ಮಾರಾಟಗಾರರಿಗೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.
ಎಲ್ಲ ರೀತಿಯ ಮಾರುಕಟ್ಟೆಗಳು, ಮಾಲ್ ಗಳು, ಸ್ಪಾಗಳು, ಹೋಟೆಲ್, ರೆಸ್ಟೋರಂಟ್ ಗಳಿಗೆ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕರು ಮನೆಯಲ್ಲೇ ಉಳಿಯುವಂತಾಗಿದೆ.
ರೈಲು ನಿಲ್ದಾಣ, ಆಸ್ಪತ್ರೆ, ವಿಮಾನ ನಿಲ್ದಾಣಕ್ಕೆ ತೆರಳುವವರು, ಬೇರೆ ಕಡೆಯಿಂದ ನಗರಕ್ಕೆ ಬರುವವರಿಗಾಗಿ ಬಸ್, ಆಟೊ, ಟ್ಯಾಕ್ಸಿ ಸೇವೆ ನಿರಾತಂಕವಾಗಿದೆ.
ವಾರಾಂತ್ಯದ ಕರ್ಫ್ಯೂ ಘೋಷಿಸಿದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಕನಾಟ್ ಪ್ಲೇಸ್ ಮಾರುಕಟ್ಟೆಯಲ್ಲಿನ ರಾಜೀವ್ ಚೌಕ್ ರಸ್ತೆ ಬಿಕೋ ಎನ್ನುತ್ತಿರುವುದು
ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಮನೆಗಳಲ್ಲೇ ಇರುವುದರಿಂದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಕನಾಟ್ ಪ್ಲೇಸ್, ಕರೋಲ್ ಬಾಗ್, ಸರೋಜಿನಿ ಮಾರುಕಟ್ಟೆ, ನೆಹರೂ ಪ್ಲೇಸ್ ಸೇರಿದಂತೆ ಪ್ರಮುಖ ಜನನಿಬಿಡ ಪ್ರದೇಶಗಳು ಜನಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು.