<p class="title">ಇಂದೋರ್(ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ರಾಜಕಾರಣ ಪ್ರವೇಶಕ್ಕೆ ಮುಂದಾಗಿದ್ದಾರೆ.</p>.<p class="bodytext">'ಜನರು ಬಯಸಿದ್ದೇ ಆದಲ್ಲಿ ರಾಜಕೀಯಕ್ಕೆ ಬರಲು ಸಿದ್ಧನಿದ್ದೇನೆ. ಜನತೆಗೆ ಸೇವೆ ಸಲ್ಲಿಸಲು ರಾಜಕೀಯ ರಂಗವು ಅವಕಾಶ ಮಾಡಿಕೊಡಲಿದೆ' ಎಂದು ರಾಬರ್ಟ್ ವಾದ್ರಾ ಅವರು ತಿಳಿಸಿದ್ದಾರೆ.</p>.<p>ಭಾನುವಾರ ಉಜ್ಜೈನಿಯ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿ ಸ್ಥಳೀಯ ಯೂಟ್ಯೂಬ್ ಚಾನೆಲ್ವೊಂದರ ಜತೆ ಮಾತನಾಡಿದ ಅವರು, ‘ನನಗೆ ರಾಜಕೀಯ ಅರ್ಥವಾಗುತ್ತದೆ. ಜನರು ತಮ್ಮನ್ನು ನಾನು ಪ್ರತಿನಿಧಿಸಬೇಕು ಎಂದು ಬಯಸಿದಲ್ಲಿ, ನಾನು ಜನರಿಗಾಗಿ ಏನಾದರೂ ಬದಲಾವಣೆ ಮಾಡಲು ಅವಕಾಶವಿದೆ ಎಂದಾದಲ್ಲಿ, ರಾಜಕೀಯಕ್ಕೆ ಪ್ರವೇಶಿಸುತ್ತೇನೆ' ಎಂದು ಹೇಳಿದರು.</p>.<p>‘ಕಳೆದ 10 ವರ್ಷಗಳಿಂದ ಜನರಪರ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನಾನು ರಾಜಕೀಯ ಪ್ರವೇಶ ಮಾಡಲಿ ಅಥವಾ ಪ್ರವೇಶಿಸದೆ ಇರಲಿ, ನನ್ನ ಜನಪರ ಕೆಲಸಗಳು ಮಾತ್ರ ಮುಂದುವರಿಯಲಿವೆ. ರಾಜಕೀಯ ಬೆಳವಣಿಗೆಗಳು ಮತ್ತು ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿ ನಿತ್ಯ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಚರ್ಚಿಸುತ್ತಿರುತ್ತೇನೆ. ಮುಂದೆ ಏನಾಗಲಿದೆಯೋ ನೋಡೋಣ’ ಎಂದು ಮಾರ್ಮಿಕವಾಗಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ಇಂದೋರ್(ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ರಾಜಕಾರಣ ಪ್ರವೇಶಕ್ಕೆ ಮುಂದಾಗಿದ್ದಾರೆ.</p>.<p class="bodytext">'ಜನರು ಬಯಸಿದ್ದೇ ಆದಲ್ಲಿ ರಾಜಕೀಯಕ್ಕೆ ಬರಲು ಸಿದ್ಧನಿದ್ದೇನೆ. ಜನತೆಗೆ ಸೇವೆ ಸಲ್ಲಿಸಲು ರಾಜಕೀಯ ರಂಗವು ಅವಕಾಶ ಮಾಡಿಕೊಡಲಿದೆ' ಎಂದು ರಾಬರ್ಟ್ ವಾದ್ರಾ ಅವರು ತಿಳಿಸಿದ್ದಾರೆ.</p>.<p>ಭಾನುವಾರ ಉಜ್ಜೈನಿಯ ಮಹಾಕಾಳೇಶ್ವರ ಮಂದಿರಕ್ಕೆ ಭೇಟಿ ನೀಡಿ ಸ್ಥಳೀಯ ಯೂಟ್ಯೂಬ್ ಚಾನೆಲ್ವೊಂದರ ಜತೆ ಮಾತನಾಡಿದ ಅವರು, ‘ನನಗೆ ರಾಜಕೀಯ ಅರ್ಥವಾಗುತ್ತದೆ. ಜನರು ತಮ್ಮನ್ನು ನಾನು ಪ್ರತಿನಿಧಿಸಬೇಕು ಎಂದು ಬಯಸಿದಲ್ಲಿ, ನಾನು ಜನರಿಗಾಗಿ ಏನಾದರೂ ಬದಲಾವಣೆ ಮಾಡಲು ಅವಕಾಶವಿದೆ ಎಂದಾದಲ್ಲಿ, ರಾಜಕೀಯಕ್ಕೆ ಪ್ರವೇಶಿಸುತ್ತೇನೆ' ಎಂದು ಹೇಳಿದರು.</p>.<p>‘ಕಳೆದ 10 ವರ್ಷಗಳಿಂದ ಜನರಪರ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನಾನು ರಾಜಕೀಯ ಪ್ರವೇಶ ಮಾಡಲಿ ಅಥವಾ ಪ್ರವೇಶಿಸದೆ ಇರಲಿ, ನನ್ನ ಜನಪರ ಕೆಲಸಗಳು ಮಾತ್ರ ಮುಂದುವರಿಯಲಿವೆ. ರಾಜಕೀಯ ಬೆಳವಣಿಗೆಗಳು ಮತ್ತು ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿ ನಿತ್ಯ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಚರ್ಚಿಸುತ್ತಿರುತ್ತೇನೆ. ಮುಂದೆ ಏನಾಗಲಿದೆಯೋ ನೋಡೋಣ’ ಎಂದು ಮಾರ್ಮಿಕವಾಗಿ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>