<p><strong>ಚಿಕ್ಕಮಗಳೂರು:</strong> ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ (ಬಿ. ವಿಜಯಕುಮಾರ್) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ಮಂಗಳವಾರ ನೆರವೇರಿತು.</p>.<p>ವಿಜಯ್ ಅವರ ಸ್ನೇಹಿತ ರಾಘವೇಂದ್ರ ಅವರ ತೋಟದಲ್ಲಿ ವೀರಶೈವ ಸಂಪ್ರದಾಯದಂತೆ ಮಂಗಳವಾರ ಮಧ್ಯಾಹ್ನ 3.15ಕ್ಕೆ ಅಂತ್ಯಸಂಸ್ಕಾರ ನೆರವೇರಿತು.</p>.<p>ಆಡಿ ಬೆಳೆದ ಊರಿನ ಮಣ್ಣಿನಲ್ಲಿ ವಿಜಯ್ ಲೀನವಾದರು. </p>.<p>ಹಿರಿಯ ಸಹೋದರ ವಿರೂಪಾಕ್ಷ ಮತ್ತು ಕಿರಿಯ ಸಹೋದರ ಸಿದ್ದೇಶ್ ಅವರು ವಿಧಿ ವಿಧಾನಗಳನ್ನು ನೆರವೇರಿಸಿದರು. ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಅವರು ಕ್ರಿಯಾವಿಧಿ ನಿರ್ವಹಿಸಿದರು. </p>.<p><strong>ಅಂತಿಮ ದರ್ಶನಕ್ಕೆ ಅವಕಾಶ:</strong> ಪಾರ್ಥಿವ ಶರೀರವನ್ನು ತೋಟದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2.30ರಿಂದ 3 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿತ್ತು. ಕುಟುಂಬಸ್ಥರು, ಜನರು ಸರದಿಯಲ್ಲಿ ತೆರಳಿ ಅಂತಿಮ ದರ್ಶನ ಪಡೆದರು.</p>.<p>ರಾಷ್ಟ್ರಗೀತೆ ನುಡಿಸಿ, ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಒಂದು ನಿಮಿಷ ಮೌನ ಆಚರಿಸಲಾಯಿತು.<br />ಅಂತ್ಯ ಸಂಸ್ಕಾರದ ಸ್ಥಳಕ್ಕೆ ಸುತ್ತಮುತ್ತಲ ಗ್ರಾಮಗಳ ಜನರು ಜಮಾಯಿಸಿದ್ದರು. ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.</p>.<p>ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ, ಮುಖಂಡ ವೈಎಸ್ವಿ ದತ್ತ, ನಿರ್ದೇಶಕರಾದ ಮನ್ಸೂರೆ, ಬಿ.ಎಸ್.ಲಿಂಗದೇವರು, ನಟರಾದ ನೀನಾಸಂ ಸತೀಶ್, ಕಡೂರು ನಟರಾಜ್, ಕಡೂರು ಧರ್ಮಣ್ಣ ಇದ್ದರು.</p>.<p><strong>ಇವುಗಳನ್ನೂ ಓದಿ</strong></p>.<p><a href="https://cms.prajavani.net/entertainment/cinema/actor-rishi-remembers-to-sanchari-vijay-839076.html" itemprop="url">ಡೈಲಾಗ್ ಮರೆತರೂ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಂಚಾರಿ ವಿಜಯ್ </a></p>.<p><a href="https://cms.prajavani.net/entertainment/cinema/mandya-ramesh-remember-vijay-839054.html" itemprop="url">ತಲೆದಂಡದಲ್ಲಿನ ನಟನೆಗೂ ವಿಜಯ್ಗೆ ರಾಷ್ಟ್ರಪ್ರಶಸ್ತಿ ಸಿಗುತ್ತಿತ್ತು: ಮಂಡ್ಯ ರಮೇಶ್ </a></p>.<p><a href="https://cms.prajavani.net/karnataka-news/us-consulate-in-chennai-condolence-message-to-sanchari-vijay-death-839050.html" itemprop="url">ಸಂಚಾರಿ ವಿಜಯ್ ನಿಧನಕ್ಕೆ ಕನ್ನಡದಲ್ಲೇ ಸಂತಾಪ ಸೂಚಿಸಿದ ಅಮೆರಿಕ ರಾಯಭಾರ ಕಚೇರಿ </a></p>.<p><a href="https://cms.prajavani.net/karnataka-news/sanchari-vijay-had-invites-risk-by-not-wearing-helmet-839028.html" itemprop="url">ಹೆಲ್ಮೆಟ್ ಧರಿಸದೇ ಅಪಾಯ ತಂದುಕೊಂಡ ‘ಸಂಚಾರಿ’ ? </a></p>.<p><a href="https://cms.prajavani.net/district/chikkamagaluru/actor-sanchari-vijay-coffee-land-talent-838909.html" itemprop="url">ಕಾಫಿನಾಡಿನ ಬಯಲುಸೀಮೆ ಪ್ರತಿಭೆ ಸಂಚಾರಿ ವಿಜಯ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ (ಬಿ. ವಿಜಯಕುಮಾರ್) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ಮಂಗಳವಾರ ನೆರವೇರಿತು.</p>.<p>ವಿಜಯ್ ಅವರ ಸ್ನೇಹಿತ ರಾಘವೇಂದ್ರ ಅವರ ತೋಟದಲ್ಲಿ ವೀರಶೈವ ಸಂಪ್ರದಾಯದಂತೆ ಮಂಗಳವಾರ ಮಧ್ಯಾಹ್ನ 3.15ಕ್ಕೆ ಅಂತ್ಯಸಂಸ್ಕಾರ ನೆರವೇರಿತು.</p>.<p>ಆಡಿ ಬೆಳೆದ ಊರಿನ ಮಣ್ಣಿನಲ್ಲಿ ವಿಜಯ್ ಲೀನವಾದರು. </p>.<p>ಹಿರಿಯ ಸಹೋದರ ವಿರೂಪಾಕ್ಷ ಮತ್ತು ಕಿರಿಯ ಸಹೋದರ ಸಿದ್ದೇಶ್ ಅವರು ವಿಧಿ ವಿಧಾನಗಳನ್ನು ನೆರವೇರಿಸಿದರು. ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಅವರು ಕ್ರಿಯಾವಿಧಿ ನಿರ್ವಹಿಸಿದರು. </p>.<p><strong>ಅಂತಿಮ ದರ್ಶನಕ್ಕೆ ಅವಕಾಶ:</strong> ಪಾರ್ಥಿವ ಶರೀರವನ್ನು ತೋಟದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2.30ರಿಂದ 3 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿತ್ತು. ಕುಟುಂಬಸ್ಥರು, ಜನರು ಸರದಿಯಲ್ಲಿ ತೆರಳಿ ಅಂತಿಮ ದರ್ಶನ ಪಡೆದರು.</p>.<p>ರಾಷ್ಟ್ರಗೀತೆ ನುಡಿಸಿ, ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಒಂದು ನಿಮಿಷ ಮೌನ ಆಚರಿಸಲಾಯಿತು.<br />ಅಂತ್ಯ ಸಂಸ್ಕಾರದ ಸ್ಥಳಕ್ಕೆ ಸುತ್ತಮುತ್ತಲ ಗ್ರಾಮಗಳ ಜನರು ಜಮಾಯಿಸಿದ್ದರು. ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.</p>.<p>ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ, ಮುಖಂಡ ವೈಎಸ್ವಿ ದತ್ತ, ನಿರ್ದೇಶಕರಾದ ಮನ್ಸೂರೆ, ಬಿ.ಎಸ್.ಲಿಂಗದೇವರು, ನಟರಾದ ನೀನಾಸಂ ಸತೀಶ್, ಕಡೂರು ನಟರಾಜ್, ಕಡೂರು ಧರ್ಮಣ್ಣ ಇದ್ದರು.</p>.<p><strong>ಇವುಗಳನ್ನೂ ಓದಿ</strong></p>.<p><a href="https://cms.prajavani.net/entertainment/cinema/actor-rishi-remembers-to-sanchari-vijay-839076.html" itemprop="url">ಡೈಲಾಗ್ ಮರೆತರೂ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಂಚಾರಿ ವಿಜಯ್ </a></p>.<p><a href="https://cms.prajavani.net/entertainment/cinema/mandya-ramesh-remember-vijay-839054.html" itemprop="url">ತಲೆದಂಡದಲ್ಲಿನ ನಟನೆಗೂ ವಿಜಯ್ಗೆ ರಾಷ್ಟ್ರಪ್ರಶಸ್ತಿ ಸಿಗುತ್ತಿತ್ತು: ಮಂಡ್ಯ ರಮೇಶ್ </a></p>.<p><a href="https://cms.prajavani.net/karnataka-news/us-consulate-in-chennai-condolence-message-to-sanchari-vijay-death-839050.html" itemprop="url">ಸಂಚಾರಿ ವಿಜಯ್ ನಿಧನಕ್ಕೆ ಕನ್ನಡದಲ್ಲೇ ಸಂತಾಪ ಸೂಚಿಸಿದ ಅಮೆರಿಕ ರಾಯಭಾರ ಕಚೇರಿ </a></p>.<p><a href="https://cms.prajavani.net/karnataka-news/sanchari-vijay-had-invites-risk-by-not-wearing-helmet-839028.html" itemprop="url">ಹೆಲ್ಮೆಟ್ ಧರಿಸದೇ ಅಪಾಯ ತಂದುಕೊಂಡ ‘ಸಂಚಾರಿ’ ? </a></p>.<p><a href="https://cms.prajavani.net/district/chikkamagaluru/actor-sanchari-vijay-coffee-land-talent-838909.html" itemprop="url">ಕಾಫಿನಾಡಿನ ಬಯಲುಸೀಮೆ ಪ್ರತಿಭೆ ಸಂಚಾರಿ ವಿಜಯ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>