‘ಹರ್ಷಿತಾ ಗಂಗಾಧರಪ್ಪ ನೆಗಳೂರು, ಶೈಕ್ಷಾ ನಾಯಕ ಅವರು ದೆಹಲಿ ಏಮ್ಸ್ಗೆ, ರಕ್ಷಿತ್ ಪರೀಕ್ ರಾಯಬರೇಲಿ ಏಮ್ಸ್ಗೆ, ಶಿವರಾಜ್ ಎಂ. ಉಮ್ಮಜಪ್ಪನ್ವರ್ ಪುಣೆಯ ವೈದ್ಯಕೀಯ ಕಾಲೇಜಿಗೆ ಆಯ್ಕೆಯಾಗುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಇದರೊಂದಿಗೆ ರಾಜ್ಯದ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 213 ವಿದ್ಯಾರ್ಥಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಸರ್ಕಾರಿ ಕೋಟದಲ್ಲಿ 106 ವಿದ್ಯಾರ್ಥಿಗಳು, ಖಾಸಗಿ ಕೋಟಾದಲ್ಲಿ 58 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ’ ಎಂದು ಹೇಳಿದರು.