ಲಸಿಕೆ ಅಭಿಯಾನವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಹಿಂದೆ ಉಚಿತವಾಗಿ ಉಪ್ಪು, ಸಕ್ಕರೆ, ಅಕ್ಕಿ, ಬೇಳೆ ಕೊಡುವಾಗ ಆ ಪೊಟ್ಟಣಗಳ ಮೇಲೆ ಸಿದ್ದರಾಮಯ್ಯ ಅವರ ಫೋಟೊ ಇರಲಿಲ್ಲವೇ? ಆಯಾಯ ಸಂದರ್ಭದಲ್ಲಿನ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಯ ಸಚಿವರ ಫೋಟೊ ಹಾಕುವುದು ಸಹಜ. ಹಾಗೆಯೇ, ಲಸಿಕೆ ಅಭಿಯಾನವೂ ರಾಷ್ಟ್ರವ್ಯಾಪ್ತಿ ನಡೆಯುತ್ತಿರುವುದರಿಂದ ಪ್ರಧಾನಿ ಫೋಟೊ ಹಾಕಲಾಗಿದೆ. ಆದರೆ, ಪಕ್ಷದ ಚಿಹ್ನೆ, ಧ್ವಜ ಅಥವಾ ಸರ್ಕಾರದ ವ್ಯವಸ್ಥೆಯೊಳಗೆ ಇಲ್ಲದ ವ್ಯಕ್ತಿಯ ಫೋಟೊ ಹಾಕುವುದು ತಪ್ಪು’ ಎಂದರು.