ಇಂದಿನ ಸಭೆ ಮುಗಿಸಿದ ಬಳಿಕ ಬಹುತೇಕ ಸಚಿವರು ತಮ್ಮ ಊರುಗಳಿಗೆ ಹೋಗುತ್ತಾರೆ. ಪುನಃ ಹೊಸ ವರ್ಷದಲ್ಲೇ ಸಿಗುವುದರಿಂದ ಮುಖ್ಯಮಂತ್ರಿಯವರ ಊಟಕ್ಕೆ ಕರೆದರು. ಬಹುತೇಕ ಸಚಿವರು ಹಾಜರಾಗಿದ್ದರು. ಮುಂದಿನ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಆಗಲಿದ್ದಾರೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು ಎಂದು ಮೂಲಗಳು ಹೇಳಿವೆ.