ದಿಕ್ಕಿಲ್ಲದ ಅನಾಥ ಶವಗಳ ಅಂತ್ಯ ಸಂಸ್ಕಾರವನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಬದುಕಿನುದ್ದಕ್ಕೂ ಶ್ರದ್ಧೆಯಿಂದ ನಡೆಸುತ್ತಾ ಬಂದಿರುವ ದೊಮ್ಮಲೂರಿನ ಸ್ಮಶಾನ ನೌಕರ ಮುನಿಯಪ್ಪ ಅವರ ಕಾಯಕಶ್ರದ್ಧೆಯನ್ನು ರಾಜ್ಯ ಸರ್ಕಾರ ಗುರುತಿಸಿದೆ. ಯಾರೂ ಗಮನಿಸದ ‘ಮಸಣದ ಹೂವಿ’ನ ಕಂಪನ್ನು ಸರ್ಕಾರ ಗುರುತಿಸಿರುವುದು ಸ್ಮಶಾನದಲ್ಲಿ ಕಾಯಕ ನಿರತ ಕಾರ್ಮಿಕರಲ್ಲೂ ಸಾರ್ಥಕತೆಯ ಭಾವವನ್ನು ಮೂಡಿಸಿದೆ.