<p><strong>ಹೊಸಪೇಟೆ (ವಿಜಯನಗರ):</strong> ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಜಮಖಂಡಿಯ ಸಕ್ಕರೆ ಕಾರ್ಖಾನೆ ಮಾಲೀಕ ಜಗದೀಶ ಎಸ್. ಗುಡಗುಂಟಿ ಅವರನ್ನು ಆಯ್ಕೆ ಮಾಡಿರುವ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.</p>.<p>‘ಪ್ರಜಾವಾಣಿ’ ವೆಬ್ಸೈಟಿನಲ್ಲಿ ಪ್ರಕಟಗೊಂಡ ಸುದ್ದಿಯನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ದಾದಾ ಕಲಂದರ್ ಎಂಬುವವರು, ‘ಬಿಜೆಪಿಯವರ ಆಡಳಿತದಲ್ಲಿ ಏನೆಲ್ಲಾ ನೋಡಬೇಕಿದೆಯೋ? ಅಲ್ಲಾ ಈ ನಾಡೋಜ ಪ್ರಶಸ್ತಿ ನೀಡಲು ಇರುವ ಮಾನದಂಡಗಳಲ್ಲಿ ಹಣವಂತರು ಎಂಬ ಮಾನದಂಡ ಯಾವಾಗ ಸೇರಿಸಲಾಯಿತು? ನಿಜ ನಾಡೋಜರಾದ ರೈತರು, ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಂದಾಯ ಮಾಡಲಾಗದವರನ್ನೆಲ್ಲ ನಾಡೋಜ ಕೊಟ್ಟು ಗೌರವಿಸುವ ದಾರಿದ್ರ್ಯಕ್ಕೆ ಸಾಕ್ಷಿಯಾಗಬೇಕಾಗಿ ಬಂದದ್ದು ಕನ್ನಡಿಗರ ದೌರ್ಭಾಗ್ಯವೇ ಹೌದು’ ಎಂದು ಬರೆದುಕೊಂಡಿದ್ದಾರೆ.</p>.<p>ಜಗದೀಶ ಅವರಿಗೆ ಸೇರಿದ ‘ಪ್ರಭುಲಿಂಗೇಶ್ವರ ಶುಗರ್ಸ್’ಗೆ ಕಬ್ಬು ಪೂರೈಸಿದ ರೈತರ ಎಷ್ಟು ಹಣ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ವಿವರ ಒಳಗೊಂಡ ಸ್ಕ್ರೀನ್ ಶಾಟ್ ಕೂಡ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್ಗೆ ಹಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.</p>.<p>‘ಇದು ಪಕ್ಕಾ ಮಾರ್ವಾಡಿಗಳ ಸಂಘದಿಂದ ಹುಟ್ಟಿದೆಯಲ್ಲ’ ಎಂದು ಪ್ರಕಾಶ ಮಂತೆವಾಡ ಎನ್ನುವವರು ಪ್ರತಿಕ್ರಿಯಿಸಿದರೆ, ‘ದೇಣಿಗೆ ತಂದ ಪ್ರಶಸ್ತಿ ನೀವೂ ಪೀಕಿಕೊಳ್ಳಬಹುದು’ ಎಂದು ಸಿರಾಜುನ್ನಿಸಾ ಪಾಷಾ ಕಾಮೆಂಟ್ ಮಾಡಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/district/vijayanagara/nadoja-award-to-businessman-jagadeesh-and-ophthalmologist-krishna-prasad-819917.html" target="_blank">ಉದ್ಯಮಿ ಜಗದೀಶ, ನೇತ್ರ ತಜ್ಞ ಕೃಷ್ಣಪ್ರಸಾದ್ಗೆ ನಾಡೋಜ ಗೌರವ</a></strong></p>.<p>‘ಬಹಳಷ್ಟು ಸಿಹಿ ಹಂಚಿರಬೇಕು’ ಎಂದು ವಿಶ್ವನಾಥ ಮಾಳಗಿ ಎಂಬುವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರೆ, ‘ಲಕ್ಷಾಂತರ ಜನರಿಗೆ ಉದ್ಯೋಗ ನೀಡಲು ಮತ್ತು ಸಮಾಜಮುಖಿ ಕಾರ್ಯ ಮಾಡುವ ಸಜ್ಜನ್ ಜಿಂದಾಲ್ ಅವರಿಗೆ ನೀಡಬಹುದು ಅಲ್ಲವೇ’ ಎಂದು ಎ.ಕೆ. ಉದೇದಪ್ಪ ಪ್ರಶ್ನಿಸಿದ್ದಾರೆ.</p>.<p>‘ಪಕ್ಷ ನಿಷ್ಠೆ ಇರುವವರು ಯಾರಾದರೂ ನಾಡೋಜ ಆಗಬಹುದು. ಇನ್ನೂ ಮುಂದೆ... ವಿಶ್ವವಿದ್ಯಾಲಯದ ಸ್ವಾಯತ್ತತೆ ಗಾಳಿಗೆ ತೂರಿ’ ಎಂದು ಎಚ್. ಯರ್ರಿಸ್ವಾಮಿ ಪ್ರತಿಕ್ರಿಯಿಸಿದ್ದಾರೆ.</p>.<p>‘ನಾಡೋಜ ಗೌರವ ಹಾಳಾಗಿ ತುಂಬ ವರ್ಷವೇ ಆಯಿತು’ ಎಂದು ಸತೀಶ ಜವರೇಗೌಡ ವಿಷಾದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಜಮಖಂಡಿಯ ಸಕ್ಕರೆ ಕಾರ್ಖಾನೆ ಮಾಲೀಕ ಜಗದೀಶ ಎಸ್. ಗುಡಗುಂಟಿ ಅವರನ್ನು ಆಯ್ಕೆ ಮಾಡಿರುವ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.</p>.<p>‘ಪ್ರಜಾವಾಣಿ’ ವೆಬ್ಸೈಟಿನಲ್ಲಿ ಪ್ರಕಟಗೊಂಡ ಸುದ್ದಿಯನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ದಾದಾ ಕಲಂದರ್ ಎಂಬುವವರು, ‘ಬಿಜೆಪಿಯವರ ಆಡಳಿತದಲ್ಲಿ ಏನೆಲ್ಲಾ ನೋಡಬೇಕಿದೆಯೋ? ಅಲ್ಲಾ ಈ ನಾಡೋಜ ಪ್ರಶಸ್ತಿ ನೀಡಲು ಇರುವ ಮಾನದಂಡಗಳಲ್ಲಿ ಹಣವಂತರು ಎಂಬ ಮಾನದಂಡ ಯಾವಾಗ ಸೇರಿಸಲಾಯಿತು? ನಿಜ ನಾಡೋಜರಾದ ರೈತರು, ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಂದಾಯ ಮಾಡಲಾಗದವರನ್ನೆಲ್ಲ ನಾಡೋಜ ಕೊಟ್ಟು ಗೌರವಿಸುವ ದಾರಿದ್ರ್ಯಕ್ಕೆ ಸಾಕ್ಷಿಯಾಗಬೇಕಾಗಿ ಬಂದದ್ದು ಕನ್ನಡಿಗರ ದೌರ್ಭಾಗ್ಯವೇ ಹೌದು’ ಎಂದು ಬರೆದುಕೊಂಡಿದ್ದಾರೆ.</p>.<p>ಜಗದೀಶ ಅವರಿಗೆ ಸೇರಿದ ‘ಪ್ರಭುಲಿಂಗೇಶ್ವರ ಶುಗರ್ಸ್’ಗೆ ಕಬ್ಬು ಪೂರೈಸಿದ ರೈತರ ಎಷ್ಟು ಹಣ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ವಿವರ ಒಳಗೊಂಡ ಸ್ಕ್ರೀನ್ ಶಾಟ್ ಕೂಡ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್ಗೆ ಹಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.</p>.<p>‘ಇದು ಪಕ್ಕಾ ಮಾರ್ವಾಡಿಗಳ ಸಂಘದಿಂದ ಹುಟ್ಟಿದೆಯಲ್ಲ’ ಎಂದು ಪ್ರಕಾಶ ಮಂತೆವಾಡ ಎನ್ನುವವರು ಪ್ರತಿಕ್ರಿಯಿಸಿದರೆ, ‘ದೇಣಿಗೆ ತಂದ ಪ್ರಶಸ್ತಿ ನೀವೂ ಪೀಕಿಕೊಳ್ಳಬಹುದು’ ಎಂದು ಸಿರಾಜುನ್ನಿಸಾ ಪಾಷಾ ಕಾಮೆಂಟ್ ಮಾಡಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/district/vijayanagara/nadoja-award-to-businessman-jagadeesh-and-ophthalmologist-krishna-prasad-819917.html" target="_blank">ಉದ್ಯಮಿ ಜಗದೀಶ, ನೇತ್ರ ತಜ್ಞ ಕೃಷ್ಣಪ್ರಸಾದ್ಗೆ ನಾಡೋಜ ಗೌರವ</a></strong></p>.<p>‘ಬಹಳಷ್ಟು ಸಿಹಿ ಹಂಚಿರಬೇಕು’ ಎಂದು ವಿಶ್ವನಾಥ ಮಾಳಗಿ ಎಂಬುವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರೆ, ‘ಲಕ್ಷಾಂತರ ಜನರಿಗೆ ಉದ್ಯೋಗ ನೀಡಲು ಮತ್ತು ಸಮಾಜಮುಖಿ ಕಾರ್ಯ ಮಾಡುವ ಸಜ್ಜನ್ ಜಿಂದಾಲ್ ಅವರಿಗೆ ನೀಡಬಹುದು ಅಲ್ಲವೇ’ ಎಂದು ಎ.ಕೆ. ಉದೇದಪ್ಪ ಪ್ರಶ್ನಿಸಿದ್ದಾರೆ.</p>.<p>‘ಪಕ್ಷ ನಿಷ್ಠೆ ಇರುವವರು ಯಾರಾದರೂ ನಾಡೋಜ ಆಗಬಹುದು. ಇನ್ನೂ ಮುಂದೆ... ವಿಶ್ವವಿದ್ಯಾಲಯದ ಸ್ವಾಯತ್ತತೆ ಗಾಳಿಗೆ ತೂರಿ’ ಎಂದು ಎಚ್. ಯರ್ರಿಸ್ವಾಮಿ ಪ್ರತಿಕ್ರಿಯಿಸಿದ್ದಾರೆ.</p>.<p>‘ನಾಡೋಜ ಗೌರವ ಹಾಳಾಗಿ ತುಂಬ ವರ್ಷವೇ ಆಯಿತು’ ಎಂದು ಸತೀಶ ಜವರೇಗೌಡ ವಿಷಾದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>