ಕೃಷಿ ಜಮೀನಿಗೆ ಸಂಬಂಧಿಸಿದ ಕಾಯ್ದೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ನಾಗಮೋಹನ ದಾಸ್, ನಿವೃತ್ತ ಐಎಫ್ಎಸ್ ಅಧಿಕಾರಿ ಅ.ನ. ಯಲ್ಲಪ್ಪರೆಡ್ಡಿ, ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಪ್ರೊ.ಎಂ.ಕೆ. ರಮೇಶ್, ಪ್ರೊ. ಎ.ಆರ್. ವಾಸವಿ ಮತ್ತು ರೇಣುಕಾ ವಿಶ್ವನಾಥ್ ಅವರನ್ನು ಒಳಗೊಂಡ ತಂಡದಿಂದ ಸೆಪ್ಟೆಂಬರ್ 19ರಂದು ನಗರದಲ್ಲಿ ಜನತಾ ಭೂಮಿ ಅದಾಲತ್ ನಡೆಸಲಾಗಿತ್ತು. ಇಡೀ ದಿನದ ವಿಚಾರಣೆಯ ವಿವರಗಳು ಮತ್ತು ತೀರ್ಮಾನಗಳನ್ನು ‘ಅದಾಲತ್’ ಬಿಡುಗಡೆ ಮಾಡಿದೆ.