ಈ ಕುರಿತು ಎಚ್.ಡಿ.ದೇವೇಗೌಡ ಸೋಮವಾರ ಟ್ವೀಟಿಸಿದ್ದು, 'ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲವು ಸಲಹೆಗಳನ್ನು ಒಳಗೊಂಡ ಪತ್ರವನ್ನು ನಿನ್ನೆ ಬರೆದಿದ್ದೇನೆ. ಇದು ರಾಷ್ಟ್ರೀಯ ಬಿಕ್ಕಟ್ಟಾಗಿದೆ, ನಾವೆಲ್ಲರೂ ಇದನ್ನು ಒಂದು ರಾಷ್ಟ್ರವಾಗಿ ಎದುರಿಸಬೇಕಿದೆ. ಜೀವ ಉಳಿಸಲು ಮತ್ತು ಸಂಕಟವನ್ನು ತಪ್ಪಿಸುವ ಕುರಿತಾದ ಎಲ್ಲ ಸೂಕ್ತ ಕ್ರಮಗಳನ್ನು ನಾವು ಬೆಂಬಲಿಸಬೇಕಿದೆ' ಎಂದಿದ್ದಾರೆ.