<p><strong>ಬೆಂಗಳೂರು: </strong>ರಾಜ್ಯದಾದ್ಯಂತ 24 ಗಂಟೆ ಅವಧಿಯಲ್ಲಿ 291 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 8 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.</p>.<p>ಹೀಗಾಗಿ ಮೃತರ ಒಟ್ಟು ಸಂಖ್ಯೆ 38,211ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 29,96,148 ಮಂದಿ ಸೋಂಕಿತರಾಗಿದ್ದಾರೆ.</p>.<p>ಒಂದೇ ದಿನ 745 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,51,492 ತಲುಪಿದೆ.</p>.<p>ಪ್ರಸ್ತುತ ರಾಜ್ಯದಲ್ಲಿ 6,416 ಸಕ್ರಿಯ ಪ್ರಕರಣಗಳಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳಿಂದ (ಮಂಗಳವಾರ ಸಂಜೆಯ ವರದಿ) ತಿಳಿದುಬಂದಿದೆ.</p>.<p><strong>ಓದಿ:</strong><a href="https://www.prajavani.net/karnataka-news/will-take-restrictions-decision-on-basis-of-who-reports-says-sudhakar-888496.html" itemprop="url">ಡಬ್ಲ್ಯುಎಚ್ಒ ವರದಿ ಆಧರಿಸಿ ನಿಯಂತ್ರಣ ಕ್ರಮ: ಡಾ.ಕೆ. ಸುಧಾಕರ್ </a></p>.<p>ಬೆಂಗಳೂರಿನಲ್ಲಿ ಹೊಸದಾಗಿ 185 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 654 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 6 ಮಂದಿ ಸೋಂಕಿತರು ಅಸುನೀಗಿದ್ದು, ಸದ್ಯ 4,833 ಸಕ್ರಿಯ ಪ್ರಕರಣಗಳಿವೆ.</p>.<p>ಉಳಿದಂತೆ ದಕ್ಷಿಣ ಕನ್ನಡದಲ್ಲಿ 19, ಮೈಸೂರಿನಲ್ಲಿ 28, ಶಿವಮೊಗ್ಗದಲ್ಲಿ 8, ಉಡುಪಿಯಲ್ಲಿ 7, ತುಮಕೂರಿನಲ್ಲಿ 5, ಧಾರವಾಡದಲ್ಲಿ 9, ಬೆಳಗಾವಿಯಲ್ಲಿ 5, ಕೊಡಗಿನಲ್ಲಿ 4, ಚಾಮರಾಜನಗರ, ಹಾಸನದಲ್ಲಿ ತಲಾ 3, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೊಪ್ಪಳದಲ್ಲಿ ತಲಾ 2, ಉತ್ತರ ಕನ್ನಡ, ಮಂಡ್ಯ, ಕೋಲಾರ, ಕಲಬುರಗಿ, ಗದಗ, ದಾವಣಗೆರೆ, ಬೀದರ್, ಬಳ್ಳಾರಿ ಹಾಗೂ ಬಾಗಲಕೋಟೆಯಲ್ಲಿ ತಲಾ 1 ಪ್ರಕರಣ ವರದಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದಾದ್ಯಂತ 24 ಗಂಟೆ ಅವಧಿಯಲ್ಲಿ 291 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 8 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.</p>.<p>ಹೀಗಾಗಿ ಮೃತರ ಒಟ್ಟು ಸಂಖ್ಯೆ 38,211ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 29,96,148 ಮಂದಿ ಸೋಂಕಿತರಾಗಿದ್ದಾರೆ.</p>.<p>ಒಂದೇ ದಿನ 745 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,51,492 ತಲುಪಿದೆ.</p>.<p>ಪ್ರಸ್ತುತ ರಾಜ್ಯದಲ್ಲಿ 6,416 ಸಕ್ರಿಯ ಪ್ರಕರಣಗಳಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳಿಂದ (ಮಂಗಳವಾರ ಸಂಜೆಯ ವರದಿ) ತಿಳಿದುಬಂದಿದೆ.</p>.<p><strong>ಓದಿ:</strong><a href="https://www.prajavani.net/karnataka-news/will-take-restrictions-decision-on-basis-of-who-reports-says-sudhakar-888496.html" itemprop="url">ಡಬ್ಲ್ಯುಎಚ್ಒ ವರದಿ ಆಧರಿಸಿ ನಿಯಂತ್ರಣ ಕ್ರಮ: ಡಾ.ಕೆ. ಸುಧಾಕರ್ </a></p>.<p>ಬೆಂಗಳೂರಿನಲ್ಲಿ ಹೊಸದಾಗಿ 185 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 654 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 6 ಮಂದಿ ಸೋಂಕಿತರು ಅಸುನೀಗಿದ್ದು, ಸದ್ಯ 4,833 ಸಕ್ರಿಯ ಪ್ರಕರಣಗಳಿವೆ.</p>.<p>ಉಳಿದಂತೆ ದಕ್ಷಿಣ ಕನ್ನಡದಲ್ಲಿ 19, ಮೈಸೂರಿನಲ್ಲಿ 28, ಶಿವಮೊಗ್ಗದಲ್ಲಿ 8, ಉಡುಪಿಯಲ್ಲಿ 7, ತುಮಕೂರಿನಲ್ಲಿ 5, ಧಾರವಾಡದಲ್ಲಿ 9, ಬೆಳಗಾವಿಯಲ್ಲಿ 5, ಕೊಡಗಿನಲ್ಲಿ 4, ಚಾಮರಾಜನಗರ, ಹಾಸನದಲ್ಲಿ ತಲಾ 3, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೊಪ್ಪಳದಲ್ಲಿ ತಲಾ 2, ಉತ್ತರ ಕನ್ನಡ, ಮಂಡ್ಯ, ಕೋಲಾರ, ಕಲಬುರಗಿ, ಗದಗ, ದಾವಣಗೆರೆ, ಬೀದರ್, ಬಳ್ಳಾರಿ ಹಾಗೂ ಬಾಗಲಕೋಟೆಯಲ್ಲಿ ತಲಾ 1 ಪ್ರಕರಣ ವರದಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>