ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ತಮ್ಮ ಅಧಿಕಾರ ದಾಹದಿಂದಾಗಿ ಜನರ ಸಂಕಷ್ಟ ನೀಗಿಸಲು ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ನಾಳೆಗೆ (ಸೋಮವಾರ) ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವನ್ನು ಟೀಕಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ನೆರೆ ಸಂತ್ರಸ್ತರ ಬದುಕು ದುರ್ಬರವಾಗಿದೆ. ಉದ್ಯೋಗ ನಷ್ಟ, ಆದಾಯ ನಷ್ಟ, ರೈತರಿಗೆ ಸಿಗದ ಬೆಲೆ, ದುಬಾರಿ ಗೊಬ್ಬರದ ಬರೆ, ಬೀದಿ ಹೆಣವಾದ ಕೋವಿಡ್ ರೋಗಿಗಳು, ಆಕ್ಸಿಜನ್ ಇಲ್ಲದೆ ಸತ್ತ ಸೋಂಕಿತರು ಇವುಗಳ ನಡುವೆ ಬೆಲೆ ಏರಿಕೆ ಕಾರಣಗಳಿಂದಾಗಿ ಜನರ ಹರ್ಷ ಕಮರಿದೆ. ಇದೆಲ್ಲದಕ್ಕೂ ಬಿಜೆಪಿಯೇ ಕಾರಣ’ ಎಂದು ಕಾಂಗ್ರೆಸ್ ಕುಟುಕಿದೆ.
‘ಈ 2 ವರ್ಷದಲ್ಲಿ ಕೊರೊನಾ ಮುಕ್ತ ಕರ್ನಾಟಕ, ನಿರುದ್ಯೋಗ ಮುಕ್ತ ಕರ್ನಾಟಕ, ಭ್ರಷ್ಟಾಚಾರ ಮುಕ್ತ ಕರ್ನಾಟಕ, ಹಸಿವು ಮುಕ್ತ ಕರ್ನಾಟಕ ಮಾಡುವುದು ಬಿಜೆಪಿ ಪಕ್ಷದ ಆದ್ಯತೆ ಆಗಬೇಕಿತ್ತು, ಆದರೆ ಅವರ ಆದ್ಯತೆ ಬಿಎಸ್ವೈ ಮುಕ್ತ ಬಿಜೆಪಿ ಮಾಡುವುದಷ್ಟೇ ಆಗಿತ್ತು’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಸಂಜೆಯೊಳಗೆ ಹೈಕಮಾಂಡ್ನಿಂದ ಸಂದೇಶ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೈಕಮಾಂಡ್ನಿಂದ ಯಾವುದೇ ಸೂಚನೆಯಾಗಲಿ ಹಾಗೂ ಮಾಹಿತಿಯಾಗಲಿ ಬಂದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ... ಸಂಜೆಯೊಳಗೆ ಹೈಕಮಾಂಡ್ನಿಂದ ಸಂದೇಶ ಬರಲಿದೆ: ಬಿಎಸ್ವೈ
ಸರ್ಕಾರಕ್ಕೆ 2 ವರ್ಷ, ಕಮರಿತು ಜನರ ಹರ್ಷ
— Karnataka Congress (@INCKarnataka) July 25, 2021
➡ ನೆರೆ ಸಂತ್ರಸ್ತರ ಬದುಕು ದುರ್ಬರ
➡ ಉದ್ಯೋಗ, ಆದಾಯ ನಷ್ಟ
➡ ರೈತರಿಗೆ ಸಿಗದ ಬೆಲೆ, ದುಬಾರಿ ಗೊಬ್ಬರದ ಬರೆ
➡ ಬೀದಿ ಹೆಣವಾದ ಕೋವಿಡ್ ರೋಗಿಗಳು
➡ ಆಕ್ಸಿಜನ್ ಇಲ್ಲದೆ ಸತ್ತ ಸೋಂಕಿತರು
➡ ಬೆಲೆ ಏರಿಕೆ@BJP4Karnataka ಅಧಿಕಾರ ದಾಹದಿಂದ ನೀಗಲಿಲ್ಲ ಜನರ ಸಂಕಷ್ಟ#DakotaDoubleEngine pic.twitter.com/bqmCiiEswN
ಈ 2 ವರ್ಷದಲ್ಲಿ,
— Karnataka Congress (@INCKarnataka) July 25, 2021
▶ ಕರೋನಾ ಮುಕ್ತ ಕರ್ನಾಟಕ
▶ ನಿರುದ್ಯೋಗ ಮುಕ್ತ ಕರ್ನಾಟಕ
▶ ಭ್ರಷ್ಟಾಚಾರ ಮುಕ್ತ ಕರ್ನಾಟಕ
▶ ಹಸಿವು ಮುಕ್ತ ಕರ್ನಾಟಕ
ಮಾಡುವುದು @BJP4Karnataka ಪಕ್ಷದ ಆದ್ಯತೆ ಆಗಬೇಕಿತ್ತು, ಆದರೆ ಅವರ ಆದ್ಯತೆ #BSYmuktaBJP ಮಾಡುವುದಷ್ಟೇ ಆಗಿತ್ತು!#DakotaDoubleEngine pic.twitter.com/oqMomuCBvM
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.