ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ಪ್ರತಿ ವರ್ಷವೂ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶ ನೀಡುವುದು, ತೆರಿಗೆ ಪರಿಷ್ಕರಣೆ ದರದಲ್ಲಿನ ಹೆಚ್ಚಳ, ತೆರಿಗೆ ಪಾವತಿ ವಿಳಂಬವಾದರೆ ತಿಂಗಲಿಗೆ ಶೇ 2ರಷ್ಟು ಬಡ್ಡಿ ವಿಧಿಸುವ ಪ್ರಸ್ತಾವವನ್ನು ಕಾಂಗ್ರೆಸ್ನ ಪಿ.ಆರ್. ರಮೇಶ್, ಬಿ.ಕೆ. ಹರಿಪ್ರಸಾದ್, ಸಿ.ಎಂ. ಇಬ್ರಾಹಿಂ, ನಜೀರ್ ಅಹಮ್ಮದ್, ಎಂ. ನಾರಾಯಣಸ್ವಾಮಿ, ಜೆಡಿಎಸ್ನ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಎಚ್.ಎಂ. ರಮೇಶ್ ಗೌಡ, ಗೋವಿಂದರಾಜ್ ಸೇರಿದಂತೆ ಹಲವರು ವಿರೋಧಿಸಿದರು. ಕೋವಿಡ್ ಸಾಂಕ್ರಾಮಿಕದಿಂದ ಜನರು ತೊಂದರೆಗೆ ಸಿಲುಕಿರುವುದರಿಂದ ಪ್ರಸಕ್ತ ವರ್ಷ ತೆಲಂಗಾಣ ಮಾದರಿಯಲ್ಲಿ ಶೇ 50ರಷ್ಟು ತೆರಿಗೆ ರಿಯಾಯಿತಿ ನೀಡುವಂತೆ ಆಗ್ರಹಿಸಿದರು.