ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ: ರಾಯರ ವೈಭವದ ಪೂರ್ವಾರಾಧನೆ

Last Updated 12 ಆಗಸ್ಟ್ 2022, 23:30 IST
ಅಕ್ಷರ ಗಾತ್ರ

ರಾಯಚೂರು: ರಾಘವೇಂದ್ರ ಸ್ವಾಮಿಯವರ 351ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಮಂತ್ರಾಲಯದಲ್ಲಿ ಶುಕ್ರವಾರ ಪೂರ್ವಾರಾಧನೆಯು ವೈಭವದಿಂದ ನೆರವೇರಿತು.

ರಾಯರ ಮೂಲ ವೃಂದಾವನಕ್ಕೆ ವಿಶೇಷ ಪೂಜೆ, ಮಹಾಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮತ್ತು ವಸ್ತ್ರಾಲಂಕಾರವನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ವಿಧಿವತ್ತಾಗಿ ನೆರವೇರಿಸಿದರು.

ಮೂಲರಾಮದೇವರ ಪೂಜೆ, ಮಂಗಳಾರತಿ ನಡೆಯಿತು. ಪ್ರಾಕಾರದಲ್ಲಿ ನಡೆದ ರಥೋತ್ಸವದಲ್ಲಿ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮಠದ ಹೊರಭಾಗ ಸಂಜೆ ಯೋಗೀಂದ್ರ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 10 ವಿದ್ವಾಂಸರಿಗೆ ‘ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಬೆಂಗಳೂರಿನ ವಿದ್ವಾನ್‌ ಮಳಗಿ ರಾಮಾಚಾರ್‌, ಮೈಸೂರಿನ ವಿದ್ವಾನ್‌ ಸಿ.ಎಚ್‌.ಶ್ರೀನಿವಾಸಮೂರ್ತಿ ಮತ್ತು ಹುಬ್ಬಳ್ಳಿಯ ಹೃದ್ರೋಗ ತಜ್ಞ ಡಾ.ವಿ.ಜಿ.ನಾಡಗೌಡ ಸೇರಿ ದೇಶದ ವಿವಿಧ ರಾಜ್ಯಗಳ ವಿದ್ವಾಂಸರು ಪ್ರಶಸ್ತಿ ಸ್ವೀಕರಿಸಿದರು. ರಾಯರ ಮಧ್ಯಾರಾಧನೆ ದಿನವಾದ ಶನಿವಾರ, ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಅರ್ಚಕರು ಶೇಷವಸ್ತ್ರದೊಂದಿಗೆ ಮಂತ್ರಾಲಯಕ್ಕೆ ಬರುವರು. ರಾಯರಿಗೆ ಸಮರ್ಪಿಸಲು ಸುಬುಧೇಂದ್ರ ತೀರ್ಥರಿಗೆ ಶೇಷವಸ್ತ್ರ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT