‘ಸಚಿವರು ನನಗೆ ಹೊಡೆದಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದುದು. ನನ್ನ ಸಮಸ್ಯೆ ಆಲಿಸಿ ನಿವೇಶನ ನೀಡುತ್ತೇನೆ, ಕಾಲಿಗೆ ಬೀಳಬೇಡ ಸುಮ್ಮನಿರು ಎಂದು ನನ್ನ ಕೈಹಿಡಿದು ಮೇಲೆತ್ತಿದ್ದರು. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಹಿಂಸೆ ನೀಡುತ್ತಿದ್ದಾರೆ. ಮನೆ ಬಳಿ ಬಂದು ನಿನಗೆ ₹ 15 ಲಕ್ಷ ಕೊಡುತ್ತೇವೆ, ಸೋಮಣ್ಣ ಕಪಾಳಕ್ಕೆ ಹೊಡೆದರು ಎಂದು ಪೊಲೀಸ್ ಠಾಣೆಗೆ ದೂರು ನೀಡು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಕೆಲ ಸಂಘಟನೆ ಮತ್ತು ರಾಜ ಕೀಯ ನಾಯಕರಿಂದ ಹಿಂಸೆಯಾಗಿದೆ’ ಎಂದು ಕೆಂಪಮ್ಮ ತಿಳಿಸಿದರು.