ಮೆಸರ್ಸ್ ಶ್ರೀನಿವಾಸುಲು, ರಾಮಗಢ ಮೈನ್ಸ್ ಅಂಡ್ ಮಿನರಲ್ಸ್ ಪ್ರೈವೇಟ್ ಲಿ., ತಂಗವೇಲು ಅಂಡ್ ಅದರ್ಸ್, ಯೋಗೇಂದ್ರ ನಾಥ್ ಸಿಂಗ್, ಮತ್ತು ಅಲ್ಲಂ ವೀರಭದ್ರಪ್ಪ ಸೇರಿದಂತೆ ಐದು ಗಣಿ ಗುತ್ತಿಗೆಗಳ ಇ– ಹರಾಜಿಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಗಸ್ಟ್ 31ರಂದು ಆಹ್ವಾನಿಸಿರುವ ಟೆಂಡರ್, ‘ಎಂಎಂಡಿಆರ್ (ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಮಾವಳಿ) ಕಾಯ್ದೆಗೆ ವಿರುದ್ಧ ವಾಗಿದೆ’ ಎಂದು ಕೇಂದ್ರ ಸರ್ಕಾರ ನೋಟಿಸ್ನಲ್ಲಿ ಹೇಳಿದೆ.