‘ನಾಡಗೀತೆ ಹಾಡಲು ಈವರೆಗೆ ಒಂದು ಕಾಲಮಿತಿ ಮತ್ತು ಕ್ರಮ ನಿಗದಿಪಡಿಸಿಲ್ಲ. ಹೀಗಾಗಿ, ಎಲ್ಲಿಯೇ ಹಾಡಲಿ ಅದಕ್ಕೆ ಸಮಯದ ಮಿತಿ ಇಲ್ಲ. ವಾದ್ಯಗೋಷ್ಠಿಯಲ್ಲಿ ಇತರ ಭಾವಗೀತೆಗಳನ್ನು ಹಾಡಿದಂತೆ ನಾಡಗೀತೆಯನ್ನೂ ನಾಲ್ಕೂವರೆ ನಿಮಿಷ ಹಾಡಲಾಗುತ್ತಿದೆ. ಅದರಲ್ಲಿ ಆಲಾಪಗಳು, ಪುನರಾವರ್ತನೆಗಳು, ಚಪ್ಪಾಳೆಗಳು ಎಲ್ಲವೂ ಇರುತ್ತದೆ. ಹೀಗಾಗಿ, ನಾಡಗೀತೆ ಯಾವಾಗ ಮುಗಿಯುತ್ತದೆ ಎಂದು ಕೆಲವು ಚಡಪಡಿಸುತ್ತಾರೆ. ಯಾವುದೇ ಪುನರಾವರ್ತನೆ ಇಲ್ಲದೆ, ಆಲಾಪಗಳಿಲ್ಲದೆ, ನಡು ನಡುವೆ ವಾದ್ಯಗೋಷ್ಠಿಗೆ ಅವಕಾಶ ಕೊಡದೆ ನಾಡಗೀತೆ ಹಾಡಿ ಮುಗಿಸುವುದು ಗೌರವದ ಸಂಕೇತ’ ಎಂದೂ ಪತ್ರದಲ್ಲಿ ಅವರು ಪ್ರತಿಪಾದಿಸಿದ್ದಾರೆ.