‘ರೈತರ ವಿಷಯ, ಅಂತರರಾಷ್ಟ್ರೀಯ ಕೃಷಿ ಕಾನೂನುಗಳು, 1993ರಲ್ಲಿ ಆದ ಗ್ಯಾಟ್ ಒಪ್ಪಂದದ ಬಗ್ಗೆ ಅವರು ನಮಗೆಲ್ಲಾ ಅರ್ಥ ಮಾಡಿಸುತ್ತಿದ್ದುದು ನೆನಪಿಗೆ ಬರುತ್ತಿದೆ. ನನ್ನ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಅವರಿಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ಪ್ರೊಫೆಸರ್ ಅವರಿಗೆ ಹಿಂದಿ ಬರುತ್ತಿರಲಿಲ್ಲ. ಆದರೂ ಇಬ್ಬರು ಇಡೀ ದೇಶ ಸುತ್ತಿ ರೈತ ಚಳವಳಿ ಕಟ್ಟಿದರು. ಚಳವಳಿಗೆ ಭಾಷೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಅವರೇ ಸಾಕ್ಷಿ. ನಂಜುಂಡಸ್ವಾಮಿ ಮಕ್ಕಳು ಕೂಡ ಇಡೀ ದೇಶ ಸುತ್ತಿ ರೈತರನ್ನು ಸಂಘಟಿಸಬೇಕು’ ಎಂದು ಹೇಳಿದರು.