ಹೊಸದುರ್ಗ: ‘ಬಡವರಿಗೆ, ನಿರ್ಗತಿಕರಿಗೆ, ಶೋಷಿತರಿಗೆ ಸಿಗಬೇಕಿದ್ದ ಮೀಸಲಾತಿ ಉಳ್ಳವರಿಗೆ ಸಿಗುವಂತಹ ಪ್ರಯತ್ನಗಳಾದರೆ ಇಲ್ಲದವರು ಯಾರನ್ನು ಮೀಸಲಾತಿ ಕೇಳಬೇಕು? ಶೋಷಿತರು, ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಮೇಲಕ್ಕೆತ್ತಲು ಸಂವಿಧಾನ ಮೀಸಲಾತಿ ಕಲ್ಪಿಸಿತ್ತು. ಪ್ರಸ್ತುತ ಆರ್ಥಿಕ ಸ್ಥಿತಿ ಆಧಾರದಲ್ಲಿ ಮೀಸಲಾತಿ ಒದಗಿಸಬೇಕೇ ಹೊರತು, ಜಾತಿಆಧಾರದಲ್ಲಿ ಅಲ್ಲ.ಒಕ್ಕಲಿಗರು, ಬ್ರಾಹ್ಮಣರು, ಲಿಂಗಾಯತರಲ್ಲಿ ಯಾರು ಬಡವರಿದ್ದಾರೆ ಅವರಿಗೆ ಮೀಸಲಾತಿ ಕೊಡುವುದು ಸಂವಿಧಾನದ ಆಶಯ’ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಪ್ರತಿಪಾದಿಸಿದರು.