ಈ ಪೈಕಿ, ಜೋಯಿಡಾ ತಾಲ್ಲೂಕಿನ ಉಳವಿ ಚೆನ್ನಬಸವೇಶ್ವರ ಮಠ, ದಾವಣಗೆರೆಯ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ಗೆ ತಲಾ ₹ 5 ಕೋಟಿ, ಉಡುಪಿ–ಕುಂಜಾರುಗಿರಿಯ ದುರ್ಗಾ ಬೆಟ್ಟದಲ್ಲಿರುವ ‘ಮಧ್ವವನ’ ಅಭಿವೃದ್ಧಿಗೆ, ಚಿಕ್ಕಮಗಳೂರಿನ ದೊಡ್ಡ ಕುರುಬರಹಳ್ಳಿಯಲ್ಲಿರುವ ಬಸವತತ್ವ ಪೀಠಕ್ಕೆ ತಲಾ ₹3 ಕೋಟಿ, ತಿಪಟೂರಿನ ಷಡಕ್ಷರ ಮಠ, ಹನಗವಾಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಬೆಂಗಳೂರಿನ ತಿಪ್ಪಶೆಟ್ಟಿ ಮಠ, ಹುಕ್ಕೇರಿ ತಾಲ್ಲೂಕಿನ ಹಾವೇರಿ ಮಠ, ಅಥಣಿಯ ಶಿವಯೋಗಿ ಮುರುಘೇಂದ್ರ ಮಠ, ಶಿವಮೊಗ್ಗದ ಬೆಕ್ಕಿನಕಲ್ಮಠಕ್ಕೆ ತಲಾ ₹ 2 ಕೋಟಿ, ದೇವಸ್ಥಾನಗಳ ಪೈಕಿ ಬನವಾಸಿಯ ಮಧುಕೇಶ್ವರ ದೇಗುಲ ರಥ ನಿರ್ಮಾಣಕ್ಕೆ ₹ 3 ಕೋಟಿ ಒದಗಿಸಲಾಗಿದೆ.