<p><strong>ಬೆಂಗಳೂರು</strong>: ವಿವಿಧ ಸಮುದಾಯಗಳ 178 ಮಠಗಳಿಗೆ ₹ 108.24 ಕೋಟಿ, 59 ದೇವಸ್ಥಾನಗಳಿಗೆ ₹ 21.35 ಕೋಟಿ, 26 ವಿವಿಧ ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್ಗಳಿಗೆ ₹ 13 ಕೋಟಿ ಸೇರಿ ಒಟ್ಟು ₹ 142.59 ಕೋಟಿ ಅನುದಾನ ಬಿಡುಗಡೆ ಮಾಡಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.</p>.<p>ಈ ಪೈಕಿ, ಜೋಯಿಡಾ ತಾಲ್ಲೂಕಿನ ಉಳವಿ ಚೆನ್ನಬಸವೇಶ್ವರ ಮಠ, ದಾವಣಗೆರೆಯ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ಗೆ ತಲಾ ₹ 5 ಕೋಟಿ, ಉಡುಪಿ–ಕುಂಜಾರುಗಿರಿಯ ದುರ್ಗಾ ಬೆಟ್ಟದಲ್ಲಿರುವ ‘ಮಧ್ವವನ’ ಅಭಿವೃದ್ಧಿಗೆ, ಚಿಕ್ಕಮಗಳೂರಿನ ದೊಡ್ಡ ಕುರುಬರಹಳ್ಳಿಯಲ್ಲಿರುವ ಬಸವತತ್ವ ಪೀಠಕ್ಕೆ ತಲಾ ₹3 ಕೋಟಿ, ತಿಪಟೂರಿನ ಷಡಕ್ಷರ ಮಠ, ಹನಗವಾಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಬೆಂಗಳೂರಿನ ತಿಪ್ಪಶೆಟ್ಟಿ ಮಠ, ಹುಕ್ಕೇರಿ ತಾಲ್ಲೂಕಿನ ಹಾವೇರಿ ಮಠ, ಅಥಣಿಯ ಶಿವಯೋಗಿ ಮುರುಘೇಂದ್ರ ಮಠ, ಶಿವಮೊಗ್ಗದ ಬೆಕ್ಕಿನಕಲ್ಮಠಕ್ಕೆ ತಲಾ ₹ 2 ಕೋಟಿ, ದೇವಸ್ಥಾನಗಳ ಪೈಕಿ ಬನವಾಸಿಯ ಮಧುಕೇಶ್ವರ ದೇಗುಲ ರಥ ನಿರ್ಮಾಣಕ್ಕೆ ₹ 3 ಕೋಟಿ ಒದಗಿಸಲಾಗಿದೆ.</p>.<p>‘ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ದಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಇದೀಗ ಹೆಚ್ಚು ವರಿ ಅನುದಾನ ಒದಗಿಸಿ ಆದೇಶಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಿವಿಧ ಸಮುದಾಯಗಳ 178 ಮಠಗಳಿಗೆ ₹ 108.24 ಕೋಟಿ, 59 ದೇವಸ್ಥಾನಗಳಿಗೆ ₹ 21.35 ಕೋಟಿ, 26 ವಿವಿಧ ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್ಗಳಿಗೆ ₹ 13 ಕೋಟಿ ಸೇರಿ ಒಟ್ಟು ₹ 142.59 ಕೋಟಿ ಅನುದಾನ ಬಿಡುಗಡೆ ಮಾಡಿ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.</p>.<p>ಈ ಪೈಕಿ, ಜೋಯಿಡಾ ತಾಲ್ಲೂಕಿನ ಉಳವಿ ಚೆನ್ನಬಸವೇಶ್ವರ ಮಠ, ದಾವಣಗೆರೆಯ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ಗೆ ತಲಾ ₹ 5 ಕೋಟಿ, ಉಡುಪಿ–ಕುಂಜಾರುಗಿರಿಯ ದುರ್ಗಾ ಬೆಟ್ಟದಲ್ಲಿರುವ ‘ಮಧ್ವವನ’ ಅಭಿವೃದ್ಧಿಗೆ, ಚಿಕ್ಕಮಗಳೂರಿನ ದೊಡ್ಡ ಕುರುಬರಹಳ್ಳಿಯಲ್ಲಿರುವ ಬಸವತತ್ವ ಪೀಠಕ್ಕೆ ತಲಾ ₹3 ಕೋಟಿ, ತಿಪಟೂರಿನ ಷಡಕ್ಷರ ಮಠ, ಹನಗವಾಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಬೆಂಗಳೂರಿನ ತಿಪ್ಪಶೆಟ್ಟಿ ಮಠ, ಹುಕ್ಕೇರಿ ತಾಲ್ಲೂಕಿನ ಹಾವೇರಿ ಮಠ, ಅಥಣಿಯ ಶಿವಯೋಗಿ ಮುರುಘೇಂದ್ರ ಮಠ, ಶಿವಮೊಗ್ಗದ ಬೆಕ್ಕಿನಕಲ್ಮಠಕ್ಕೆ ತಲಾ ₹ 2 ಕೋಟಿ, ದೇವಸ್ಥಾನಗಳ ಪೈಕಿ ಬನವಾಸಿಯ ಮಧುಕೇಶ್ವರ ದೇಗುಲ ರಥ ನಿರ್ಮಾಣಕ್ಕೆ ₹ 3 ಕೋಟಿ ಒದಗಿಸಲಾಗಿದೆ.</p>.<p>‘ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ದಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಇದೀಗ ಹೆಚ್ಚು ವರಿ ಅನುದಾನ ಒದಗಿಸಿ ಆದೇಶಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>