ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್ ಕಾನ್ಸ್ಟೆಬಲ್ ನಂದೀಶ್, ಹೆಬ್ಬಸಾಲೆ ಮುಖಂಡ ಮೇಘರಾಜ್ ಧಾವಿಸಿ, ಗಾಯಾಳುಗಳಾದ ಮಂಜುನಾಥ್, ಸುಂದರೇಶ್ ಹಾಗೂ ಮಹೇಶ್ ಅವರನ್ನು ಸ್ಟ್ರೆಚರ್ನಲ್ಲಿ ಮಲಗಿಸಿ ನಡೆದುಕೊಂಡೇ ಮುಖ್ಯರಸ್ತೆಗೆ ಬಂದು, ನಂತರ ಆಂಬುಲೆನ್ಸ್ ಮೂಲಕ ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಾ. ಮಧುಸೂದನ್, ಡಾ. ಸಂಧ್ಯಾ ಅವರು ತುರ್ತು ಚಿಕಿತ್ಸೆ ನೀಡಿದ್ದಾರೆ.