<p>ಹಕ್ಕಿಗಳ ಸಂರಕ್ಷಣೆಗೆ ಪಕ್ಷಿಧಾಮಗಳನ್ನು ಸ್ಥಾಪಿಸಲಾಗಿದೆ. ಸೆಪ್ಟೆಂಬರ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಲಕ್ಷಾಂತರ ಪಕ್ಷಿಗಳು ಹಿಂಡು ಹಿಂಡಾಗಿ ಭಾರತದ ವಿವಿಧ ಪಕ್ಷಿಧಾಮಗಳಿಗೆ ಭೇಟಿ ನೀಡುತ್ತವೆ. ಆ ಪೈಕಿ ಕರ್ನಾಟಕದಲ್ಲಿರುವ ಪಕ್ಷಿಧಾಮಗಳಿಗೂ ಭೇಟಿ ನೀಡುತ್ತವೆ. ಪ್ರವಾಸಿಗರಿಗೆ ಹಾಗೂ ಛಾಯಾಗ್ರಾಹಕರಿಗೆ ಪಕ್ಷಿಧಾಮಗಳು ಸ್ವರ್ಗವಿದ್ದಂತೆ. ಪ್ರವಾಸೋದ್ಯಮ ಇಲಾಖೆ ತಿಳಿಸಿರುವಂತೆ ರಾಜ್ಯದ ಪ್ರಮುಖ ಪಕ್ಷಿಧಾಮಗಳು ಯಾವುವು ಎಂದು ನೋಡೋಣ?</p>.ಅಳಿವಿನ ಅಂಚಿನಲ್ಲಿ ರಾಣೆಬೆನ್ನೂರು ಪಕ್ಷಿಧಾಮ.ಸೊರಬ: ಗುಡವಿ ಪಕ್ಷಿಧಾಮ ಪ್ರವೇಶ ಶುಲ್ಕ ಇಳಿಕೆಗೆ ವಿದ್ಯಾರ್ಥಿಗಳ ಆಗ್ರಹ.<h3><strong>ಗುಡವಿ ಪಕ್ಷಿಧಾಮ: </strong></h3><p>ಇದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕ್ಕಿನಲ್ಲಿದೆ. ಸೊರಬದಿಂದ 16 ಕಿಮೀ ದೂರದಲ್ಲಿರುವ ಗುಡವಿ ಪಕ್ಷಿಧಾಮ ಅಚ್ಚುಕಟ್ಟಾದ ಮತ್ತು ಸ್ವಚ್ಛವಾದ ಗುಡವಿ ಸರೋವರದ ಪಕ್ಕದಲ್ಲಿದೆ. ಈ ಪಕ್ಷಿಧಾಮದ ಲಿಟಲ್ ಕಾರ್ಮೊರೆಂಟ್, ಇಂಡಿಯನ್ ಕಾರ್ಮೊರೆಂಟ್ ಹಾಗೂ ಜಂಗಲ್ ಫೌಲ್ ಸೇರಿದಂತೆ ಹಲವು ವಲಸೆ ಹಕ್ಕಿ ನೆಲೆಯಾಗಿ ಪ್ರಸಿದ್ದಿ ಪಡೆದಿದೆ. </p><p><strong>ಭೇಟಿ ನೀಡಲು ಸೂಕ್ತ ಸಮಯ:</strong> ಜುಲೈನಿಂದ ಅಕ್ಟೋಬರ್ ನಡುವೆ.</p>.<h3>ಬೋನಾಲ್ ಪಕ್ಷಿಧಾಮ:</h3><p>ರಾಜ್ಯದ ಎರಡನೇಯ ಅತಿ ದೊಡ್ಡ ಪಕ್ಷಿಧಾಮವಾಗಿದೆ. ಅತಿ ಹೆಚ್ಚು ಜನರು ಭೇಟಿ ನೀಡುವ ಪಕ್ಷಿಧಾಮವೂ ಆಗಿದೆ. ಇದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬೋನಾಳ ಗ್ರಾಮದಲ್ಲಿದೆ. ವಲಸೆ ಹಕ್ಕಿಗಳಿಗೆ ಈ ಪಕ್ಷಿಧಾಮ ಹೆಸರುವಾಸಿಯಾಗಿದೆ. ಪ್ರವಾಸಿಗರನ್ನು ನೇರಳೆ ಹೆರಾನ್ ಮತ್ತು ಬಿಳಿ ಕುತ್ತಿಗೆಯ ಕೊಕ್ಕರೆಗಳು ಹೆಚ್ಚು ಆಕರ್ಷಣೆ ಮಾಡುತ್ತವೆ. </p><p><strong>ಭೇಟಿ ನೀಡಲು ಸೂಕ್ತ ಸಮಯ:</strong> ನವೆಂಬರ್ನಿಂದ ಫೆಬ್ರುವರಿ ನಡುವೆ.</p>.<h3>ರಂಗನತಿಟ್ಟು ಪಕ್ಷಿಧಾಮ :</h3><p>ಹೆಸರಾಂತ ಪಕ್ಷಿವಿಜ್ಞಾನಿ ಡಾ. ಸಲೀಮ್ ಅಲಿ ಅವರ ಮನವಿ ಮೇರೆಗೆ 1940 ರಲ್ಲಿ ರಂಗನತಿಟ್ಟು ಪಕ್ಷಿಧಾಮವನ್ನು ಘೋಷಿಸಲಾಯಿತು. ಈ ಪಕ್ಷಿಧಾಮ 0.67 ಚದರ ಕಿಮೀ ಪ್ರದೇಶದಲ್ಲಿ ಹರಡಿದೆ. ಕಾವೇರಿ ನದಿಯ ತಟದಲ್ಲಿರುವ ಈ ಪಕ್ಷಿಧಾಮಕ್ಕೆ ಯುರೋಪ್, ಅಮೆರಿಕಾ ಮತ್ತು ಸೈಬೀರಿಯಾದಿಂದ ಹಕ್ಕಿಗಳು ವಲಸೆ ಬರುತ್ತವೆ. ನದಿಯಲ್ಲಿ ದೋಣಿ ವಿಹಾರಕ್ಕೆ ಕೈಗೊಂಡು, ವಿವಿಧ ಜಾತಿಯ ಪಕ್ಷಿಗಳ ಆಕರ್ಷಕ ನೋಟ ಹಾಗೂ ಕೆಸರು ಮೊಸಳೆಗಳನ್ನು ವೀಕ್ಷಣೆ ಮಾಡಬಹುದು. </p><p>ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿಗಳಲ್ಲಿ ಪೇಂಟೆಡ್ ಕೊಕ್ಕರೆ, ಕಿಂಗ್ಫಿಶರ್, ಕಾರ್ಮೊರಂಟ್ಸ್, ಡಾರ್ಟರ್, ಹೆರಾನ್ಸ್, ರಿವರ್ ಟರ್ನ್, ಎಗ್ರೆಟ್ಸ್, ಇಂಡಿಯನ್ ರೋಲರ್, ಐಬಿಸ್, ಸ್ಪೂನ್ಬಿಲ್, ಗ್ರೇಟ್ ಸ್ಟೋನ್ ಪ್ಲೋವರ್ ಮತ್ತು ಪೆಲಿಕನ್ಗಳನ್ನು ಪ್ರಮುಖವಾದವು. </p><p><strong>ಭೇಟಿ ನೀಡುವ ಸಮಯ:</strong> ರಂಗನತಿಟ್ಟು ಪಕ್ಷಿಧಾಮವು ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ.</p>.<h3>ಮಂಡಗದ್ದೆ ಪಕ್ಷಿಧಾಮ:</h3><p>ಅತಿ ಸುಂದರ ಹಾಗೂ ಸಮತೋಲಿತ ಪರಿಸರ ವ್ಯವಸ್ಥೆ ಇರುವ ಪಕ್ಷಿಧಾಮಗಳಲ್ಲಿ ಮಂಡಗದ್ದೆ ಪಕ್ಷಿಧಾಮವೂ ಒಂದು. ಈ ಪಕ್ಷಿಧಾಮ ಶಿವಮೊಗ್ಗದಲ್ಲಿದ್ದು, ದ್ವೀಪದಲ್ಲಿ ನೆಲೆಗೊಂಡಿದೆ. ಸುತ್ತಲೂ ದಟ್ಟ ಕಾಡುಗಳಿಂದ ಆವೃತವಾಗಿದೆ. ಇಲ್ಲಿಗೆ 5,000 ಕ್ಕೂ ಹೆಚ್ಚು ಪಕ್ಷಿಗಳು ವಲಸೆ ಬರುತ್ತವೆ. ಮಧ್ಯಮ ಬೆಳ್ಳಕ್ಕಿ ಹಾಗೂ ಹಾವಿನ ಹಕ್ಕಿ ಇಲ್ಲಿನ ಪ್ರಮುಖ ಹಕ್ಕಿಗಳು. </p><p><strong>ಭೇಟಿ ನೀಡುವ ಸಮಯ:</strong> ಜುಲೈ ನಿಂದ ಸೆಪ್ಟೆಂಬರ್ ನಡುವೆ.</p>.<h3>ಮಾಗಡಿ ಪಕ್ಷಿಧಾಮ:</h3><p>ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮದಲ್ಲಿರುವ ಈ ಪಕ್ಷಿಧಾಮ 70 ಹೆಕ್ಟೇರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇಲ್ಲಿನ ಕೆರೆಯೇ ಪಕ್ಷಿಧಾಮವಾಗಿ ರೂಪುಗೊಂಡಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಪಕ್ಷಿಗಳ ಪ್ರಭೇದ ನೆಲೆಯಾಗಿದೆ. ಕ್ರೌಂಚ ಪಕ್ಷಿಗಳಿಗೆ ಹೆಚ್ಚು ಪ್ರಸಿದ್ದಿ ಪಡೆದಿದೆ. </p><p>ಕರ್ನಾಟಕ ಹಲವು ಸುಂದರವಾದ ಪಕ್ಷಿಧಾಮಗಳಿಂದ ಕೂಡಿದೆ. ಈ ಮೇಲಿನ ಪಕ್ಷಿಧಾಮಗಳ ಭೇಟಿ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಕ್ಕಿಗಳ ಸಂರಕ್ಷಣೆಗೆ ಪಕ್ಷಿಧಾಮಗಳನ್ನು ಸ್ಥಾಪಿಸಲಾಗಿದೆ. ಸೆಪ್ಟೆಂಬರ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಲಕ್ಷಾಂತರ ಪಕ್ಷಿಗಳು ಹಿಂಡು ಹಿಂಡಾಗಿ ಭಾರತದ ವಿವಿಧ ಪಕ್ಷಿಧಾಮಗಳಿಗೆ ಭೇಟಿ ನೀಡುತ್ತವೆ. ಆ ಪೈಕಿ ಕರ್ನಾಟಕದಲ್ಲಿರುವ ಪಕ್ಷಿಧಾಮಗಳಿಗೂ ಭೇಟಿ ನೀಡುತ್ತವೆ. ಪ್ರವಾಸಿಗರಿಗೆ ಹಾಗೂ ಛಾಯಾಗ್ರಾಹಕರಿಗೆ ಪಕ್ಷಿಧಾಮಗಳು ಸ್ವರ್ಗವಿದ್ದಂತೆ. ಪ್ರವಾಸೋದ್ಯಮ ಇಲಾಖೆ ತಿಳಿಸಿರುವಂತೆ ರಾಜ್ಯದ ಪ್ರಮುಖ ಪಕ್ಷಿಧಾಮಗಳು ಯಾವುವು ಎಂದು ನೋಡೋಣ?</p>.ಅಳಿವಿನ ಅಂಚಿನಲ್ಲಿ ರಾಣೆಬೆನ್ನೂರು ಪಕ್ಷಿಧಾಮ.ಸೊರಬ: ಗುಡವಿ ಪಕ್ಷಿಧಾಮ ಪ್ರವೇಶ ಶುಲ್ಕ ಇಳಿಕೆಗೆ ವಿದ್ಯಾರ್ಥಿಗಳ ಆಗ್ರಹ.<h3><strong>ಗುಡವಿ ಪಕ್ಷಿಧಾಮ: </strong></h3><p>ಇದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕ್ಕಿನಲ್ಲಿದೆ. ಸೊರಬದಿಂದ 16 ಕಿಮೀ ದೂರದಲ್ಲಿರುವ ಗುಡವಿ ಪಕ್ಷಿಧಾಮ ಅಚ್ಚುಕಟ್ಟಾದ ಮತ್ತು ಸ್ವಚ್ಛವಾದ ಗುಡವಿ ಸರೋವರದ ಪಕ್ಕದಲ್ಲಿದೆ. ಈ ಪಕ್ಷಿಧಾಮದ ಲಿಟಲ್ ಕಾರ್ಮೊರೆಂಟ್, ಇಂಡಿಯನ್ ಕಾರ್ಮೊರೆಂಟ್ ಹಾಗೂ ಜಂಗಲ್ ಫೌಲ್ ಸೇರಿದಂತೆ ಹಲವು ವಲಸೆ ಹಕ್ಕಿ ನೆಲೆಯಾಗಿ ಪ್ರಸಿದ್ದಿ ಪಡೆದಿದೆ. </p><p><strong>ಭೇಟಿ ನೀಡಲು ಸೂಕ್ತ ಸಮಯ:</strong> ಜುಲೈನಿಂದ ಅಕ್ಟೋಬರ್ ನಡುವೆ.</p>.<h3>ಬೋನಾಲ್ ಪಕ್ಷಿಧಾಮ:</h3><p>ರಾಜ್ಯದ ಎರಡನೇಯ ಅತಿ ದೊಡ್ಡ ಪಕ್ಷಿಧಾಮವಾಗಿದೆ. ಅತಿ ಹೆಚ್ಚು ಜನರು ಭೇಟಿ ನೀಡುವ ಪಕ್ಷಿಧಾಮವೂ ಆಗಿದೆ. ಇದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬೋನಾಳ ಗ್ರಾಮದಲ್ಲಿದೆ. ವಲಸೆ ಹಕ್ಕಿಗಳಿಗೆ ಈ ಪಕ್ಷಿಧಾಮ ಹೆಸರುವಾಸಿಯಾಗಿದೆ. ಪ್ರವಾಸಿಗರನ್ನು ನೇರಳೆ ಹೆರಾನ್ ಮತ್ತು ಬಿಳಿ ಕುತ್ತಿಗೆಯ ಕೊಕ್ಕರೆಗಳು ಹೆಚ್ಚು ಆಕರ್ಷಣೆ ಮಾಡುತ್ತವೆ. </p><p><strong>ಭೇಟಿ ನೀಡಲು ಸೂಕ್ತ ಸಮಯ:</strong> ನವೆಂಬರ್ನಿಂದ ಫೆಬ್ರುವರಿ ನಡುವೆ.</p>.<h3>ರಂಗನತಿಟ್ಟು ಪಕ್ಷಿಧಾಮ :</h3><p>ಹೆಸರಾಂತ ಪಕ್ಷಿವಿಜ್ಞಾನಿ ಡಾ. ಸಲೀಮ್ ಅಲಿ ಅವರ ಮನವಿ ಮೇರೆಗೆ 1940 ರಲ್ಲಿ ರಂಗನತಿಟ್ಟು ಪಕ್ಷಿಧಾಮವನ್ನು ಘೋಷಿಸಲಾಯಿತು. ಈ ಪಕ್ಷಿಧಾಮ 0.67 ಚದರ ಕಿಮೀ ಪ್ರದೇಶದಲ್ಲಿ ಹರಡಿದೆ. ಕಾವೇರಿ ನದಿಯ ತಟದಲ್ಲಿರುವ ಈ ಪಕ್ಷಿಧಾಮಕ್ಕೆ ಯುರೋಪ್, ಅಮೆರಿಕಾ ಮತ್ತು ಸೈಬೀರಿಯಾದಿಂದ ಹಕ್ಕಿಗಳು ವಲಸೆ ಬರುತ್ತವೆ. ನದಿಯಲ್ಲಿ ದೋಣಿ ವಿಹಾರಕ್ಕೆ ಕೈಗೊಂಡು, ವಿವಿಧ ಜಾತಿಯ ಪಕ್ಷಿಗಳ ಆಕರ್ಷಕ ನೋಟ ಹಾಗೂ ಕೆಸರು ಮೊಸಳೆಗಳನ್ನು ವೀಕ್ಷಣೆ ಮಾಡಬಹುದು. </p><p>ಇಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿಗಳಲ್ಲಿ ಪೇಂಟೆಡ್ ಕೊಕ್ಕರೆ, ಕಿಂಗ್ಫಿಶರ್, ಕಾರ್ಮೊರಂಟ್ಸ್, ಡಾರ್ಟರ್, ಹೆರಾನ್ಸ್, ರಿವರ್ ಟರ್ನ್, ಎಗ್ರೆಟ್ಸ್, ಇಂಡಿಯನ್ ರೋಲರ್, ಐಬಿಸ್, ಸ್ಪೂನ್ಬಿಲ್, ಗ್ರೇಟ್ ಸ್ಟೋನ್ ಪ್ಲೋವರ್ ಮತ್ತು ಪೆಲಿಕನ್ಗಳನ್ನು ಪ್ರಮುಖವಾದವು. </p><p><strong>ಭೇಟಿ ನೀಡುವ ಸಮಯ:</strong> ರಂಗನತಿಟ್ಟು ಪಕ್ಷಿಧಾಮವು ಎಲ್ಲಾ ದಿನಗಳಲ್ಲೂ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ.</p>.<h3>ಮಂಡಗದ್ದೆ ಪಕ್ಷಿಧಾಮ:</h3><p>ಅತಿ ಸುಂದರ ಹಾಗೂ ಸಮತೋಲಿತ ಪರಿಸರ ವ್ಯವಸ್ಥೆ ಇರುವ ಪಕ್ಷಿಧಾಮಗಳಲ್ಲಿ ಮಂಡಗದ್ದೆ ಪಕ್ಷಿಧಾಮವೂ ಒಂದು. ಈ ಪಕ್ಷಿಧಾಮ ಶಿವಮೊಗ್ಗದಲ್ಲಿದ್ದು, ದ್ವೀಪದಲ್ಲಿ ನೆಲೆಗೊಂಡಿದೆ. ಸುತ್ತಲೂ ದಟ್ಟ ಕಾಡುಗಳಿಂದ ಆವೃತವಾಗಿದೆ. ಇಲ್ಲಿಗೆ 5,000 ಕ್ಕೂ ಹೆಚ್ಚು ಪಕ್ಷಿಗಳು ವಲಸೆ ಬರುತ್ತವೆ. ಮಧ್ಯಮ ಬೆಳ್ಳಕ್ಕಿ ಹಾಗೂ ಹಾವಿನ ಹಕ್ಕಿ ಇಲ್ಲಿನ ಪ್ರಮುಖ ಹಕ್ಕಿಗಳು. </p><p><strong>ಭೇಟಿ ನೀಡುವ ಸಮಯ:</strong> ಜುಲೈ ನಿಂದ ಸೆಪ್ಟೆಂಬರ್ ನಡುವೆ.</p>.<h3>ಮಾಗಡಿ ಪಕ್ಷಿಧಾಮ:</h3><p>ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮದಲ್ಲಿರುವ ಈ ಪಕ್ಷಿಧಾಮ 70 ಹೆಕ್ಟೇರ್ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇಲ್ಲಿನ ಕೆರೆಯೇ ಪಕ್ಷಿಧಾಮವಾಗಿ ರೂಪುಗೊಂಡಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಪಕ್ಷಿಗಳ ಪ್ರಭೇದ ನೆಲೆಯಾಗಿದೆ. ಕ್ರೌಂಚ ಪಕ್ಷಿಗಳಿಗೆ ಹೆಚ್ಚು ಪ್ರಸಿದ್ದಿ ಪಡೆದಿದೆ. </p><p>ಕರ್ನಾಟಕ ಹಲವು ಸುಂದರವಾದ ಪಕ್ಷಿಧಾಮಗಳಿಂದ ಕೂಡಿದೆ. ಈ ಮೇಲಿನ ಪಕ್ಷಿಧಾಮಗಳ ಭೇಟಿ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>