<p><strong>ನವದೆಹಲಿ</strong>: ಬರ ಮತ್ತು ಪ್ರವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ನದಿ ಜೋಡಣೆ ಶೀಘ್ರದಲ್ಲೇ ಆರಂಭವಾಗಲಿದೆ. 87 ಶತಕೋಟಿ ಡಾಲರ್ (ಅಂದಾಜು ₹5571ಶತಕೋಟಿ) ವೆಚ್ಚದ ಯೋಜನೆ ಇದಾಗಿದ್ದು ದೇಶದ ಪ್ರಮುಖ ನದಿಗಳನ್ನು ಜೋಡಿಸುವ ಕಾರ್ಯ ಈ ತಿಂಗಳಲ್ಲೇ ಶುರುವಾಗಲಿದೆ.</p>.<p>ಈ ಯೋಜನೆಯಡಿಯಲ್ಲಿ ಗಂಗಾ ನದಿ ಸೇರಿದಂತೆ ದೇಶದ 60 ನದಿಗಳನ್ನು ಜೋಡಿಸುವ ಕಾರ್ಯ ನಡೆಯಲಿದೆ. ಕಳೆದ ಎರಡು ವರ್ಷದಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದ ಭಾರತ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಇತ್ತೀಚಿನ ವಾರಗಳಲ್ಲಿ ಭಾರಿ ಪ್ರವಾಹವಾಗಿತ್ತು.</p>.<p>ನದಿ ಜೋಡಣೆ ವಿಷಯದಲ್ಲಿ ಪರಿಸರವಾದಿ, ಹುಲಿ ಪ್ರಿಯರು ಮತ್ತು ಮಾಜಿ ರಾಜ ಕುಟುಂಬದವರ ವಿರೋಧ ವ್ಯಕ್ತವಾಗಿದ್ದರೂ ಮೋದಿಯವರು ಈ ಯೋಜನೆಯ ಮೊದಲ ಹಂತವನ್ನು ಆರಂಭಿಸಲು ಸನ್ನದ್ಧರಾಗಿದ್ದಾರೆ. ಯೋಜನೆಯ ಮೊದಲ ಹಂತದಲ್ಲಿ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.</p>.<p>ಉತ್ತರ ಪ್ರದೇಶದ ಕರ್ನಾವತಿ ನದಿ (ಕೆನ್ ನದಿ)ಯನ್ನು ಮಧ್ಯಪ್ರದೇಶದಲ್ಲಿರುವ ಬೆತ್ವಾ ನದಿಗಳನ್ನು 22 ಕಿಲೋಮೀಟರ್ ಕಾಲುವೆಯ ಮೂಲಕ ಜೋಡಿಸಿ ಕೆನ್ ನದಿಗೆ ಅಣೆಕಟ್ಟು ನಿರ್ಮಿಸುವ ಕಾರ್ಯವೂ ಈ ಯೋಜನೆಯ ಭಾಗವಾಗಲಿದೆ.</p>.<p>ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಕೆನ್- ಬೆತ್ವಾ ನದಿ ಜೋಡಣೆ ಮೂಲಕ ನರೇಂದ್ರ ಮೋದಿ ಈ ಯೋಜನೆಗೆ ನಾಂದಿ ಹಾಡಲಿದ್ದಾರೆ.</p>.<p>ಗಂಗಾ, ಗೋದಾವರಿ ಮತ್ತು ಮಹಾನದಿ ಹರಿಯುವ ಭಾಗಗಗಳಲ್ಲಿ ಅಣೆಕಟ್ಟು ನಿರ್ಮಿಸಿ ಕಾಲುವೆಗಳ ಮೂಲಕ ಈ ನದಿಗಳನ್ನು ಜೋಡಣೆ ಮಾಡುವ ಮೂಲಕ ಬರ ಮತ್ತು ಪ್ರವಾಹಗಳನ್ನು ತಡೆಯಬಹುದು ಎಂದು ಸರ್ಕಾರಿ ಮೂಲಗಳು ಹೇಳಿವೆ.</p>.<p>ಕೆಲವೊಂದು ತಜ್ಞರ ಪ್ರಕಾರ ಈ ರೀತಿ ನದಿ ಜೋಡಣೆ ಮಾಡುವ ಮೂಲಕ ನೀರನ್ನು ಕೃಷಿ ಕಾರ್ಯಗಳಿಗಾಗಿ ಸದುಪಯೋಗ ಪಡಿಸಿಕೊಳ್ಳಬಹುದು. ಅದೇ ವೇಳೆ ಈ ರೀತಿ ನದಿ ಜೋಡಣೆ ಮಾಡಿದರೆ ನೈಸರ್ಗಿಕ ಏರು ಪೇರು ಉಂಟಾಗುತ್ತದೆ ಎಂದು ಪರಿಸರವಾದಿಗಳು ಮತ್ತು ವನ್ಯಜೀವಿ ಸಂರಕ್ಷಕರು ವಾದಿಸುತ್ತಾರೆ.</p>.<p>ಬಿಜೆಪಿ ಆಡಳಿತಾರೂಡ ರಾಜ್ಯದಲ್ಲೇ ಮೋದಿಯವರ ಈ ಯೋಜನೆ ಆರಂಭವಾಗುತ್ತಿರುವುದು ವಿಶೇಷ. ಕೆನ್ ನದಿ ಹುಲಿ ರಕ್ಷಿತಾರಣ್ಯದ ಮೂಲಕ 425 ಕಿಮೀ ಹರಿಯುತ್ತಿದೆ. ಹಾಗಾಗಿ ಅಣೆಕಟ್ಟು ನಿರ್ಮಿಸಲು ಇಲ್ಲಿ ಶೇ.6.5 ರಷ್ಟು ಕಾಡನ್ನು ಕಡಿಯಬೇಕಾಗುತ್ತದೆ ಮಾತ್ರವಲ್ಲದೆ 10 ಗ್ರಾಮದ 2,000 ಕುಟುಂಬದವರನ್ನು ಅಲ್ಲಿಂದ ಸ್ಥಳಾಂತರಿಸಬೇಕಾಗುತ್ತದೆ.</p>.<p>ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರಿ ಮತ್ತು ಅರಣ್ಯ ಸಂರಕ್ಷಣೆ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ಮೂಲಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿವೆ.</p>.<p>ಇನ್ನು ಕೆಲವೇ ವಾರಗಳಲ್ಲಿ ಮೋದಿ ಸಚಿವ ಸಂಪುಟವು ಇಲ್ಲಿ ಯೋಜನೆಯನ್ನು ಆರಂಭಿಸಲಿದೆ ಎಂದು ಬಲ್ಲಮೂಲಗಳು ಹೇಳಿವೆ.</p>.<p>ಇದರ ಜತೆಗೆ ಪಶ್ಚಿಮ ಭಾರತದಲ್ಲಿರುವ ತಪಿ ಮತ್ತು ನರ್ಮದಾ ನದಿ, ದಮನ್ ಗಂಗಾ ಮತ್ತು ಪಿಂಜಾಲ್ ನದಿ ಜೋಡಣೆಯ ಕಾರ್ಯವನ್ನೂ ಸರ್ಕಾರ ಕೈಗೆತ್ತಿಕೊಳ್ಳಲಿದೆ. ಈ ಯೋಜನೆ ಮೋದಿಯವರ ರಾಜ್ಯವಾದ ಗುಜರಾತ್, ನೆರೆ ರಾಜ್ಯವಾದ ಮಹಾರಾಷ್ಟ್ರದಲ್ಲಿ ಆರಂಭಗೊಳ್ಳಲಿದೆ.<br /> ನದಿ ಜೋಡಣೆ ಯೋಜನೆಯು 2002ರಲ್ಲಿ ಬಿಜೆಪಿ ಸರ್ಕಾರದಿಂದಲೇ ಪ್ರಸ್ತಾಪವಾಗಿತ್ತು. ಆದರೆ ರಾಜ್ಯ ಸರ್ಕಾರಗಳು ನೀರು ಹಂಚಿಕೆ ಬಗ್ಗೆ ತಕರಾರು ಎಬ್ಬಿಸಿದ್ದರಿಂದ ಆ ಯೋಜನೆ ಕಾರ್ಯ ಪ್ರವೃತ್ತವಾಗಿರಲಿಲ್ಲ.</p>.<p>ಆದಾಗ್ಯೂ, ಬಿಜೆಪಿ ಆಡಳಿತಾರೂಡ ರಾಜ್ಯಗಳಲ್ಲಿ ನದಿ ಜೋಡಣೆ ಕಾರ್ಯಗಳಿಗೆ ಯಾವುದೇ ಅಡ್ಡಿಯುಂಟಾಗಲ್ಲ ಎಂಬ ಭರವಸೆಯಿಂದಲೇ ಮೋದಿ ಸರ್ಕಾರ ಈ ರಾಜ್ಯಗಳಲ್ಲಿ ಯೋಜನೆಯನ್ನು ಆರಂಭಿಸಲು ಮುಂದಾಗಿದೆ.</p>.<p><strong>ವನ್ಯ ಜೀವಿಗಳ ವಾಸಸ್ಥಳಕ್ಕೆ ಕುತ್ತು</strong><br /> ಕೆನ್ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟು 77 ಮೀಟರ್ ಎತ್ತರ ಮತ್ತು 2 ಕಿಮೀ ಉದ್ದವಿರಲಿದೆ. ಹೀಗೆ ಅಣೆಕಟ್ಟು ನಿರ್ಮಿಸಿದರೆ 9,000 ಹೆಕ್ಟೇರ್ ಭೂಮಿ ನೀರಿನಲ್ಲಿ ಮುಳುಗಲಿದೆ. ಹೀಗೆ ಮುಳುಗಡೆಯಾಗುವ ಭೂಮಿ ಕಾಡು ಪ್ರದೇಶವಾಗಿದೆ. ಅಂದರೆ ಮಧ್ಯಪ್ರದೇಶದಲ್ಲಿರುವ ಪನ್ನಾ ಹುಲಿ ರಕ್ಷಿತಾರಣ್ಯದ ಬಹುತೇಕ ಭಾಗವು ನೀರಿನಲ್ಲಿ ಮುಳುಗಲಿದೆ. ಪ್ರವಾಸಿಗರ ಆಕರ್ಷಣೀಯ ಸ್ಥಳವಾದ ಈ ಕಾಡಿನಲ್ಲಿ 30-35 ಹುಲಿಗಳು ಮತ್ತು ಸುಮಾರು 500ರಷ್ಟು ರಣಹದ್ದುಗಳಿವೆ.</p>.<p>ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿದರೆ ಪಾಕೃತಿಕ ವಿಕೋಪಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಪನ್ನಾ ಪ್ರದೇಶದಲ್ಲಿ ರಾಜಾಡಳಿತ ನಡೆಸಿದ್ದ ರಾಜಮನೆತನದ ಶ್ಯಾಮೇಂದ್ರ ಸಿಂಗ್ ಹೇಳಿದ್ದಾರೆ. ಆದರೆ ವನ್ಯಜೀವಿಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಯವರು ಹೇಳಿದ್ದಾರೆ.</p>.<p>ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿದರೆ ನಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಿಗುತ್ತದೆ. ಎಲ್ಲರಿಗೂ ಇದರಿಂದ ಉಪಕಾರವಾಗುವುದಾದರೆ ನಾವು ಇದನ್ನು ವಿರೋಧಿಸಲ್ಲ ಅಂತಾರೆ ಗ್ರಾಮದ ಹಿರಿಯ ವ್ಯಕ್ತಿ ಮುನ್ನಾ ಯಾದವ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬರ ಮತ್ತು ಪ್ರವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ನದಿ ಜೋಡಣೆ ಶೀಘ್ರದಲ್ಲೇ ಆರಂಭವಾಗಲಿದೆ. 87 ಶತಕೋಟಿ ಡಾಲರ್ (ಅಂದಾಜು ₹5571ಶತಕೋಟಿ) ವೆಚ್ಚದ ಯೋಜನೆ ಇದಾಗಿದ್ದು ದೇಶದ ಪ್ರಮುಖ ನದಿಗಳನ್ನು ಜೋಡಿಸುವ ಕಾರ್ಯ ಈ ತಿಂಗಳಲ್ಲೇ ಶುರುವಾಗಲಿದೆ.</p>.<p>ಈ ಯೋಜನೆಯಡಿಯಲ್ಲಿ ಗಂಗಾ ನದಿ ಸೇರಿದಂತೆ ದೇಶದ 60 ನದಿಗಳನ್ನು ಜೋಡಿಸುವ ಕಾರ್ಯ ನಡೆಯಲಿದೆ. ಕಳೆದ ಎರಡು ವರ್ಷದಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದ ಭಾರತ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಇತ್ತೀಚಿನ ವಾರಗಳಲ್ಲಿ ಭಾರಿ ಪ್ರವಾಹವಾಗಿತ್ತು.</p>.<p>ನದಿ ಜೋಡಣೆ ವಿಷಯದಲ್ಲಿ ಪರಿಸರವಾದಿ, ಹುಲಿ ಪ್ರಿಯರು ಮತ್ತು ಮಾಜಿ ರಾಜ ಕುಟುಂಬದವರ ವಿರೋಧ ವ್ಯಕ್ತವಾಗಿದ್ದರೂ ಮೋದಿಯವರು ಈ ಯೋಜನೆಯ ಮೊದಲ ಹಂತವನ್ನು ಆರಂಭಿಸಲು ಸನ್ನದ್ಧರಾಗಿದ್ದಾರೆ. ಯೋಜನೆಯ ಮೊದಲ ಹಂತದಲ್ಲಿ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.</p>.<p>ಉತ್ತರ ಪ್ರದೇಶದ ಕರ್ನಾವತಿ ನದಿ (ಕೆನ್ ನದಿ)ಯನ್ನು ಮಧ್ಯಪ್ರದೇಶದಲ್ಲಿರುವ ಬೆತ್ವಾ ನದಿಗಳನ್ನು 22 ಕಿಲೋಮೀಟರ್ ಕಾಲುವೆಯ ಮೂಲಕ ಜೋಡಿಸಿ ಕೆನ್ ನದಿಗೆ ಅಣೆಕಟ್ಟು ನಿರ್ಮಿಸುವ ಕಾರ್ಯವೂ ಈ ಯೋಜನೆಯ ಭಾಗವಾಗಲಿದೆ.</p>.<p>ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಕೆನ್- ಬೆತ್ವಾ ನದಿ ಜೋಡಣೆ ಮೂಲಕ ನರೇಂದ್ರ ಮೋದಿ ಈ ಯೋಜನೆಗೆ ನಾಂದಿ ಹಾಡಲಿದ್ದಾರೆ.</p>.<p>ಗಂಗಾ, ಗೋದಾವರಿ ಮತ್ತು ಮಹಾನದಿ ಹರಿಯುವ ಭಾಗಗಗಳಲ್ಲಿ ಅಣೆಕಟ್ಟು ನಿರ್ಮಿಸಿ ಕಾಲುವೆಗಳ ಮೂಲಕ ಈ ನದಿಗಳನ್ನು ಜೋಡಣೆ ಮಾಡುವ ಮೂಲಕ ಬರ ಮತ್ತು ಪ್ರವಾಹಗಳನ್ನು ತಡೆಯಬಹುದು ಎಂದು ಸರ್ಕಾರಿ ಮೂಲಗಳು ಹೇಳಿವೆ.</p>.<p>ಕೆಲವೊಂದು ತಜ್ಞರ ಪ್ರಕಾರ ಈ ರೀತಿ ನದಿ ಜೋಡಣೆ ಮಾಡುವ ಮೂಲಕ ನೀರನ್ನು ಕೃಷಿ ಕಾರ್ಯಗಳಿಗಾಗಿ ಸದುಪಯೋಗ ಪಡಿಸಿಕೊಳ್ಳಬಹುದು. ಅದೇ ವೇಳೆ ಈ ರೀತಿ ನದಿ ಜೋಡಣೆ ಮಾಡಿದರೆ ನೈಸರ್ಗಿಕ ಏರು ಪೇರು ಉಂಟಾಗುತ್ತದೆ ಎಂದು ಪರಿಸರವಾದಿಗಳು ಮತ್ತು ವನ್ಯಜೀವಿ ಸಂರಕ್ಷಕರು ವಾದಿಸುತ್ತಾರೆ.</p>.<p>ಬಿಜೆಪಿ ಆಡಳಿತಾರೂಡ ರಾಜ್ಯದಲ್ಲೇ ಮೋದಿಯವರ ಈ ಯೋಜನೆ ಆರಂಭವಾಗುತ್ತಿರುವುದು ವಿಶೇಷ. ಕೆನ್ ನದಿ ಹುಲಿ ರಕ್ಷಿತಾರಣ್ಯದ ಮೂಲಕ 425 ಕಿಮೀ ಹರಿಯುತ್ತಿದೆ. ಹಾಗಾಗಿ ಅಣೆಕಟ್ಟು ನಿರ್ಮಿಸಲು ಇಲ್ಲಿ ಶೇ.6.5 ರಷ್ಟು ಕಾಡನ್ನು ಕಡಿಯಬೇಕಾಗುತ್ತದೆ ಮಾತ್ರವಲ್ಲದೆ 10 ಗ್ರಾಮದ 2,000 ಕುಟುಂಬದವರನ್ನು ಅಲ್ಲಿಂದ ಸ್ಥಳಾಂತರಿಸಬೇಕಾಗುತ್ತದೆ.</p>.<p>ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರಿ ಮತ್ತು ಅರಣ್ಯ ಸಂರಕ್ಷಣೆ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ಮೂಲಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿವೆ.</p>.<p>ಇನ್ನು ಕೆಲವೇ ವಾರಗಳಲ್ಲಿ ಮೋದಿ ಸಚಿವ ಸಂಪುಟವು ಇಲ್ಲಿ ಯೋಜನೆಯನ್ನು ಆರಂಭಿಸಲಿದೆ ಎಂದು ಬಲ್ಲಮೂಲಗಳು ಹೇಳಿವೆ.</p>.<p>ಇದರ ಜತೆಗೆ ಪಶ್ಚಿಮ ಭಾರತದಲ್ಲಿರುವ ತಪಿ ಮತ್ತು ನರ್ಮದಾ ನದಿ, ದಮನ್ ಗಂಗಾ ಮತ್ತು ಪಿಂಜಾಲ್ ನದಿ ಜೋಡಣೆಯ ಕಾರ್ಯವನ್ನೂ ಸರ್ಕಾರ ಕೈಗೆತ್ತಿಕೊಳ್ಳಲಿದೆ. ಈ ಯೋಜನೆ ಮೋದಿಯವರ ರಾಜ್ಯವಾದ ಗುಜರಾತ್, ನೆರೆ ರಾಜ್ಯವಾದ ಮಹಾರಾಷ್ಟ್ರದಲ್ಲಿ ಆರಂಭಗೊಳ್ಳಲಿದೆ.<br /> ನದಿ ಜೋಡಣೆ ಯೋಜನೆಯು 2002ರಲ್ಲಿ ಬಿಜೆಪಿ ಸರ್ಕಾರದಿಂದಲೇ ಪ್ರಸ್ತಾಪವಾಗಿತ್ತು. ಆದರೆ ರಾಜ್ಯ ಸರ್ಕಾರಗಳು ನೀರು ಹಂಚಿಕೆ ಬಗ್ಗೆ ತಕರಾರು ಎಬ್ಬಿಸಿದ್ದರಿಂದ ಆ ಯೋಜನೆ ಕಾರ್ಯ ಪ್ರವೃತ್ತವಾಗಿರಲಿಲ್ಲ.</p>.<p>ಆದಾಗ್ಯೂ, ಬಿಜೆಪಿ ಆಡಳಿತಾರೂಡ ರಾಜ್ಯಗಳಲ್ಲಿ ನದಿ ಜೋಡಣೆ ಕಾರ್ಯಗಳಿಗೆ ಯಾವುದೇ ಅಡ್ಡಿಯುಂಟಾಗಲ್ಲ ಎಂಬ ಭರವಸೆಯಿಂದಲೇ ಮೋದಿ ಸರ್ಕಾರ ಈ ರಾಜ್ಯಗಳಲ್ಲಿ ಯೋಜನೆಯನ್ನು ಆರಂಭಿಸಲು ಮುಂದಾಗಿದೆ.</p>.<p><strong>ವನ್ಯ ಜೀವಿಗಳ ವಾಸಸ್ಥಳಕ್ಕೆ ಕುತ್ತು</strong><br /> ಕೆನ್ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟು 77 ಮೀಟರ್ ಎತ್ತರ ಮತ್ತು 2 ಕಿಮೀ ಉದ್ದವಿರಲಿದೆ. ಹೀಗೆ ಅಣೆಕಟ್ಟು ನಿರ್ಮಿಸಿದರೆ 9,000 ಹೆಕ್ಟೇರ್ ಭೂಮಿ ನೀರಿನಲ್ಲಿ ಮುಳುಗಲಿದೆ. ಹೀಗೆ ಮುಳುಗಡೆಯಾಗುವ ಭೂಮಿ ಕಾಡು ಪ್ರದೇಶವಾಗಿದೆ. ಅಂದರೆ ಮಧ್ಯಪ್ರದೇಶದಲ್ಲಿರುವ ಪನ್ನಾ ಹುಲಿ ರಕ್ಷಿತಾರಣ್ಯದ ಬಹುತೇಕ ಭಾಗವು ನೀರಿನಲ್ಲಿ ಮುಳುಗಲಿದೆ. ಪ್ರವಾಸಿಗರ ಆಕರ್ಷಣೀಯ ಸ್ಥಳವಾದ ಈ ಕಾಡಿನಲ್ಲಿ 30-35 ಹುಲಿಗಳು ಮತ್ತು ಸುಮಾರು 500ರಷ್ಟು ರಣಹದ್ದುಗಳಿವೆ.</p>.<p>ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿದರೆ ಪಾಕೃತಿಕ ವಿಕೋಪಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಪನ್ನಾ ಪ್ರದೇಶದಲ್ಲಿ ರಾಜಾಡಳಿತ ನಡೆಸಿದ್ದ ರಾಜಮನೆತನದ ಶ್ಯಾಮೇಂದ್ರ ಸಿಂಗ್ ಹೇಳಿದ್ದಾರೆ. ಆದರೆ ವನ್ಯಜೀವಿಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಯವರು ಹೇಳಿದ್ದಾರೆ.</p>.<p>ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿದರೆ ನಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಿಗುತ್ತದೆ. ಎಲ್ಲರಿಗೂ ಇದರಿಂದ ಉಪಕಾರವಾಗುವುದಾದರೆ ನಾವು ಇದನ್ನು ವಿರೋಧಿಸಲ್ಲ ಅಂತಾರೆ ಗ್ರಾಮದ ಹಿರಿಯ ವ್ಯಕ್ತಿ ಮುನ್ನಾ ಯಾದವ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>