ಮುನ್ನಾರ್ ಸಮೀಪದ ಬೆಟ್ಟಗಳು ಹಲವು ಅಪರೂಪದ ನೈಸರ್ಗಿಕ ಕೌತುಕದ ತವರು.ಈ ಬೆಟ್ಟಸಾಲುಗಳಲ್ಲಿ ನೀಲಕುರಂಜಿ ಪೊದೆಗಳು 3 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ವ್ಯಾಪಿಸಿವೆ. ಪೊದೆಯಾಗಿ ಬೆಳೆಯುವ ಕುರಿಂಜಿ ಸಸಿಗಳು ಜೀವಿತಾವಧಿಯಲ್ಲಿ ಒಂದು ಬಾರಿ ಹೂಬಿಟ್ಟ, ಬಳಿಕ ಒಣಗಿ ಹೋಗುತ್ತವೆ. ಸತ್ತ ಸಸಿಗಳಿಂದ ಉದುರಿದ ಬೀಜಗಳು 30ರಿಂದ 60 ಸೆಂ.ಮೀ. ಬೆಳೆದು, ಕಣ್ಮನ ಸೆಳೆಯುವ ಹೂ ಬಿಡುತ್ತವೆ. ಅದಕ್ಕೆ ಬರೋಬ್ಬರಿ 12 ವಸಂತಗಳನ್ನು ತೆಗೆದುಕೊಳ್ಳುತ್ತವೆ. ಈ ಸುರೂಪದ ಹೂಗಳ ಸೌಂದರ್ಯವನ್ನು ಕಣ್ಗಳಿಂದ ಸವಿಯಲು ಬನ್ನಿರಂದು ಕೇರಳದ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಕೈಬೀಸಿ ಕರೆಯಲು ಶುರು ಮಾಡಿದೆ.