ಪಕ್ಷದಲ್ಲಿ ಸಂಘಟನೆ ಬಲಪಡಿಸಲು ಬದಲಾವಣೆಗೆ ಒತ್ತಾಯಿಸಿ ಜಿ–23ಸದಸ್ಯರು ಬುಧವಾರ ಮತ್ತು ಗುರುವಾರ ಸರಣಿ ಸಭೆಗಳನ್ನು ನಡೆಸಿದ್ದರು.
‘ಸಾಮೂಹಿಕ ನಾಯಕತ್ವ’ದ ಬಗ್ಗೆ ಜಿ–23 ಸದಸ್ಯರಿಂದ ಒತ್ತಾಯ ಕೇಳಿ ಬಂದ ಬಳಿಕ ಗುರುವಾರ, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಜೊತೆ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದರು. ಉಭಯ ನಾಯಕರು ಭಿನ್ನಮತೀಯರ ಪ್ರಮುಖ ಬೇಡಿಕೆಯಾದ ಪಕ್ಷದ ಸಂಘಟನೆಯ ಪುನಶ್ಚೇತನದ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.