<p><strong>ನವದೆಹಲಿ:</strong> ಬಿಹಾರ ಚುನಾವಣೆಯಲ್ಲಿ ಕಳೆದ ಎರಡು ದಶಕಗಳಲ್ಲಿ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಈ ಅವಧಿಯಲ್ಲಿ ಮಿತ್ರರು ಶತ್ರುಗಳಾಗಿದ್ದಾರೆ, ಶತ್ರುಗಳು ಮಿತ್ರರಾಗಿದ್ದಾರೆ. ಮೈತ್ರಿಕೂಟದಲ್ಲಿದ್ದರೂ ವಿಧಾನಸಭೆಯ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಹೋರಾಟ ನಡೆಸಿವೆ. 2025ರ ಚುನಾವಣೆ ಇದಕ್ಕಿಂತ ಭಿನ್ನವಾಗಿರಲಿದೆಯಾ?</p><p>ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಾಗೂ ಜಾತಿ ಆಧಾರಿತ ಮೀಸಲಾತಿ ವಿಷಯಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. </p><p>ಚುನಾವಣೆ ಘೋಷಣೆಗೆ ಮುನ್ನ ಮೈತ್ರಿ ಸರ್ಕಾರವು ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಸುಶಾಸನ ಹಾಗೂ ಹಿಂದುತ್ವ ಪ್ರತಿಪಾದಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ನೆಚ್ಚಿಕೊಂಡಿದೆ. </p><p>2000ರಿಂದ ಈಚೆಗೆ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆ ಇಲ್ಲ. ಕಳೆದೆರಡು ದಶಕಗಳಿಂದ ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ‘ಕಿಂಗ್ ಮೇಕರ್’ ಆಗಿದ್ದಾರೆ. ಪದೇ ಪದೇ ಮೈತ್ರಿಕೂಟ ಬದಲಿಸಿದ್ದಾರೆ. ಮರೆಗುಳಿತನದಿಂದ ಬಳಲುತ್ತಿರುವ ಅವರು ಈ ಸಲ ನಿಸ್ತೇಜರಾಗಿರುವಂತೆ ತೋರುತ್ತಿದೆ. ಜತೆಗೆ, ಎನ್ಡಿಎ ಮಿತ್ರ ಪಕ್ಷದ ನಾಯಕರಾದ ಚಿರಾಗ್ ಪಾಸ್ವಾನ್ ಅವರು ನಿತೀಶ್ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ. ಈ ಚುನಾವಣೆಯಲ್ಲಿ ನಿತೀಶ್ ಅವರನ್ನು ಮತ್ತಷ್ಟು ದುರ್ಬಲಗೊಳಿಸಿ ರಾಜ್ಯ ರಾಜಕಾರಣದಲ್ಲಿ ಅವರನ್ನು ಅಪ್ರಸ್ತುತ ಗೊಳಿಸುವುದು ಅವರ ಕಾರ್ಯತಂತ್ರ. ಇದಕ್ಕೆ ಬಿಜೆಪಿ ನಾಯಕರ ಪರೋಕ್ಷ ಚಿತಾವಣೆಯೂ ಇದೆ. ಈ ಮೂಲಕ, ರಾಜ್ಯದಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮುವುದು ಕಮಲ ಪಾಳಯದ ಹಂಬಲ. 2020ರ ಚುನಾವಣೆಯಲ್ಲಿ ಮಿತ್ರರನ್ನು ನಿತೀಶ್ ವಿರುದ್ಧ ಎತ್ತಿ ಕಟ್ಟುವ ಮೂಲಕ ಬಿಜೆಪಿ ಭಾಗಶಃ ಯಶಸ್ಸು ಸಾಧಿಸಿತ್ತು. </p><p>ಇನ್ನೊಂದೆಡೆ, ಆರ್ಜೆಡಿ–ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ’ಮತ ಕಳವು’ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯನ್ನೇ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದೆ. ರಾಹುಲ್ ಗಾಂಧಿ–ತೇಜಸ್ವಿ ಯಾದವ್ ಜೋಡಿಯ ಮ್ಯಾಜಿಕ್ನಿಂದ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂಬುದು ಮೈತ್ರಿಕೂಟದ ನಾಯಕರ ವಿಶ್ವಾಸ. </p><p>ಮೈತ್ರಿಕೂಟವು ಶೇ 30ರಷ್ಟಿರುವ ಮುಸ್ಲಿಂ–ಯಾದವ ಮತದಾರರನ್ನು ನೆಚ್ಚಿಕೊಂಡಿದೆ. ಮಂಡಲ್– ಕಮಂಡಲ ಚಳವಳಿಯ ಬಳಿಕ ಪಕ್ಷವು ರಾಜ್ಯದಲ್ಲಿ ನಿಸ್ತೇಜಗೊಂಡಿತ್ತು. 2020ರ ಚುನಾವಣೆ ಯಲ್ಲಿ ಮೈತ್ರಿಕೂಟವು ಅಧಿಕಾರದಿಂದ ಗಾವುದ ದೂರ ಉಳಿಯಲು ಕಾಂಗ್ರೆಸ್ನ ಕಳಪೆ ಪ್ರದರ್ಶನವು ಪ್ರಮುಖ ಕಾರಣ. </p><p>ಈಚಿನ ವರ್ಷಗಳಲ್ಲಿ ಕಾಂಗ್ರೆಸ್ನ ರಾಜ್ಯ ಉಸ್ತುವಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಆಣತಿಯಂತೆ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಚುನಾವಣೆಗೆ ಆರು ತಿಂಗಳು ಇರುವಾಗ ಇಂತಹ ನಾಯಕರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಈ ಜಾಗಕ್ಕೆ ರಾಹುಲ್ ಗಾಂಧಿ ಆಪ್ತರನ್ನು ಕೂರಿಸಲಾಗಿದೆ. ರಾಹುಲ್ ಗಾಂಧಿ ನಡೆಸಿದ ಮತ ಅಧಿಕಾರ ಯಾತ್ರೆಯು ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕಾರ್ಯಕರ್ತರಲ್ಲಿ ಕಸುವು ತುಂಬಿದೆ.</p><p>ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ಹಾಗೂ ಎರಡನೇ ಹಂತದಲ್ಲಿ 122 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.</p>.<p>ವೇಳಾಪಟ್ಟಿಯ ಘೋಷಣೆಯ ಬೆನ್ನಲ್ಲೇ, ಎನ್ಡಿಎ ಮತ್ತು ಇಂಡಿಯಾ ಬಣದಲ್ಲಿ ಸೀಟು ಹಂಚಿಕೆ ಮಾತುಕತೆಗೆ ವೇಗ ದೊರಕಿದೆ. ಸಿಪಿಐಎಂಎಲ್ (ಎಲ್), ವಿಐಪಿ, ಎಲ್ಜೆಪಿ (ಆರ್ವಿ) ಹಾಗೂ ಎಚ್ಎಎಂನಂತಹ ಸಣ್ಣ ಪಕ್ಷಗಳು ಮೈತ್ರಿಕೂಟದ ನಾಯಕರೊಂದಿಗೆ ತೀವ್ರ ಚೌಕಾಶಿಯಲ್ಲಿ ತೊಡಗಿವೆ.</p>.<p>ಚುನಾವಣಾ ಆಯೋಗವು ನಡೆಸಿದ ವಿವಾದಾತ್ಮಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್ಐಆರ್) ರಾಜ್ಯದಲ್ಲಿ ಮತದಾರರ ಸಂಖ್ಯೆಯನ್ನು 7.49 ಕೋಟಿಯಿಂದ 7.43 ಕೋಟಿಗೆ ಇಳಿಸಿದೆ. ಈ ಚುನಾವಣೆಯು ಬಿಜೆಪಿ ಅಂತಿಮವಾಗಿ ಜೆಡಿಯು ನೆರಳಿನಿಂದ ಹೊರಬರುತ್ತದೆಯೇ ಎಂಬುದನ್ನು ಸಹ ನಿರ್ಧರಿಸಲಿದೆ. </p>.<p>ಚುನಾವಣಾ ತಂತ್ರಜ್ಞ-ರಾಜಕಾರಣಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ಸಾಮರ್ಥ್ಯವನ್ನು ಚುನಾವಣೆ ಪರೀಕ್ಷಿಸಲಿದೆ. ಮುಂದಿನ ದಿನಗಳಲ್ಲಿ, ನಿತೀಶ್ ಅವರ ಮಗ ನಿಶಾಂತ್ ಚುನಾವಣಾ ಕಣಕ್ಕೆ ಇಳಿಯುತ್ತಾರೆಯೇ ಎಂಬುದೂ ಗೊತ್ತಾಗಲಿದೆ. </p>.<p>243 ಸದಸ್ಯ ಬಲದ ರಾಜ್ಯ ವಿಧಾನಸಭೆಯ ಅವಧಿ ನವೆಂಬರ್ 22ರಂದು ಕೊನೆಗೊಳ್ಳಲಿದೆ. ಇದೇ ಮೊದಲ ಬಾರಿಗೆ ಪ್ರತಿ ಕ್ಷೇತ್ರಕ್ಕೆ ಐಎಎಸ್ ಅಧಿಕಾರಿಯನ್ನು ಸಾಮಾನ್ಯ ವೀಕ್ಷಕರನ್ನಾಗಿ ನಿಯೋಜಿಸಲಾಗುತ್ತಿದೆ ಎಂದು ಜ್ಞಾನೇಶ್ ಕುಮಾರ್ ತಿಳಿಸಿದರು. </p>.<p>ಉತ್ತರ ನೀಡದ ಆಯುಕ್ತ: ಎಸ್ಐಆರ್ ನಂತರ ಮತದಾರರ ಪಟ್ಟಿಯಿಂದ ಕಿತ್ತು ಹಾಕಿದ ಅಕ್ರಮ ವಲಸಿಗರ ಸಂಖ್ಯೆಯನ್ನು ಜ್ಞಾನೇಶ್ ಕುಮಾರ್ ಸೋಮವಾರ ನೀಡಲಿಲ್ಲ. ‘ಇದನ್ನು ವಿಕೇಂದ್ರೀಕೃತ ರೀತಿಯಲ್ಲಿ ನಿರ್ವಹಿಸಲಾಗಿದೆ ಮತ್ತು ವಿಧಾನಸಭೆ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಲಭ್ಯವಿದೆ‘ ಎಂದು ಹೇಳಿದರು. </p>.<p>ಚುನಾವಣೆಯ ವೇಳಾಪಟ್ಟಿ ಘೋಷಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮೂವರು ಪತ್ರಕರ್ತರು ಈ ಅಂಕಿಅಂಶಗಳನ್ನು ಕೋರಿದ್ದರು. ಆದರೆ, ಕುಮಾರ್ ಅದಕ್ಕೆ ನೇರವಾಗಿ ಪ್ರತಿಕ್ರಿಯಿಸಲಿಲ್ಲ. ಆಗಸ್ಟ್ 17ರಂದು ನಡೆದ ಪತ್ರಿಕಾಗೋಷ್ಠಿಯಲ್ಲೂ ಕುಮಾರ್ ಅವರು ಈ ಬಗ್ಗೆ ವಿವರ ನೀಡಿರಲಿಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬಿಹಾರ ಚುನಾವಣೆಯಲ್ಲಿ ಕಳೆದ ಎರಡು ದಶಕಗಳಲ್ಲಿ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಈ ಅವಧಿಯಲ್ಲಿ ಮಿತ್ರರು ಶತ್ರುಗಳಾಗಿದ್ದಾರೆ, ಶತ್ರುಗಳು ಮಿತ್ರರಾಗಿದ್ದಾರೆ. ಮೈತ್ರಿಕೂಟದಲ್ಲಿದ್ದರೂ ವಿಧಾನಸಭೆಯ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಹೋರಾಟ ನಡೆಸಿವೆ. 2025ರ ಚುನಾವಣೆ ಇದಕ್ಕಿಂತ ಭಿನ್ನವಾಗಿರಲಿದೆಯಾ?</p><p>ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಾಗೂ ಜಾತಿ ಆಧಾರಿತ ಮೀಸಲಾತಿ ವಿಷಯಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. </p><p>ಚುನಾವಣೆ ಘೋಷಣೆಗೆ ಮುನ್ನ ಮೈತ್ರಿ ಸರ್ಕಾರವು ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಸುಶಾಸನ ಹಾಗೂ ಹಿಂದುತ್ವ ಪ್ರತಿಪಾದಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ನೆಚ್ಚಿಕೊಂಡಿದೆ. </p><p>2000ರಿಂದ ಈಚೆಗೆ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆ ಇಲ್ಲ. ಕಳೆದೆರಡು ದಶಕಗಳಿಂದ ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ‘ಕಿಂಗ್ ಮೇಕರ್’ ಆಗಿದ್ದಾರೆ. ಪದೇ ಪದೇ ಮೈತ್ರಿಕೂಟ ಬದಲಿಸಿದ್ದಾರೆ. ಮರೆಗುಳಿತನದಿಂದ ಬಳಲುತ್ತಿರುವ ಅವರು ಈ ಸಲ ನಿಸ್ತೇಜರಾಗಿರುವಂತೆ ತೋರುತ್ತಿದೆ. ಜತೆಗೆ, ಎನ್ಡಿಎ ಮಿತ್ರ ಪಕ್ಷದ ನಾಯಕರಾದ ಚಿರಾಗ್ ಪಾಸ್ವಾನ್ ಅವರು ನಿತೀಶ್ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ. ಈ ಚುನಾವಣೆಯಲ್ಲಿ ನಿತೀಶ್ ಅವರನ್ನು ಮತ್ತಷ್ಟು ದುರ್ಬಲಗೊಳಿಸಿ ರಾಜ್ಯ ರಾಜಕಾರಣದಲ್ಲಿ ಅವರನ್ನು ಅಪ್ರಸ್ತುತ ಗೊಳಿಸುವುದು ಅವರ ಕಾರ್ಯತಂತ್ರ. ಇದಕ್ಕೆ ಬಿಜೆಪಿ ನಾಯಕರ ಪರೋಕ್ಷ ಚಿತಾವಣೆಯೂ ಇದೆ. ಈ ಮೂಲಕ, ರಾಜ್ಯದಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮುವುದು ಕಮಲ ಪಾಳಯದ ಹಂಬಲ. 2020ರ ಚುನಾವಣೆಯಲ್ಲಿ ಮಿತ್ರರನ್ನು ನಿತೀಶ್ ವಿರುದ್ಧ ಎತ್ತಿ ಕಟ್ಟುವ ಮೂಲಕ ಬಿಜೆಪಿ ಭಾಗಶಃ ಯಶಸ್ಸು ಸಾಧಿಸಿತ್ತು. </p><p>ಇನ್ನೊಂದೆಡೆ, ಆರ್ಜೆಡಿ–ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ’ಮತ ಕಳವು’ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯನ್ನೇ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದೆ. ರಾಹುಲ್ ಗಾಂಧಿ–ತೇಜಸ್ವಿ ಯಾದವ್ ಜೋಡಿಯ ಮ್ಯಾಜಿಕ್ನಿಂದ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂಬುದು ಮೈತ್ರಿಕೂಟದ ನಾಯಕರ ವಿಶ್ವಾಸ. </p><p>ಮೈತ್ರಿಕೂಟವು ಶೇ 30ರಷ್ಟಿರುವ ಮುಸ್ಲಿಂ–ಯಾದವ ಮತದಾರರನ್ನು ನೆಚ್ಚಿಕೊಂಡಿದೆ. ಮಂಡಲ್– ಕಮಂಡಲ ಚಳವಳಿಯ ಬಳಿಕ ಪಕ್ಷವು ರಾಜ್ಯದಲ್ಲಿ ನಿಸ್ತೇಜಗೊಂಡಿತ್ತು. 2020ರ ಚುನಾವಣೆ ಯಲ್ಲಿ ಮೈತ್ರಿಕೂಟವು ಅಧಿಕಾರದಿಂದ ಗಾವುದ ದೂರ ಉಳಿಯಲು ಕಾಂಗ್ರೆಸ್ನ ಕಳಪೆ ಪ್ರದರ್ಶನವು ಪ್ರಮುಖ ಕಾರಣ. </p><p>ಈಚಿನ ವರ್ಷಗಳಲ್ಲಿ ಕಾಂಗ್ರೆಸ್ನ ರಾಜ್ಯ ಉಸ್ತುವಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಆಣತಿಯಂತೆ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಚುನಾವಣೆಗೆ ಆರು ತಿಂಗಳು ಇರುವಾಗ ಇಂತಹ ನಾಯಕರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಈ ಜಾಗಕ್ಕೆ ರಾಹುಲ್ ಗಾಂಧಿ ಆಪ್ತರನ್ನು ಕೂರಿಸಲಾಗಿದೆ. ರಾಹುಲ್ ಗಾಂಧಿ ನಡೆಸಿದ ಮತ ಅಧಿಕಾರ ಯಾತ್ರೆಯು ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕಾರ್ಯಕರ್ತರಲ್ಲಿ ಕಸುವು ತುಂಬಿದೆ.</p><p>ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ಹಾಗೂ ಎರಡನೇ ಹಂತದಲ್ಲಿ 122 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.</p>.<p>ವೇಳಾಪಟ್ಟಿಯ ಘೋಷಣೆಯ ಬೆನ್ನಲ್ಲೇ, ಎನ್ಡಿಎ ಮತ್ತು ಇಂಡಿಯಾ ಬಣದಲ್ಲಿ ಸೀಟು ಹಂಚಿಕೆ ಮಾತುಕತೆಗೆ ವೇಗ ದೊರಕಿದೆ. ಸಿಪಿಐಎಂಎಲ್ (ಎಲ್), ವಿಐಪಿ, ಎಲ್ಜೆಪಿ (ಆರ್ವಿ) ಹಾಗೂ ಎಚ್ಎಎಂನಂತಹ ಸಣ್ಣ ಪಕ್ಷಗಳು ಮೈತ್ರಿಕೂಟದ ನಾಯಕರೊಂದಿಗೆ ತೀವ್ರ ಚೌಕಾಶಿಯಲ್ಲಿ ತೊಡಗಿವೆ.</p>.<p>ಚುನಾವಣಾ ಆಯೋಗವು ನಡೆಸಿದ ವಿವಾದಾತ್ಮಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್ಐಆರ್) ರಾಜ್ಯದಲ್ಲಿ ಮತದಾರರ ಸಂಖ್ಯೆಯನ್ನು 7.49 ಕೋಟಿಯಿಂದ 7.43 ಕೋಟಿಗೆ ಇಳಿಸಿದೆ. ಈ ಚುನಾವಣೆಯು ಬಿಜೆಪಿ ಅಂತಿಮವಾಗಿ ಜೆಡಿಯು ನೆರಳಿನಿಂದ ಹೊರಬರುತ್ತದೆಯೇ ಎಂಬುದನ್ನು ಸಹ ನಿರ್ಧರಿಸಲಿದೆ. </p>.<p>ಚುನಾವಣಾ ತಂತ್ರಜ್ಞ-ರಾಜಕಾರಣಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ಸಾಮರ್ಥ್ಯವನ್ನು ಚುನಾವಣೆ ಪರೀಕ್ಷಿಸಲಿದೆ. ಮುಂದಿನ ದಿನಗಳಲ್ಲಿ, ನಿತೀಶ್ ಅವರ ಮಗ ನಿಶಾಂತ್ ಚುನಾವಣಾ ಕಣಕ್ಕೆ ಇಳಿಯುತ್ತಾರೆಯೇ ಎಂಬುದೂ ಗೊತ್ತಾಗಲಿದೆ. </p>.<p>243 ಸದಸ್ಯ ಬಲದ ರಾಜ್ಯ ವಿಧಾನಸಭೆಯ ಅವಧಿ ನವೆಂಬರ್ 22ರಂದು ಕೊನೆಗೊಳ್ಳಲಿದೆ. ಇದೇ ಮೊದಲ ಬಾರಿಗೆ ಪ್ರತಿ ಕ್ಷೇತ್ರಕ್ಕೆ ಐಎಎಸ್ ಅಧಿಕಾರಿಯನ್ನು ಸಾಮಾನ್ಯ ವೀಕ್ಷಕರನ್ನಾಗಿ ನಿಯೋಜಿಸಲಾಗುತ್ತಿದೆ ಎಂದು ಜ್ಞಾನೇಶ್ ಕುಮಾರ್ ತಿಳಿಸಿದರು. </p>.<p>ಉತ್ತರ ನೀಡದ ಆಯುಕ್ತ: ಎಸ್ಐಆರ್ ನಂತರ ಮತದಾರರ ಪಟ್ಟಿಯಿಂದ ಕಿತ್ತು ಹಾಕಿದ ಅಕ್ರಮ ವಲಸಿಗರ ಸಂಖ್ಯೆಯನ್ನು ಜ್ಞಾನೇಶ್ ಕುಮಾರ್ ಸೋಮವಾರ ನೀಡಲಿಲ್ಲ. ‘ಇದನ್ನು ವಿಕೇಂದ್ರೀಕೃತ ರೀತಿಯಲ್ಲಿ ನಿರ್ವಹಿಸಲಾಗಿದೆ ಮತ್ತು ವಿಧಾನಸಭೆ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಲಭ್ಯವಿದೆ‘ ಎಂದು ಹೇಳಿದರು. </p>.<p>ಚುನಾವಣೆಯ ವೇಳಾಪಟ್ಟಿ ಘೋಷಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮೂವರು ಪತ್ರಕರ್ತರು ಈ ಅಂಕಿಅಂಶಗಳನ್ನು ಕೋರಿದ್ದರು. ಆದರೆ, ಕುಮಾರ್ ಅದಕ್ಕೆ ನೇರವಾಗಿ ಪ್ರತಿಕ್ರಿಯಿಸಲಿಲ್ಲ. ಆಗಸ್ಟ್ 17ರಂದು ನಡೆದ ಪತ್ರಿಕಾಗೋಷ್ಠಿಯಲ್ಲೂ ಕುಮಾರ್ ಅವರು ಈ ಬಗ್ಗೆ ವಿವರ ನೀಡಿರಲಿಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>