ನವದೆಹಲಿ: ಶ್ರೀ ರಾಮ ಏನಾದರೂ ಈಗ ಇದ್ದಿದ್ದರೆ ಬಿಜೆಪಿಯವರು ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಸಿಬಿಐ ಅನ್ನು ಅವನ ಮನೆಗೆ ಕಳುಹಿಸಿ, ಹಣೆಗೆ ಬಂದೂಕು ಇಟ್ಟು, ನೀನು ಬಿಜೆಪಿಗೆ ಸೇರುತ್ತಿಯಾ ಇಲ್ಲ ಜೈಲಿಗೆ ಹೋಗುತ್ತೀಯಾ ಎಂಬುದಾಗಿ ಪ್ರಶ್ನಿಸುತ್ತಿದ್ದರು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.