<p><strong>ಗುವಾಹಟಿ:</strong> ಪಶ್ಚಿಮ ಅಸ್ಸಾಂನ ಬೊಡೊಲ್ಯಾಂಡ್ ಪ್ರಾಂತ್ಯದ (ಬಿಟಿಆರ್) ಕೋಕ್ರಾಝಾರ್ ಸಮೀಪದಲ್ಲಿರುವ ರೈಲ್ವೆ ಹಳಿಯ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್ (ಐಇಡಿ) ಸ್ಫೋಟಿಸಿರುವ ಘಟನೆ ಗುರುವಾರ ನಡೆದಿದೆ.</p>.<p>ಇದರಿಂದಾಗಿ ನಾಲ್ಕು ಗಂಟೆಗಳ ಕಾಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಎಂಟು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು.</p>.<p>ಈಶಾನ್ಯ ಗಡಿನಾಡು ರೈಲ್ವೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋಕ್ರಾಝಾರ್ ಮಾರ್ಗವಾಗಿ ತೆರಳುತ್ತಿದ್ದ ಸರಕು ಸಾಗಣೆ ರೈಲು ಜರ್ಕ್ನಿಂದಾಗಿ ತಡರಾತ್ರಿ 1 ಗಂಟೆ ಸಮಯಕ್ಕೆ ನಿಲ್ಲುವಂತಾಗಿತ್ತು. ಬಳಿಕ ಪರಿಶೀಲಿಸಿದಾಗ ರೈಲ್ವೆ ಹಳಿಗಳ ಮೇಲೆ ಕಚ್ಚಾ ಬಾಂಸ್ ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ. </p>.<p>ಸ್ಫೋಟದಿಂದ ಹಳಿಗಳು ಹಾನಿಗೀಡಾಗಿದ್ದು, ಬೆಳಿಗಿನ ಜಾವ 5.25ಕ್ಕೆ ಅವುಗಳನ್ನು ಸರಿಪಡಿಸಿ, ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪ್ರಕರಣದ ತನಿಖೆಯನ್ನು ಆರ್ಪಿಎಫ್ ಮತ್ತು ಗುಪ್ತಚರ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದೂ ತಿಳಿಸಿದ್ದಾರೆ. </p>.<p>ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಘಟನೆಯನ್ನು ಖಂಡಿಸಿದ್ದಾರೆ. ಜತೆಗೆ ದಾಳಿಯ ಹಿಂದಿರುವ ಶಂಕಿತ ವ್ಯಕ್ತಿಯನ್ನು ಗುರುತಿಸಲಾಗಿದೆ ಆತನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.</p>.<h2>ಹಿಂಸಾಚಾರದ ಭೀತಿ:</h2>.<p>ಬೊಡೊಲ್ಯಾಂಡ್ ಪ್ರಾಂತ್ಯದಲ್ಲಿ ಆಗಾಗ ನಡೆಯುತ್ತಲೇ ಇದ್ದ ಸಂಘರ್ಷಕ್ಕೆ 2020ರಲ್ಲಿ ಹೊಸದಾಗಿ ಬೊಡೊಲ್ಯಾಂಡ್ ಮಂಡಳಿ ಸೃಷ್ಟಿಸುವ ಮೂಲಕ ಅಂತ್ಯ ಹಾಡಲಾಗಿತ್ತು.</p>.<p>ಪ್ರದೇಶದಲ್ಲಿನ ಬಂಡುಕೋರರು ಕೂಡ ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದರು. ಆದರೆ, ಇದೀಗ ಗುರುವಾರ ನಡೆದಿರುವ ಸ್ಫೋಟವು ಬಿಟಿಆರ್ನಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡುವುದೇ ಎಂಬ ಭೀತಿ ಶುರುವಾಗಿದೆ.</p>.<p>ಈ ಕೃತ್ಯದ ಮೂಲಕ ಪ್ರಾಂತ್ಯದ ಶಾಂತಿ ಕದಡಲು ಯತ್ನಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪಕ್ಷಗಳು ಆಗ್ರಹಿಸಿವೆ.</p>
<p><strong>ಗುವಾಹಟಿ:</strong> ಪಶ್ಚಿಮ ಅಸ್ಸಾಂನ ಬೊಡೊಲ್ಯಾಂಡ್ ಪ್ರಾಂತ್ಯದ (ಬಿಟಿಆರ್) ಕೋಕ್ರಾಝಾರ್ ಸಮೀಪದಲ್ಲಿರುವ ರೈಲ್ವೆ ಹಳಿಯ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್ (ಐಇಡಿ) ಸ್ಫೋಟಿಸಿರುವ ಘಟನೆ ಗುರುವಾರ ನಡೆದಿದೆ.</p>.<p>ಇದರಿಂದಾಗಿ ನಾಲ್ಕು ಗಂಟೆಗಳ ಕಾಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಎಂಟು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು.</p>.<p>ಈಶಾನ್ಯ ಗಡಿನಾಡು ರೈಲ್ವೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋಕ್ರಾಝಾರ್ ಮಾರ್ಗವಾಗಿ ತೆರಳುತ್ತಿದ್ದ ಸರಕು ಸಾಗಣೆ ರೈಲು ಜರ್ಕ್ನಿಂದಾಗಿ ತಡರಾತ್ರಿ 1 ಗಂಟೆ ಸಮಯಕ್ಕೆ ನಿಲ್ಲುವಂತಾಗಿತ್ತು. ಬಳಿಕ ಪರಿಶೀಲಿಸಿದಾಗ ರೈಲ್ವೆ ಹಳಿಗಳ ಮೇಲೆ ಕಚ್ಚಾ ಬಾಂಸ್ ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ. </p>.<p>ಸ್ಫೋಟದಿಂದ ಹಳಿಗಳು ಹಾನಿಗೀಡಾಗಿದ್ದು, ಬೆಳಿಗಿನ ಜಾವ 5.25ಕ್ಕೆ ಅವುಗಳನ್ನು ಸರಿಪಡಿಸಿ, ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪ್ರಕರಣದ ತನಿಖೆಯನ್ನು ಆರ್ಪಿಎಫ್ ಮತ್ತು ಗುಪ್ತಚರ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದೂ ತಿಳಿಸಿದ್ದಾರೆ. </p>.<p>ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಘಟನೆಯನ್ನು ಖಂಡಿಸಿದ್ದಾರೆ. ಜತೆಗೆ ದಾಳಿಯ ಹಿಂದಿರುವ ಶಂಕಿತ ವ್ಯಕ್ತಿಯನ್ನು ಗುರುತಿಸಲಾಗಿದೆ ಆತನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.</p>.<h2>ಹಿಂಸಾಚಾರದ ಭೀತಿ:</h2>.<p>ಬೊಡೊಲ್ಯಾಂಡ್ ಪ್ರಾಂತ್ಯದಲ್ಲಿ ಆಗಾಗ ನಡೆಯುತ್ತಲೇ ಇದ್ದ ಸಂಘರ್ಷಕ್ಕೆ 2020ರಲ್ಲಿ ಹೊಸದಾಗಿ ಬೊಡೊಲ್ಯಾಂಡ್ ಮಂಡಳಿ ಸೃಷ್ಟಿಸುವ ಮೂಲಕ ಅಂತ್ಯ ಹಾಡಲಾಗಿತ್ತು.</p>.<p>ಪ್ರದೇಶದಲ್ಲಿನ ಬಂಡುಕೋರರು ಕೂಡ ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದರು. ಆದರೆ, ಇದೀಗ ಗುರುವಾರ ನಡೆದಿರುವ ಸ್ಫೋಟವು ಬಿಟಿಆರ್ನಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡುವುದೇ ಎಂಬ ಭೀತಿ ಶುರುವಾಗಿದೆ.</p>.<p>ಈ ಕೃತ್ಯದ ಮೂಲಕ ಪ್ರಾಂತ್ಯದ ಶಾಂತಿ ಕದಡಲು ಯತ್ನಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪಕ್ಷಗಳು ಆಗ್ರಹಿಸಿವೆ.</p>