<p><strong>ಚಂಡೀಗಢ</strong>: ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯಡಿ ಸೇರಿಸಿ, ಅಲ್ಲಿಗೆ ರಾಷ್ಟ್ರಪತಿಯವರ ಮೂಲಕ ಪ್ರತ್ಯೇಕ ಆಡಳಿತಾಧಿಕಾರಿಯನ್ನು ನೇಮಿಸುವ ಮಸೂದೆ ಜಾರಿಗೆ ತರುವ ಎನ್ಡಿಎ ಪ್ರಸ್ತಾವಕ್ಕೆ ಆಡಳಿತಾರೂಢ ಎಎಪಿ, ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ (ಎಸ್ಎಡಿ) ತೀವ್ರ ವಿರೋಧ ವ್ಯಕ್ತಪಡಿಸಿವೆ.</p>.<p>ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಚಂಡೀಗಢ ರಾಜಧಾನಿಯಾಗಿದೆ. ‘ಪಂಜಾಬ್ನ ಅವಿಭಾಜ್ಯ ಅಂಗವಾದ ಚಂಡೀಗಢವನ್ನು ಕಿತ್ತು ಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ’ ವಿರೋಧ ಪಕ್ಷಗಳು ಆರೋಪಿಸಿವೆ. </p>.<p>ಡಿಸೆಂಬರ್ 1ರಿಂದ ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರವು ಸಂವಿಧಾನದ (131ನೇ ತಿದ್ದುಪಡಿ) ಮಸೂದೆ –2025 ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಲೋಕಸಭೆ ಮತ್ತು ರಾಜ್ಯಸಭೆಯು ಪ್ರಕಟಣೆಯಲ್ಲಿ ತಿಳಿಸಿದೆ. </p>.<p>ಸದ್ಯ ಚಂಡೀಗಢದಲ್ಲಿ ಪಂಜಾಬ್ ರಾಜ್ಯಪಾಲರೇ ಆಡಳಿತ ನಡೆಸುತ್ತಿದ್ದಾರೆ. ಪ್ರಸ್ತಾವಿತ ಮಸೂದೆಗೆ ಅನುಮೋದನೆ ಲಭಿಸಿದರೆ ಚಂಡೀಗಢಕ್ಕೆ ಈ ಹಿಂದೆ ಸ್ವತಂತ್ರ ಮುಖ್ಯ ಕಾರ್ಯದರ್ಶಿ ಇದ್ದಂತೆ ಸ್ವತಂತ್ರ ಆಡಳಿತಗಾರ ನೇಮಕಗೊಳ್ಳುತ್ತಾರೆ. ಪಂಜಾಬ್ ಹಾಗೂ ಹರಿಯಾಣದ ಜಂಟಿ ರಾಜಧಾನಿಯಾಗಿ ಚಂಡೀಗಢ ಮುಂದೆಯೂ ಕಾರ್ಯನಿರ್ವಹಿಸಲಿದೆ.</p>.<p>1966ರಲ್ಲಿ ಪಂಜಾಬ್ ಪುನರ್ ವಿಂಗಡಣೆಯಾದ ಬಳಿಕ ಚಂಡೀಗಢದಲ್ಲಿ ಮುಖ್ಯ ಕಾರ್ಯದರ್ಶಿ ಸ್ವತಂತ್ರವಾಗಿ ಆಡಳಿತ ನಡೆಸುತ್ತಿದ್ದರು. 1984ರ ಜೂನ್ 1ರಿಂದ ಅಲ್ಲಿ ಪಂಜಾಬ್ನ ರಾಜ್ಯಪಾಲರು ಆಡಳಿತ ನಡೆಸುತ್ತಿದ್ದಾರೆ. ರಾಜ್ಯಪಾಲರ ಆಡಳಿತದ ನಂತರ ಮುಖ್ಯ ಕಾರ್ಯದರ್ಶಿಯ ಹುದ್ದೆಯನ್ನು ಚಂಡೀಗಢದ ಆಡಳಿತಾಧಿಕಾರಿಯ ಸಲಹೆಗಾರ ಹುದ್ದೆಯಾಗಿ ಪರಿವರ್ತಿಸಲಾಗಿದೆ.</p>.<p>2016ರಲ್ಲಿ ಚಂಡೀಗಢಕ್ಕೆ ಮಾಜಿ ಐಎಎಸ್ ಅಧಿಕಾರಿ ಕೆ.ಜೆ. ಅಲ್ಫೋನ್ಸ್ ಅವರನ್ನು ನೇಮಿಸುವ ಮೂಲಕ ಕೇಂದ್ರ ಸರ್ಕಾರವು, ಸ್ವತಂತ್ರ ಆಡಳಿತಾಧಿಕಾರಿ ನೇಮಿಸುವ ಹಳೆಯ ಪದ್ಧತಿಯನ್ನೇ ಮರು ಸ್ಥಾಪಿಸಲು ಪ್ರಯತ್ನಿಸಿತು. ಆದರೆ, ಆಗಿನ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ತೀವ್ರ ವಿರೋಧದಿಂದ ಈ ನೇಮಕವನ್ನು ವಾಪಸ್ ಪಡೆಯಲಾಗಿತ್ತು. </p>.<p>‘ಚಂಡೀಗಢದ ಸಮಸ್ಯೆ ಇರಬಹುದು ಅಥವಾ ಪಂಜಾಬ್ನ ನೀರಿನ ಸಮಸ್ಯೆ ಇರಬಹುದು ಬಿಜೆಪಿಯು ಪಂಜಾಬ್ ಜನರ ಹಿತಾಸಕ್ತಿಯ ಪರವಾಗಿ ನಿಲ್ಲಲಿದೆ’ ಎಂದು ಪಂಜಾಬ್ನ ಬಿಜೆಪಿ ಮುಖಂಡ ಸುನಿಲ್ ಜಾಖಡ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ</strong>: ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯಡಿ ಸೇರಿಸಿ, ಅಲ್ಲಿಗೆ ರಾಷ್ಟ್ರಪತಿಯವರ ಮೂಲಕ ಪ್ರತ್ಯೇಕ ಆಡಳಿತಾಧಿಕಾರಿಯನ್ನು ನೇಮಿಸುವ ಮಸೂದೆ ಜಾರಿಗೆ ತರುವ ಎನ್ಡಿಎ ಪ್ರಸ್ತಾವಕ್ಕೆ ಆಡಳಿತಾರೂಢ ಎಎಪಿ, ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ (ಎಸ್ಎಡಿ) ತೀವ್ರ ವಿರೋಧ ವ್ಯಕ್ತಪಡಿಸಿವೆ.</p>.<p>ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಚಂಡೀಗಢ ರಾಜಧಾನಿಯಾಗಿದೆ. ‘ಪಂಜಾಬ್ನ ಅವಿಭಾಜ್ಯ ಅಂಗವಾದ ಚಂಡೀಗಢವನ್ನು ಕಿತ್ತು ಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ’ ವಿರೋಧ ಪಕ್ಷಗಳು ಆರೋಪಿಸಿವೆ. </p>.<p>ಡಿಸೆಂಬರ್ 1ರಿಂದ ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರವು ಸಂವಿಧಾನದ (131ನೇ ತಿದ್ದುಪಡಿ) ಮಸೂದೆ –2025 ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಲೋಕಸಭೆ ಮತ್ತು ರಾಜ್ಯಸಭೆಯು ಪ್ರಕಟಣೆಯಲ್ಲಿ ತಿಳಿಸಿದೆ. </p>.<p>ಸದ್ಯ ಚಂಡೀಗಢದಲ್ಲಿ ಪಂಜಾಬ್ ರಾಜ್ಯಪಾಲರೇ ಆಡಳಿತ ನಡೆಸುತ್ತಿದ್ದಾರೆ. ಪ್ರಸ್ತಾವಿತ ಮಸೂದೆಗೆ ಅನುಮೋದನೆ ಲಭಿಸಿದರೆ ಚಂಡೀಗಢಕ್ಕೆ ಈ ಹಿಂದೆ ಸ್ವತಂತ್ರ ಮುಖ್ಯ ಕಾರ್ಯದರ್ಶಿ ಇದ್ದಂತೆ ಸ್ವತಂತ್ರ ಆಡಳಿತಗಾರ ನೇಮಕಗೊಳ್ಳುತ್ತಾರೆ. ಪಂಜಾಬ್ ಹಾಗೂ ಹರಿಯಾಣದ ಜಂಟಿ ರಾಜಧಾನಿಯಾಗಿ ಚಂಡೀಗಢ ಮುಂದೆಯೂ ಕಾರ್ಯನಿರ್ವಹಿಸಲಿದೆ.</p>.<p>1966ರಲ್ಲಿ ಪಂಜಾಬ್ ಪುನರ್ ವಿಂಗಡಣೆಯಾದ ಬಳಿಕ ಚಂಡೀಗಢದಲ್ಲಿ ಮುಖ್ಯ ಕಾರ್ಯದರ್ಶಿ ಸ್ವತಂತ್ರವಾಗಿ ಆಡಳಿತ ನಡೆಸುತ್ತಿದ್ದರು. 1984ರ ಜೂನ್ 1ರಿಂದ ಅಲ್ಲಿ ಪಂಜಾಬ್ನ ರಾಜ್ಯಪಾಲರು ಆಡಳಿತ ನಡೆಸುತ್ತಿದ್ದಾರೆ. ರಾಜ್ಯಪಾಲರ ಆಡಳಿತದ ನಂತರ ಮುಖ್ಯ ಕಾರ್ಯದರ್ಶಿಯ ಹುದ್ದೆಯನ್ನು ಚಂಡೀಗಢದ ಆಡಳಿತಾಧಿಕಾರಿಯ ಸಲಹೆಗಾರ ಹುದ್ದೆಯಾಗಿ ಪರಿವರ್ತಿಸಲಾಗಿದೆ.</p>.<p>2016ರಲ್ಲಿ ಚಂಡೀಗಢಕ್ಕೆ ಮಾಜಿ ಐಎಎಸ್ ಅಧಿಕಾರಿ ಕೆ.ಜೆ. ಅಲ್ಫೋನ್ಸ್ ಅವರನ್ನು ನೇಮಿಸುವ ಮೂಲಕ ಕೇಂದ್ರ ಸರ್ಕಾರವು, ಸ್ವತಂತ್ರ ಆಡಳಿತಾಧಿಕಾರಿ ನೇಮಿಸುವ ಹಳೆಯ ಪದ್ಧತಿಯನ್ನೇ ಮರು ಸ್ಥಾಪಿಸಲು ಪ್ರಯತ್ನಿಸಿತು. ಆದರೆ, ಆಗಿನ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ತೀವ್ರ ವಿರೋಧದಿಂದ ಈ ನೇಮಕವನ್ನು ವಾಪಸ್ ಪಡೆಯಲಾಗಿತ್ತು. </p>.<p>‘ಚಂಡೀಗಢದ ಸಮಸ್ಯೆ ಇರಬಹುದು ಅಥವಾ ಪಂಜಾಬ್ನ ನೀರಿನ ಸಮಸ್ಯೆ ಇರಬಹುದು ಬಿಜೆಪಿಯು ಪಂಜಾಬ್ ಜನರ ಹಿತಾಸಕ್ತಿಯ ಪರವಾಗಿ ನಿಲ್ಲಲಿದೆ’ ಎಂದು ಪಂಜಾಬ್ನ ಬಿಜೆಪಿ ಮುಖಂಡ ಸುನಿಲ್ ಜಾಖಡ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>