ಸಂವಿಧಾನ ರಚನೆಯಲ್ಲಿ ರಾಜೇಂದ್ರ ಪ್ರಸಾದ್ ಮತ್ತು ಬಿ.ಆರ್. ಅಂಬೇಡ್ಕರ್ ಹಾಗೂ ಹಲವರ ಕೊಡುಗೆ ಅನನ್ಯ. ಅದರಂತೆಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಲ್ಲಭಾಬಾಯಿ ಪಟೇಲ್, ಬಿರ್ಸಾ ಮುಂಡಾ ಮತ್ತು ಮಹಾತ್ಮಾ ಗಾಂಧಿ ಅವರ ನಾಯಕತ್ವ ಮಹತ್ವದ್ದು.
ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಸರ್ದಾರ್ ಪಟೇಲ್ ಅವರ ದೂರದೃಷ್ಟಿಯ ನಾಯಕತ್ವವು ಭಾರತದ ರಾಜಕೀಯ ಏಕೀಕರಣವನ್ನು ಖಚಿತಪಡಿಸಿತು. ಅವರ ಸ್ಫೂರ್ತಿ ಮತ್ತು ಧೈರ್ಯವೇ 370 ವಿಧಿ ಮತ್ತು 35 (ಎ) ವಿರುದ್ಧ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು. ಅದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸಂವಿಧಾನ ಸಂಪೂರ್ಣವಾಗಿ ಅನುಷ್ಠಾನಗೊಂಡಿದೆ. ಮಹಿಳೆಯರು ಮತ್ತು ತುಳಿತಕ್ಕೊಳಗಾದವರನ್ನೂ ಒಳಗೊಂಡು ಅಲ್ಲಿನ ಜನರಿಗೆ ಸಂವಿಧಾನದ ಎಲ್ಲಾ ಹಕ್ಕುಗಳು ದೊರೆತಿವೆ.